2011ರ ಕೆಪಿಎಸ್ಸಿ ನೇಮಕಾತಿಗೆ ತಡೆ ನೀಡಿದ ಹೈಕೋರ್ಟ್
ಬೆಂಗಳೂರು, ಜೂನ್ 21: ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಬುಧವಾರ ಕಹಿ ಸುದ್ದಿ ಸಿಕ್ಕಿದೆ. 2011ರ ಕೆಪಿಎಸ್ಸಿ ನೇಮಕಾತಿ ರದ್ದುಗೊಳಿಸಿ ಕರ್ನಾಟಕ ಸರ್ಕಾರ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
2016 : ಕೆಪಿಎಸ್ಸಿ ನೇಮಕಾತಿ ವಿವಾದ: 362 ಅಭ್ಯರ್ಥಿಗಳಿಗೆ ಶುಭ ಸುದ್ದಿ
ಕರ್ನಾಟಕ
ಲೋಕಸೇವಾ
ಆಯೋಗ
ನಡೆಸಿದ
2011ನೇ
ಸಾಲಿನ
ಗೆಜೆಟೆಡ್
ಪ್ರೊಬೆಷನರ್ಸ್
ಪರೀಕ್ಷೆಯಲ್ಲಿ
ತೇರ್ಗಡೆ
ಹೊಂದಿ
362
ಸರ್ಕಾರಿ
ಹುದ್ದೆಗಳಿಗೆ
ನೇಮಕಗೊಂಡಿದ್ದ
ಆಯ್ಕೆ
ಪಟ್ಟಿಯನ್ನು
ಕರ್ನಾಟಕ
ಸರ್ಕಾರ
ರದ್ದುಗೊಳಿಸಿತ್ತು.
ಸರ್ಕಾರ
ನೀಡಿದ್ದ
ಆದೇಶವನ್ನು
ಕರ್ನಾಟಕ
ಆಡಳಿತಾತ್ಮಕ
ನ್ಯಾಯಮಂಡಳಿ(ಕೆಎಟಿ)2016ರಲ್ಲಿ
ರದ್ದುಗೊಳಿಸಿತ್ತು.
ಆದರೆ, ಈ ಕುರಿತಂತೆ ಬುಧವಾರ(ಜೂನ್ 21) ದಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಮುಂದಿನ ಆದೇಶದವರೆಗೂ ನೇಮಕಾತಿ ಆದೇಶ ನೀಡಬಾರದೆಂದು ಸಿದ್ದರಾಮಯ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಹಗರಣದಲ್ಲಿ ಮಂಗಳಾ ಶ್ರೀಧರ್ ಪಾತ್ರವೇನು?
ಏನಿದು ಪ್ರಕರಣ? : 2011ರಲ್ಲಿ ಕೆಪಿಎಸ್ ಸಿ A ಹಾಗೂ ಬಿ ದರ್ಜೆ ನೇಮಕಾತಿಯಲ್ಲಿ ಅಕ್ರಮ ನಡೆದ ಕಾರಣ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ಆದೇಶದ ವಿರುದ್ಧ ಕೆಲ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು.