ಶಿಢ್ಲಘಟ್ಟ ಜೆಡಿಎಸ್ ಶಾಸಕ ರಾಜಣ್ಣ ಕೈತಪ್ಪಲಿದೆಯೇ ಟಿಕೆಟ್?
ಶಿಡ್ಲಘಟ್ಟ, ಡಿಸೆಂಬರ್ 08 : ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಅಸ್ಥಿತ್ವದಲ್ಲಿರುವ ಏಕೈಕ ಕ್ಷೇತ್ರ ಶಿಡ್ಲಘಟ್ಟ ಆದರೆ ಈ ಬಾರಿ ಅಲ್ಲಿ ಪಕ್ಷದ ಇಬ್ಬರು ಮುಖಂಡರ ನಡುವೆ ಟಿಕೆಟ್ ಗೆ ಕಿತ್ತಾಟ ನಡೆಯುತ್ತಿದ್ದು, ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್ ಸಿಗುತ್ತದೆಯೊ ಅಥವಾ ಕಳೆದ ಬಾರಿ ಜೆಡಿಎಸ್ ಪಾಲಿನ ಕಿಂಗ್ ಮೇಕರ್ ಎನಿಸಿಕೊಂಡಿದ್ದ ಮೇಲೂರು ರವಿಗೆ ಟಿಕೆಟ್ ದೊರಕುತ್ತದೆಯೊ ನೋಡಬೇಕಿದೆ.
ಒಂದು ಕಾಲದಲ್ಲಿ ಜೆಡಿಎಸ್ ಮತದಾರರು ಹೆಚ್ಚಿದ್ದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಈಗ ಜೆಡಿಎಸ್ ಗೆ ಉಳಿದಿರುವುದು ಒಂದು ಕ್ಷೇತ್ರ ಮಾತ್ರ. ಪ್ರಸ್ತುತ ಶಿಡ್ಲಘಟ್ಟ ಜೆಡಿಎಸ್ ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್ ನೀಡಿದರೆ ತಾಲ್ಲೂಕಿನ ಜೆಡಿಎಸ್ ಮುಖಂಡ ಮೇಲೂರು ರವಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಹೇಳಿರುವುದು ಜೆಡಿಎಸ್ ರಾಜ್ಯ ಮುಖಂಡರಲ್ಲಿ ದಿಗಿಲು ಹುಟ್ಟಿಸಿದೆ. ಏಕೆಂದರೆ ಎಂ,ರಾಜಣ್ಣ ಕಳೆದ ಚುನಾವಣೆಯಲ್ಲಿ ಗೆಲ್ಲಲು ಮೇಲೂರು ರವಿ ಅವರೇ ಪ್ರಮುಖ ಕಾರಣರಾಗಿದ್ದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಿಂಗ್ ಮೇಕರ್ ಎಂದೇ ಕರೆಸಿಕೊಳ್ಳುವ ರವಿ ಅವರು ಜೆಡಿಎಸ್ ಗೆ ತಿರುಗಿ ಬಿದ್ದರೆ ಖಂಡಿತ ತಾಲ್ಲೂಕಿನಲ್ಲಿ ಜೆಡಿಎಸ್ ನೆಲಕಚ್ಚುವುದು ಗ್ಯಾರೆಂಟಿ ಎಂಬ ಅರಿವು ವರಿಷ್ಠರಿಗಿದೆ. ಹಾಗಾಗಿ ಭಿನ್ನಮತ ಶಮನಗೊಳಿಸಿ ಮತ್ತೊಮ್ಮೆ ಜೆಡಿಎಸ್ ಅನ್ನು ತಾಲ್ಲೂಕಿನಲ್ಲಿ ಗೆಲ್ಲಿಸಲು ಪಕ್ಷದ ವರಿಷ್ಠರು ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

ಭಿನ್ನಾಭಿಪ್ರಾಯಕ್ಕೆ ಏನು ಕಾರಣ
ಕಳೆದ ಚುನಾವಣೆ ಸಮಯದಲ್ಲಿ ಗಳಸ್ಯ-ಕಂಠಸ್ಯ ಎಂಬಂತಿದ್ದ ಮೇಲೂರು ರವಿ ಮತ್ತು ಎಂ ರಾಜಣ್ಣ ಅವರು ಕೇವಲ ಒಂದೇ ವರ್ಷದಲ್ಲಿ ಭಿನ್ನಾಬಿಪ್ರಾಯ ಮೂಡಿಸಿಕೊಂಡರು. ರಾಜಣ್ಣ, ತಮ್ಮ ಗೆಲುವಿಗೆ ಕಾರಣರಾದ ಮೇಲೂರು ರವಿ ಅವರಿಗೆ ವಿಧೇಯರಾಗಿರದೇ ದರ್ಪ ತೋರಿದರು ಹಾಗಾಗಿ ಮಸ್ಥಾಪ ಉಂಟಾಯಿತು ಎಂಬುದು ರವಿ ಬೆಂಬಲಿಗರ ವಾದ.

ಟಿಕೆಟ್ ಗಾಗಿ ದೇವೇಗೌಡರಲ್ಲಿ ಮನವಿ
ಟಿಕೆಟ್ಗಾಗಿ ಈಗಾಗಲೇ ಇಬ್ಬರೂ ಮುಖಂಡರೂ ಜೆಡಿಎಸ್ ಮುಖಂಡರ ಮನೆ ಎಡತಾಕಿ ಬಂದಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಎಲ್ಲ ಜೆಡಿಎಸ್ ಜನಪ್ರತಿನಿಧಿಗಳೂ ಹೋಗಿ ರವಿ ಅವರಿಗೆ ಟಿಕೆಟ್ ನೀಡದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಸ್ವತಃ ದೇವೇಗೌಡರಿಗೇ ಹೇಳಿ ಬಂದಿದ್ದಾರೆ ಎನ್ನಲಾಗಿದೆ. ದೇವೇಗೌಡರ ಒಲವು ರವಿ ಅವರ ಪರವಾಗಿಯೇ ಇದೆ ಎಂಬ ಮಾತೂ ಕೇಳಿ ಬರುತ್ತಿದೆ.

ಇಬ್ಬರ ಜಗಳ ಮೂರನೆಯವರಿಗೆ ಲಾಭ
ಜೆಡಿಎಸ್ ನ ಇಬ್ಬರು ನಾಯಕರ ಜಗಳದಿಂದ ಮಾಜಿ ಸಚಿವ ವಿ.ಮುನಿಯಪ್ಪ ಒಳಗೊಳಗೆ ಮಂಡಿಗೆ ಉಣ್ಣುತ್ತಿದ್ದಾರೆ. ಇಬ್ಬರು ನಾಯಕರು ಜಗಳ ಮಾಡಿಕೊಂಡರೆ ಅದರ ಲಾಭ ರಾಜಕೀಯ ಅನುಭವವುಳ್ಳ ವಿ.ಮುನಿಯಪ್ಪ ಸುಲಭವಾಗಿ ಪಡೆಯಲಿದ್ದಾರೆ. ಅದರಲ್ಲಿಯೂ ಮೇಲೂರು ರವಿ ಪಕ್ಷೇತರರಾಗಿ ಚುನಾವಣೆಗೆ ನಿಂತರಂತೂ ವಿ.ಮುನಿಯಪ್ಪ ಹಾದಿ ಸುಲಭವಾಗಿಬಿಡಲಿದೆ.

ಯುವಕರ ಬೆಂಬಲ ಹೆಚ್ಚು
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೇಲೂರು ರವಿ ಪರ ಉತ್ತಮ ಅಲೆ ಇದ್ದು, ಕಳೆದ ಬಾರಿ ಮೇಲೂರು ರವಿ ಪ್ರಭೆ ಇಂದಲೇ ಎಂ.ರಾಜಣ್ಣ ಗೆದ್ದಿದ್ದರು ಎನ್ನಲಾಗುತ್ತಿದೆ. ಈ ಬಾರಿ ಸ್ವತಃ ರವಿ ಅವರೇ ಚುನಾವಣಾ ಕಣಕ್ಕೆ ಇಳಿಯುತ್ತಿರುವುದರಿಂದ ಅವರ ಪರ ಅಲೆ ಇನ್ನೂ ಜೋರಾಗಿದೆ. ಯುವ ಸಂಘಟನೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಕಾರಣ ಅವರಿಗೆ ಯುವ ಮತದಾರರ ಬೆಂಬಲ ಹೆಚ್ಚಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications