ಹಾಸನ : ಎತ್ತಿನಗಾಡಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಹಾಸನ, ಜ.16 : ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಒಂದು ದಿನ ಮೊದಲು ಅಂದರೆ, ಜ.31ರಂದು ನಡೆಯಲಿದೆ. ಎತ್ತಿನ ಗಾಡಿಯಲ್ಲಿ ಈ ಬಾರಿ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಕನ್ನಡ
ಸಾಹಿತ್ಯ
ಪರಿಷತ್
ಅಧ್ಯಕ್ಷ
ಪುಂಡಲೀಕ
ಹಾಲಂಬಿ
ಹಾಗೂ
ಕಾರ್ಯಕಾರಿ
ಸಮಿತಿಯ
ಸರ್ವಾನುಮತದ
ನಿರ್ಣಯದ
ಮೇರೆಗೆ
ಈ
ತೀರ್ಮಾನವನ್ನು
ಕೈಗೊಳ್ಳಲಾಗಿದೆ.
ಕಮಾನು
ಕಟ್ಟಿದ
ಅಲಂಕೃತ
ಎತ್ತಿನಗಾಡಿಯಲ್ಲಿ
ಸಮ್ಮೇಳನಾದ್ಯಕ್ಷರಾದ
ಡಾ.ಸಿದ್ದಲಿಂಗಯ್ಯ
ಅವರ
ಮೆರವಣಿಗೆ
ನಡೆಯಲಿದ್ದು,
ಇದನ್ನು
ಹಿಂಬಾಲಿಸುವ
ಇತರ
ಎತ್ತಿನ
ಗಾಡಿಯಲ್ಲಿ
ಪರಿಷತ್
ಅಧ್ಯಕ್ಷ
ಪುಂಡಲೀಕ
ಹಾಲಂಬಿ
ಮತ್ತು
ಇತರೆ
ಹಿರಿಯ
ಸಾಹಿತಿಗಳು,
ಗಣ್ಯರು
ಮೆರವಣಿಗೆಯಲ್ಲಿ
ಸಾಗಲಿದ್ದಾರೆ.
ಫೆ.1ರಿಂದ ಮೂರು ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆಯಲಿದೆ. ಆದರೆ, ಜನವರಿ 31ರಂದು ಸಂಜೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. 81 ಕಲಾತಂಡಗಳು ಮೆರವಣಿಯ ರಂಗನ್ನು ಮತ್ತಷ್ಟು ಹೆಚ್ಚಿಸಲಿವೆ. [ಸಾಹಿತ್ಯ ಸಮ್ಮೇಳನದ ಮಾಹಿತಿ ಪಡೆಯಿರಿ]
ರಾಜ್ಯದ
ಪ್ರತಿ
ಜಿಲ್ಲಾ
ಕೇಂದ್ರದಿಂದ
ತಲಾ
ಒಂದು,
ಹಾಸನ
ಜಿಲ್ಲೆಯ
ಪ್ರತಿ
ತಾಲೂಕಿನಿಂದ
2
ಕಲಾ
ತಂಡಗಳು,
ಅತಿಥೇಯ
ಚ.ರಾ.
ಪಟ್ಟಣದಿಂದ
4
ಕಲಾ
ತಂಡಗಳು
ಮತ್ತು
ಕೇಂದ್ರ
ಪರಿಷತ್
ಕಳುಹಿಸುವ
ಕಲಾತಂಡಗಳು
ಮೆರವಣಿಗೆಯಲ್ಲಿ
ಪಾಲ್ಗೊಳ್ಳಿವೆ.
[ಸಾಹಿತ್ಯ
ಸಮ್ಮೇಳನಕ್ಕೆ
ಕವಿ
ಸಿದ್ದಲಿಂಗಯ್ಯ
ಅಧ್ಯಕ್ಷ]
ಎಸ್.ಎಲ್.ಭೈರಪ್ಪ ಅವರಿಗೆ ಆಹ್ವಾನ : ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ ಎಚ್ ಎಲ್ ಜನಾರ್ದನ್, ಹಾಸನ ಜಿಲ್ಲಾಧಿಕಾರಿಳಾದ ಉಮೇಶ್ ಕುಸಗಲ್ ಮುಂತಾದವರು ಸಾಹಿತಿ ಎಸ್ ಡಾ.ಎಸ್.ಎಲ್. ಭೈರಪ್ಪ ಅವರನ್ನು ಮೈಸೂರಿನ ಅವರ ನಿವಾಸದಲ್ಲಿನ ಭೇಟಿ ಮಾಡಿ ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ. ಎಸ್.ಎಲ್.ಭೈರಪ್ಪ ಅವರು ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ.