Get Updates
Get notified of breaking news, exclusive insights, and must-see stories!

ಸಿದ್ದರಾಮಯ್ಯ ಸೊಸೆ ಹೆಸರಿನಲ್ಲಿ ಪಬ್: ರಾಜಕಾರಣಿಯಿಂದ ಗಂಭೀರ ಆರೋಪ

ಸಿಎಂ ಸಿದ್ದರಾಮಯ್ಯ ಅವರ ಸೊಸೆ ಹೆಸರಿನಲ್ಲಿ ಪಬ್‌ ಇದೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್‌ ಸದಸ್ಯರೊಬ್ಬರು ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಈ ರೀತಿ ಸಿದ್ದರಾಮಯ್ಯ ಅವರ ಬಗ್ಗೆ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರೇ ನಿಮ್ಮ ಸೊಸೆಯ ಹೆಸರಲ್ಲಿ ಪಬ್ ಇಲ್ವಾ? ಅದಕ್ಕೆ ಕೋಟ್ಯಂತರ ಬಾಡಿಗೆ ಬರಲ್ವಾ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಬೈರತಿ ಸುರೇಶ್‌ ಅವರ ಬಗ್ಗೆಯೂ ಹರಿಹಾಯ್ದಿರುವ ಅವರು, ಬೈರತಿ ಸುರೇಶ್‌ ಅವರನ್ನ ಮೊದಲು ಒದ್ದು ಒಳಗೆ ಹಾಕಬೇಕು. ಆಗ ಮುಡಾದ ಎಲ್ಲ ಹಗರಣ ಬಯಲಿಗೆ ಬರುತ್ತೆ ಎಂದು ಗುಡುಗಿದ್ದಾರೆ.

Serious Allegation That There Is A Pub In The Name Of CM Siddaramaiah s Daughter-In-Law

ಮೊದಲೆಲ್ಲ ಒಳ್ಳೆಯ ಕೆಲಸಕ್ಕೆ ಕುರುಬರನ್ನು ಕರೆಸುತ್ತಿದ್ದರು. ಈಗ ಅದಕ್ಕೂ ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ಅಂತಹ ನಾಯಕರು ಕುರುಬ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಅಂಟಿಕೊಂಡಿರುವ ಕೊಳಕು ತೊಳೆಯಲು ಆಗೋದಿಲ್ಲ ಎಂದಿದ್ದಾರೆ.

ಮುಡಾ ಹಗರಣ ಹಾಗೂ ವಾಲ್ಮೀಕಿ ವಂಚನೆ ಕೇಸ್‌ಗಳಿಂದಲೇ ಕಾಂಗ್ರೆಸ್‌ ಮುಳುಗಿ ಹೋಗಿದೆ. ಇದೀಗ ಯೋಗೇಶ್ವರ್ ಎನ್ನುವ ಮತ್ತೊಬ್ಬ ಫ್ರಾಡ್‌ ಕೂಡ ಕಾಂಗ್ರೆಸ್‌ ಮನೆ ಸೇರಿಕೊಂಡಿದ್ದಾನೆ. ನಮ್ಮ ರಾಜ್ಯ ಸದ್ಯ ಫ್ರಾಡ್‌ಗಳ ಸಂತೆಯಾಗಿಬಿಟ್ಟಿದೆ. ಇದಕ್ಕೆ ಸಿದ್ದರಾಮಯ್ಯನೇ ಕಾರಣ ಎಂದು ದೂರಿದ್ದಾರೆ.

ಸಿದ್ದರಾಮಯ್ಯ ಒಂದು ರೀತಿ 16ನೇ ಲೂಯಿ ದೊರೆ ಇದ್ದಂತೆ. ಲೂಯಿ ತನ್ನ ಅವಧಿ ಬಳಿಕ ಜಲಪ್ರಳಯ ಆಗಬೇಕು ಎಂದು ಬಯಸಿದ್ದ. ಸಿದ್ದರಾಮಯ್ಯ ಕೂಡ ತನ್ನ ನಂತರ ಯಾರೂ ಇರಬಾರದು ಎನ್ನುವ ದುರಾಸೆ ಇದೆ.

Serious Allegation That There Is A Pub In The Name Of CM Siddaramaiah s Daughter-In-Law

ಸಿಎಂ ಯಾಕೆ ಹಿಂದುಳಿದ ವರ್ಗದವರನ್ನು ಹೆಚ್ಚಾಗಿ ಓಲೈಕೆ ಮಾಡುತ್ತಿದ್ದಾರೆ? ಒಕ್ಕಲಿಗರು, ಲಿಂಗಾಯತರು ಸಿದ್ದರಾಮಯ್ಯ ಅವರಿಗೆ ವೋಟ್‌ ಹಾಕಿಲ್ವಾ? ಅತ್ತ ಹಿಂದುಳಿದವರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡಿದ್ದಾರೆ. ಕುರುಬರ ಸಂಘವನ್ನು ಕೆಡವಿದ್ದು ಯಾರು? ನಾನೇ ಕಟ್ಟಿದ ಕುರುಬರ ಮಠವನ್ನು ನಾಶ ಮಾಡಿದ್ದು ಇದೇ ಸಿದ್ದರಾಮಯ್ಯ ತಾನೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬೈಎಲೆಕ್ಷನ್‌ನಿಂದ ರಾಜ್ಯ ಸರ್ಕಾರಕ್ಕೆ ಏನೂ ಆಗೋದಿಲ್ಲ. ಆದರೂ ಯಾಕೆ ಇಷ್ಟು ತಲೆಕೆಡಿಸಿಕೊಂಡಿದ್ದಾರೆ?. ಕಾಂಗ್ರೆಸ್‌ ಅನ್ನು ಹಾಳು ಮಾಡಿದ್ದೇ ಸಿದ್ದರಾಮಯ್ಯ. ರಾಜ್ಯದ ಜನರು ಮಂಗಗಳಲ್ಲ. ಸಿದ್ದರಾಮಯ್ಯ ಅವರ ಸುಳ್ಳು ಜನರಿಗೂ ತಿಳಿಯುತ್ತೆ. ಸಿದ್ದರಾಮಯ್ಯ ಒಬ್ಬ ಭ್ರಷ್ಟ ಎಂಬುದು ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೈನಿಕ ಅನ್ನಬೇಡಿ: ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆಯಾದ ಬಗ್ಗೆ ಮಾತನಾಡಿದ ವಿಶ್ವನಾಥ್‌ ಅವರು, ಯೋಗೇಶ್ವರ್‌ ಅವರನ್ನು ಸೈನಿಕ ಎಂದು ಕರೆಯಬೇಡಿ. ಅದು ಇಡೀ ಸೈನಿಕರಿಗೆ ಮಾಡುವ ದೊಡ್ಡ ಅವಮಾನ. ಹುಣಸೂರು ಬೈಎಲೆಕ್ಷನ್‌ ವೇಳೆ ಪಾರ್ಟಿ ಕೊಟ್ಟಿದ್ದ ಹಣ ತಗೊಂಡು ಓಡಿ ಹೋಗಿದ್ದ. ಇಂದು ಕಾಂಗ್ರೆಸ್‌ಗೆ ಅಂತಹ ಫ್ರಾಡ್‌ ಯೋಗೇಶ್ವರ್‌ ಅನಿವಾರ್ಯ ಆಗಿಬಿಟ್ಟಿದ್ದಾನಾ? ಎಂದು ದೂರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+