School Holiday: ಸೆಪ್ಟೆಂಬರ್ 2 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಶಾಲಾ & ಕಾಲೇಜುಗಳಿಗೆ ಭರ್ಜರಿಯಾಗಿ ರಜೆಗಳು ಸಿಗುತ್ತಿದ್ದು, ಕರ್ನಾಟಕ ರಾಜ್ಯದ ಹಲವು ಜಿಲ್ಲೆ & ತಾಲೂಕುಗಳ ಶಾಲಾ & ಕಾಲೇಜುಗಳಿಗೆ 2025 ಆಗಸ್ಟ್ ತಿಂಗಳಲ್ಲಿ ಭಾರಿ ಭರ್ಜರಿ ರಜೆಗಳೇ ಸಿಕ್ಕಿವೆ. ಈ ರೀತಿ ಒಂದು ಕಡೆ ಶ್ರಾವಣ ಮಾಸ ಶುರುವಾದ ಹಿನ್ನೆಲೆ ಸಾಲು ಸಾಲು ಹಬ್ಬಗಳು & ಪೂಜೆ ಬಂದಿದ್ದ ಹಿನ್ನೆಲೆ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮತ್ತೊಂದು ಕಡೆ ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣಕ್ಕೂ ರಜೆ ಘೋಷಣೆ ಮಾಡಿದ್ದರು. ಹೀಗಿದ್ದಾಗಲೇ, ಸೆಪ್ಟೆಂಬರ್ 2 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ರಜೆ.. ರಜೆ.. ರಜೆ.. ಹೀಗೆ ಸಾಲು ಸಾಲು ರಜೆಗಳು ಇದೀಗ ವಿದ್ಯಾರ್ಥಿಗಳಿಗೆ ಅಂತಾ ಕಾಯುತ್ತಾ ಇವೆ. ಯಾಕಂದ್ರೆ 2025 ಜೂನ್, ಜುಲೈ & ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ರಜೆಗಳು ಶಾಲಾ & ಕಾಲೇಜು ವಿದ್ಯಾರ್ಥಿಗಳಿಗೆ ಸಿಕ್ಕಿವೆ. ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾನೇ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆ ಘೋಷಣೆ ಮಾಡಲಾಗಿತ್ತು. 60 ದಿನಗಳ ಕಾಲ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಹೀಗಿದ್ದರೂ ಸಾಲು ಸಾಲು ರಜೆಗಳು ಮಾತ್ರ ಈಗ ವಿದ್ಯಾರ್ಥಿಗಳಿಗೆ ಸಿಗುತ್ತಿವೆ. ಇಂತಹ ಸಮಯದಲ್ಲೇ, ಸೆಪ್ಟೆಂಬರ್ 2 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

School Holiday May Announce In Karnataka On September 01 Of 2025 For This Reason

ಸೆಪ್ಟೆಂಬರ್ 2 ಮಂಗಳವಾರ ರಜೆ?

ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಇನ್ನೇನು ದಸರಾ ರಜೆ ಸಿಗಲಿದ್ದು, ಸುದೀರ್ಘ ರಜೆ ಕಾರಣಕ್ಕೆ ಭರ್ಜರಿಯಾಗಿ ಹಬ್ಬ ಆಚರಣೆ ಮಾಡಲು ಲಕ್ಷಾಂತರ ಮಕ್ಕಳು ಕಾಯುತ್ತಿದ್ದಾರೆ. ಶಾಲಾ & ಕಾಲೇಜು ವಿದ್ಯಾರ್ಥಿಗಳಿಗೆ ಹೀಗೆ ಸಾಲು ಸಾಲು ಸುದೀರ್ಘ ರಜೆ ಸಿಗುತ್ತಿರುವುದು ಮಕ್ಕಳಿಗೆ ಖುಷಿ ನೀಡಿದ್ದರೂ, ಅತ್ತ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಶಿಕ್ಷಕರು & ಪೋಷಕರು ಚಿಂತೆ ಮಾಡುತ್ತಿದ್ದಾರೆ. ಹೀಗೆ ಸಾಲು, ಸಾಲು ರಜೆಗಳು ಸಿಗುತ್ತಿರುವ ಕಾರಣಕ್ಕೆ ಟ್ರಿಪ್ & ಟೂರ್ ಪ್ಲಾನ್ ಮಾಡುವವರು ಕೂಡ ಇದ್ದಾರೆ. ಈ ಎಲ್ಲಾ ಸುದ್ದಿಗಳ ಬೆನ್ನಲ್ಲೇ ಈಗ ಮತ್ತೊಂದು ಸುದ್ದಿ ಸಿಕ್ಕಿದೆ. ಅಂದಹಾಗೆ, ಸೆಪ್ಟೆಂಬರ್ 2 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ರಜೆ.. ರಜೆ.. ರಜೆ..?

ಈಗಿನ ಮಾಹಿತಿ ಪ್ರಕಾರ ಉತ್ತರ ಕನ್ನಡ & ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು & ಹಾಸನ, ಕೊಡಗು ಸೇರಿ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆ ಸುರಿವ ಬಗ್ಗೆ ಮುನ್ಸೂಚನೆ ಇದೆ. ರಾಯಚೂರು, ವಿಜಯಪುರ ಸೇರಿದಂತೆ ಯಾದಗಿರಿ ಜಿಲ್ಲೆಗಳಲ್ಲೂ ಭಾರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ಇದೆ. ಹೀಗಾಗಿ ಭಾರಿ ಮಳೆ ಹಿನ್ನೆಲೆ ಸೆಪ್ಟೆಂಬರ್ 2 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಈಗ ದಟ್ಟವಾಗಿದೆ...

ಮಳೆ.. ಮಳೆ.. ಎಲ್ಲೆಲ್ಲೂ ಭಾರಿ ಮಳೆ!

ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿದ್ದವು. ಇದೇ ಕಾರಣಕ್ಕೆ ರೈತರು ಹಾಗೂ ಕನ್ನಡ ನಾಡಿನ ಜನರೂ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಕುಡಿವ ನೀರು ಪೂರೈಕೆ ಮಾಡುವ ಕೆಆರ್‌ಎಸ್ ಅಂದ್ರೆ ಕೃಷ್ಣರಾಜ ಸಾಗರ ಕೂಡ ಫುಲ್ ತುಂಬಿ ತುಳುಕುತ್ತಿದೆ. ಗರಿಷ್ಠ 124.80 ಅಡಿ ಇರುವ ಜಲಾಶಯ ಪೂರ್ಣವಾಗಿದೆ. ಹಾಗೇ ಆಲಮಟ್ಟಿ ಡ್ಯಾಂ ಕೂಡ ಇದೀಗ ತುಂಬಿ ತುಳುಕುತ್ತಿದ್ದು, ತುಂಗಭದ್ರಾ ಡ್ಯಾಂ ಸೇರಿ ಇದೀಗ ಕರ್ನಾಟಕದ ಬಹುತೇಕ ಎಲ್ಲಾ ದೊಡ್ಡ ದೊಡ್ಡ ಡ್ಯಾಂಗಳು ತುಂಬಿ ಹೋಗಿವೆ. ಇಷ್ಟಾದರೂ ಮಳೆ ಮಾತ್ರ ನಿಲ್ಲದೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಾ ಇರುವುದು ನೆರೆ ಹಾವಳಿಯ ಭಯ ಮೂಡಿಸಿದೆ. ಮತ್ತೊಂದು ಕಡೆ ಹಲವು ಬಾರಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಪರಿಸ್ಥಿತಿ ಕೂಡ ಎದುರಾಗುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+