ಸತೀಶ್ ಜಾರಕಿಹೊಳಿ ಖಾತೆ ಬದಲಾವಣೆ ಮಾಡಿದ ಸಿಎಂ
ಬೆಂಗಳೂರು, ಫೆ. 26 : ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮೂರುದಿಗಳ ಕಾಲ ಸುದ್ದಿ ಮಾಡಿದ್ದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಜಾರಕಿಹೊಳಿ ಅವರ ನಿರೀಕ್ಷೆಯಂತೆ ಅವರಿಗೆ ಸಣ್ಣ ಕೈಗಾರಿಕಾ ಖಾತೆ ನೀಡಲಾಗಿದೆ.
ಗುರುವಾರ
ಮಧ್ಯಾಹ್ನ
ಸಿಎಂ
ಸಿದ್ದರಾಮಯ್ಯ
ಅವರು
ಸತೀಶ್
ಜಾರಕಿಹೊಳಿ
ಅವರ
ಖಾತೆಯನ್ನು
ಬದಲಾವಣೆ
ಮಾಡಿರುವ
ಪತ್ರವನ್ನು
ರಾಜ್ಯಪಾಲ
ವಜೂಭಾಯಿ
ವಾಲಾ
ಅವರಿಗೆ
ಕಳುಹಿಸಿದ್ದಾರೆ.
ಜಾರಕಿಹೊಳಿ
ಅವರ
ಬಳಿ
ಇದ್ದ
ಅಬಕಾರಿ
ಖಾತೆಯನ್ನು
ಸಿಎಂ
ವಾಪಸ್
ಪಡೆದು
ತಮ್ಮ
ಬಳಿ
ಇಟ್ಟುಕೊಂಡಿದ್ದಾರೆ.
ಅಬಕಾರಿ ಖಾತೆಯನ್ನು ವಾಪಸ್ ಪಡೆದು ಸತೀಶ್ ಜಾರಕಿಹೊಳಿ ಅವರಿಗೆ ಸಣ್ಣ ಕೈಗಾರಿಕಾ ಖಾತೆಯನ್ನು ನೀಡಲಾಗಿದೆ. ಜಾರಕಿಹೊಳಿ ಅವರು ರಾಜೀನಾಮೆಯನ್ನು ವಾಪಸ್ ಪಡೆಯುವಾಗಲೇ ಅವರ ಖಾತೆ ಬದಲಾವಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. [ಜಾರಕಿಹೊಳಿ ರಾಜೀನಾಮೆ ಪ್ರಹಸನ ಅಂತ್ಯ, ಖಾತೆ ಬದಲು]
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜನವರಿ 27ರಂದು ಯಮನಕರಡಿ ಶಾಸಕ, ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೂರು ದಿನಗಳ ನಂತರ ಸಿಎಂ ಸಿದ್ದರಾಮಯ್ಯ ಅವರು ಜಾರಕಿಹೊಳಿ ಅವರ ಮನವೊಲಿಸಿ ಖಾತೆಯನ್ನು ಬದಲಾವಣೆ ಮಾಡುವುದಾಗಿ ಭರವಸೆ ನೀಡಿ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಸೂಚಿಸಿದ್ದರು. [ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ]
ವಿಧಾನಸಭೆ ಜಂಟಿ ಅಧಿವೇಶನ ಮುಗಿದ ಬಳಿಕ ಜಾರಕಿಹೊಳಿ ಅವರ ಖಾತೆಯನ್ನು ಬದಲಾವಣೆ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಅಬಕಾರಿ ಖಾತೆ ಹಿಂಪಡೆದು ಸಣ್ಣ ಕೈಗಾರಿಕಾ ಖಾತೆಯನ್ನು ನೀಡಲಾಗಿದೆ.
ತಮಗೆ ಅಬಕಾರಿ ಖಾತೆ ಬೇಡ ಅಬಕಾರಿ ಖಾತೆಯಿಂದ ಮುಕ್ತಿ ನೀಡಿ, ಜನರ ಬಳಿ ಹೋಗುವಂತಹ ಖಾತೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಎರಡು ಬಾರಿ ಸತೀಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದರು. ಅದರಂತೆ ಖಾತೆ ಬದಲಾವಣೆ ಮಾಡಲಾಗಿದೆ.