Tirupati: ಭಕ್ತರಿಗೆ ಗುಡ್ನ್ಯೂಸ್, ಕರ್ನಾಟಕದ 1000 ಮಂದಿಗೆ ನಿತ್ಯ ದರ್ಶನ ವ್ಯವಸ್ಥೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 07: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ತೆರಳುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರ್ನಾಟಕದಿಂದಲೂ ತೆರಳುವ ಭಕ್ತಗಣ ಏರಿಕೆ ಆಗಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಪತ್ರ ಬರೆದಿದ್ದಾರೆ. ರಾಜ್ಯದಿಂದ ತೆರಳುವವರಿಗೆ ಪ್ರತಿನಿತ್ಯ ಸಾರಿಗೆ ವ್ಯವಸ್ಥೆ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.
ತಿರುಪತಿ ಲಡ್ಡು ವಿವಾದದ ಹೊರತಾಗಿಯು ಶ್ರೀ ವೆಂಕಟೇಶ್ವರನ ಮೇಲಿನ ಭಕ್ತಿ ಜನರಿಗೆ ಕಡಿಮೆ ಆಗಿಲ್ಲ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ತೆರಳುವವರ ಸಂಖ್ಯೆ ಕಡಿಮೆಯಿಲ್ಲ. ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ (KSTDC) ದಿಂದ ನಿತ್ಯ ನೂರಾರು ಪ್ರಯಾಣಿಕರು ತಿರುಪತಿಗೆ ತೆರಳಿ ದರ್ಶನ ಪಡೆಯುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದ 250 ಭಕ್ತರಿಗೆ ನೇರ ದರ್ಶನಕ್ಕೆ ತಿರುಪತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದೀಗ KSTDCಯಿಂದ ತಿರುಪತಿಗೆ ಪ್ರತಿನಿತ್ಯ ಬರುವ 1000 ಕರ್ನಾಟಕದ ಭಕ್ತರಿಗೆ ನೇರ ದೇವರ ದರ್ಶನಕ್ಕೆ ಅವಕಾಶ ನೀಡುವಂತೆ ಸಿಎಂ ಚಂದ್ರಬಾಬು ನಾಯ್ಡು ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕರ್ನಾಟಕದ ಜನರಿಂದ ಡಿಮ್ಯಾಂಡ್ ಹೆಚ್ಚಾಗಿದೆ. ಈ ಕಾರಣದಿಂದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಪತ್ರ ಬರೆದು ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ. ಕೆಎಸ್ ಟಿಡಿಸಿಯಿಂದ ಪ್ರತಿನಿತ್ಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 250 ನೀಡುತ್ತಿದ್ದು, ಅದನ್ನೂ ಈಗ 1000ಗೆ ಟಿಕೆಟ್ ನೀಡಲು ಮನವಿ ಮಾಡಿಕೊಂಡಿದ್ದಾರೆ. ಈ ಟಿಕೆಟ್ ಪಡೆದವರೆಲ್ಲರಿಗೂ ಟಿಟಿಡಿಯಲ್ಲಿ ನೇರ ದರ್ಶನಕ್ಕೆ ಅವಕಾಶ ಸಿಗಲು ವ್ಯವಸ್ಥೆ ಮಾಡಿ ಎಂದಿದ್ದಾರೆ.
ಕರ್ನಾಟಕದಿಂದ ನಿತ್ಯ 5-6 ಬಸ್ಗಳು ಸಂಚಾರ
ಕೆಎಸ್ ಟಿಡಿಸಿಯಿಂದ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ನೀಡಿ ಜನರನ್ನು ಕರೆದೊಯ್ಯಲಾಗುತ್ತದೆ. ಅವರಿಗೆ ವಿಶೇಷ ಬಸ್ ವ್ಯವಸ್ಥೇ ಮಾಡಲಾಗಿರುತ್ತದೆ. ಇದೀಗ ಅದರ ಸಂಖ್ಯೆ 1000ಕ್ಕೆ ಏರಿಕೆ ಆಗಲಿದ್ದು, ಅವರಿಗೆ ಪ್ರತಿನಿತ್ಯ ತಿರುಪತಿಗೆ 5-6 ಬಸ್ ಗಳನ್ನು ವ್ಯವಸ್ಥೆ ಮಾಡಲಿದ್ದಾರೆ. ಈ ಎಲ್ಲ ಬಸ್ಗಳು ಟಿಟಿಡಿಗೆ ತೆರಳಿ ಮರಳಿ ನಿಗದಿತ ನಿಲ್ದಾಣಗಳಿಗೆ ಮರಳಲಿವೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರ ಮನವಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಪ್ರತ್ಯುತ್ತರ ಬಂದಿಲ್ಲ.
ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ ತಲೆ ಎತ್ತುತ್ತಿದ್ದಂತೆ ಲಡ್ಡು ಖರೀದಿ, ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ತಾತ್ಕಾಲಿಕವಾಗಿ ಕಡಿಮೆ ಆಗಿತ್ತು. ತದನಂತರ ಕ್ರಮೇಣ ಮೊದಲಿನಂತೆ ಏರಿಕೆ ಆಗುತ್ತಿದೆ. ಸದ್ಯ ಲಡ್ಡುವಿಗೆ ಕಲಬೆರಕೆ ತುಪ್ಪ ಬೆರೆಸಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದವರ ವಿರುದ್ಧ ತನಿಖೆ ಮುಂದುವರಿದಿದೆ ಎನ್ನಲಾಗಿದೆ. ಇತ್ತ ಜನರು ದೇವರ ಮೇಲಿಟ್ಟ ನಂಬಿಕೆ ಕಳೆದುಕೊಳ್ಳದೇ ಪುನಃ ತಂಡೋಪ ತಂಡವಾಗಿ ದರ್ಶನಕ್ಕೆ ತೆರಳುತ್ತಿದ್ದಾರೆ.












Click it and Unblock the Notifications