ಘನತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ವಿಫಲ: ಸುಪ್ರೀಂ ದಂಡ
ಬೆಂಗಳೂರು, ಜು.11: ಘನತ್ಯಾಜ್ಯ ನಿರ್ವಹಣೆಗೆ ಇಲ್ಲಿಯ ವರೆಗೆ ನೀತಿ ರೂಪಿಸದ ಕರ್ನಾಟಕ ಸೇರಿದಂತೆ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ದಂಡ ವಿಧಿಸಿದೆ.
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆದರೂ ಕರ್ನಾಟಕ, ಬಿಹಾರ, ಗೋವಾ, ಕೇರಳ, ಛತ್ತೀಗಢ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪುದುಚೆರಿ ಸೇರಿದಂತೆ ಪ್ರಮಾಣಪತ್ರ ಸಲ್ಲಿಸದ ರಾಜ್ಯಗಳಿಗೆ ಒಂದು ಲಕ್ಷ ರೂ. ದಂಡ ವಿಧಿಸಿದೆ.
ಪೌರ ಕಾರ್ಮಿಕರಿಗೆ ಕೊನೆಗೂ ವೇತನ ಬಿಡುಗಡೆ ಮಾಡಿದ ಬಿಬಿಎಂಪಿ!
ಕಸ ವಿಲೇವಾರಿ ಹಾಗೂ ನೆರೆ ಹಾವಳಯಿಂದ ಜನರನ್ನು ರಕ್ಷಸುವಲ್ಲಿ ವಿಫಲರಾಗಿರುವ ದೆಹಲಿ ಮಯ್ಯು ಮುಂಬೈ ಮಹಾನಗರ ಪಾಲಿಕೆಯನ್ನು ದ್ವಿಸದ್ಯ ಪೀಠ ತರಾಟೆಗೆ ತೆಗೆದುಕೊಂಡಿತು. ಈ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತದ ಕಾನೂನುಗಳೊಂದಿಗೆ ಸಹಕರಿಸಲು ಕೊನೆಯ ಅವಕಾಶ ನೀಡಲಾಗುವುದು.
ಅದಕ್ಕೂ ತಪ್ಪಿದಲ್ಲಿ ಭಾರತದ ಕಾನೂನುಗಳು ಆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯಾಕೆ ಅನ್ವಯಿಸುವುದಿಲ್ಲ ಎಂಬುದನ್ನು ವಿವರಿಸುವುದಕ್ಕಾಗಿ ನ್ಯಾಯಾಲಯ ಹಾಜರಾಗುವಂತೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗುವುದು ಎಂದಿದೆ.