Get Updates
Get notified of breaking news, exclusive insights, and must-see stories!

Karnataka Weather: ರಾಜ್ಯಕ್ಕೆ ರಣಭೀಕರ ಚಳಿ ಮುನ್ನೆಚ್ಚರಿಕೆ! ಈ ಜಿಲ್ಲೆಗಳಿಗೆ ಆರೆಂಜ್, ಲ್ಲೋ ಅಲರ್ಟ್

Karnataka Cold Wave Alert: ಕರ್ನಾಟಕದಾದ್ಯಂತ ಭೀಕರ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದ ಮೈಕೊರೆವ ಚಳಿಯು ದಕ್ಷಿಣ ಒಳನಾಡಿಗೂ ವಿಸ್ತರಿಸಿದೆ. ಶೀತ ಅಲೆಯ ಮುನ್ಸೂಚನೆ ನೀಡಿ ಯೆಲ್ಲೋ ಅಲರ್ಟ್ ನೀಡಿದ್ದ ಹವಾಮಾನ ಇಲಾಖೆಯು ಇದೀಗ ಥಂಡೀ ವಿಪರಿತವಾಗಿ ಹೆಚ್ಚಾಗಿರುವ ಹಿನ್ನೆಲೆ ಕಾರಣ ಈ ಕೆಳಗಿನ ವಿವಿಧ ಜಿಲ್ಲೆಗಳಿಗೆ 'ಆರೆಂಜ್' ಮತ್ತು 'ಯೆಲ್ಲೋ ಅಲರ್ಟ್' ಘೋಷಿಸಿದೆ. ಅತ್ಯಧಿಕ ಚಳಿಯ ಜಿಲ್ಲೆಗಳು, ಮುಂದಿನ ಮುನ್ಸೂಚನೆ ಏನಿದೆ? ಎಂಬ ವರದಿ ಇಲ್ಲಿದೆ.

ವಾರದ ಹಿಂದೆ ಬೀದರ್‌ನಲ್ಲಿ ಹೆಚ್ಚಿನ ಚಳಿ ದಾಖಲಾಗಿದ್ದರಿಂದ ಆ ಒಂದು ಜಿಲ್ಲೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಈ ಶಿತ ಅಲೆ ಪ್ರಮಾಣ ಹೆಚ್ಚಾಗಿದ್ದರಿಂದ ಎಂಟು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡಲಾಯಿತು. ಶುಕ್ರವಾರದಿಂದ (ಡಿ.12) ರಾಜ್ಯ ವ್ಯಾಪಿ ಭಾರೀ ಶೀತ ಅಲೆ ಮುಂದುವರಿಯುವ ನಿರೀಕ್ಷೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಗದಗ, ಯಾದಗಿರಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ನೀಡಲಾಗಿದೆ.

Severe Cold Wave Expected in Across Karnataka 8 Districts Got Orange Alert Some Yellow Alert

ಉತ್ತರ ಒಳನಾಡಿನಲ್ಲಿ ಮನೆಯಿಂದ ಹೊರ ಕಾಲಿಡದಷ್ಟು ದಟ್ಟ ಮಂಜು, ಮೈಕೊರೆವ ಚಳಿ ವಾತಾವರಣ ದಾಖಲಾಗಿದೆ. ಜನರ ಬೆಚ್ಚಗಿನ ಧಿರಿಸುವ ಧರಿಸಿ ಮನೆ ಒಳಗೆ ಇದ್ದಾರೆ. ಸಂಜೆ ನಂತರ ಹೊರಾಂಗ ಚಟುವಟಿಕೆಗಳಿಗೆ ಈ ಭಾಗದಲ್ಲಿ ಬ್ರೇಕ್ ಬಿದ್ದಿದೆ. ಹಗಲು ಹೆಚ್ಚಿನ ಬಿಸಿಲು, ಶುಷ್ಕ ವಾತಾವರಣ ಕಂಡು ಬರುತ್ತಿದೆ. ಸಂಜೆ ಆಗುತ್ತಿದ್ದಂತೆ ಹೆಚ್ಚಾಗುವ ಚಳಿಯು ಮಾರನೇ ದಿನ ಬೆಳಗ್ಗೆ ಸುಮಾರು 09 ಗಂಟೆವರೆಗೆ ಕಂಡು ಬರುತ್ತಿದೆ. ದಿಢೀರ್ ಹೆಚ್ಚಾದ ಚಳಿಗೆ ಜನರು ನಡುಗಿದ್ದಾರೆ.

ದಕ್ಷಿಣ ಒಳನಾಡಿಗೂ ಶೀತ ಅಲೆ ವಿಸ್ತರಿಸಿದ್ದರಿಂದ ಕಳೆದ ಎರಡು ದಿನಗಳಿಂದ ಹೆಚ್ಚಿನ ಚಳಿ, ಬೆಳಗ್ಗೆ ದಟ್ಟ ಮಂಜು ಆವರಿಸುತ್ತಿದೆ. ಹಾವೇರಿ, ಕೊಪ್ಪಳ ಜೊತೆಗೆ ಈ ಶೀತ ಅಲೆಯು ಬಳ್ಳಾರಿ, ವಿಜಯನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ವಿಸ್ತರಿಸಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕ ಕೇಂದ್ರದ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.

ಕಡಿಮೆ ತಾಪಮಾನದ ಜಿಲ್ಲೆಗಳು

ಬೀದರ್‌ನಲ್ಲಿ 9.2 ಡಿಗ್ರಿ ಸೆಲ್ಸಿಯಸ್ ಅತೀ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಜಿಲ್ಲೆಯು ತೀವ್ರ ಚಳಿ ಎದುರಿಸುತ್ತಿದೆ. ಇದರ ನಂತರದ ಸ್ಥಾನದಲ್ಲಿ ವಿಜಯಪುರ ಮತ್ತು ಧಾರವಾಡ ತಲಾ 10 ಡಿಗ್ರಿ ಸೆಲ್ಸಿಯಸ್, ಗದಗ, ರಾಯಚೂರು 11 ಡಿಗ್ರಿ ಸೆಲ್ಸಿಯಸ್, ಗದಗ ಮತ್ತು ದಾವಣಗೆರೆ ತಲಾ 12 ಡಿಗ್ರಿ ಸೆಲ್ಸಿಯಸ್, ಹಾಸನ ಮತ್ತು ಕೊಪ್ಪಳ 13 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ಏರ್‌ಪೋರ್ಟ್ 14 ಮತ್ತು ಹಾವೇರಿ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಉಳಿದಂತೆ ಕಲಬುರಗಿ ಮತ್ತು ಚಿತ್ರದುರ್ಗ 15 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಕೆಐಎಎಲ್ 16 ಮತ್ತು ಮಂಡ್ಯ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ನಿತ್ಯ ವ್ಯತ್ಯಾಸವಾಗುತ್ತಿದೆ. ಬೆಳಗ್ಗೆ, ರಾತ್ರಿ ಭಾರೀ ಥಂಢೀ ಆವರಿಸುತ್ತಿದೆ. ಹಗಲು ಸ್ಪಷ್ಟ ಆಕಾಶ ಇರಲಿದ್ದು, ಒಣಹವೆ ವಾತಾವರಣ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಮೂರು ದಿನಗಳಿಂದ ಚಳಿ ಹೆಚ್ಚಾಗುತ್ತಿದೆ. ನಗರ ಸೇರಿ ರಾಜ್ಯದಲ್ಲಿ ಈ ಚಳಿ ಮತ್ತು ಅಧಿಕ ಬಿಸಿಲಿನ ವಾತಾವರಣ ಇನ್ನು ಒಂದು ವಾರದ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+