MT Aqua Titan: ಮಂಗಳೂರು ಕರಾವಳಿಗೆ ಆಗಮಿಸಿದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ನೌಕೆ
ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ನಡುವೆಯೇ, ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಚಾರ್ಟರ್ ಮಾಡಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಬೃಹತ್ ಹಡಗು 'ಎಂ.ಟಿ ಅಕ್ವಾ ಟೈಟಾನ್' (MT Aqua Titan) ಭಾನುವಾರ ಮಂಗಳೂರು ಕರಾವಳಿಗೆ ಆಗಮಿಸಿದೆ.
ಸಂಘರ್ಷದ ನಡುವೆ ಸುರಕ್ಷಿತವಾಗಿ ಆಗಮನ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಮೂಡಿರುವ ಬೆನ್ನಲ್ಲೇ ಈ ತೈಲ ನೌಕೆ ಭಾರತಕ್ಕೆ ಬಂದಿಳಿದಿದೆ. ಪ್ರಸ್ತುತ ಈ ಹಡಗು ಮಂಗಳೂರು ಕರಾವಳಿಯಿಂದ ಸುಮಾರು 10 ನಾಟಿಕಲ್ ಮೈಲಿ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿದೆ. ಶನಿವಾರವೇ ಬರಬೇಕಿದ್ದ ಈ ನೌಕೆ ಒಂದು ದಿನ ತಡವಾಗಿ ತಲುಪಿದೆ.

ಇದೇ ವೇಳೆ ಶಿಪ್ಪಿಂಗ್ ಸಚಿವಾಲಯವು ಒಂದು ಮಹತ್ವದ ಘೋಷಣೆ ಮಾಡಿದೆ. ಮಾರ್ಚ್ 14ರಿಂದ 31ರವರೆಗೆ ಮಂಗಳೂರು ಬಂದರಿಗೆ ಬರುವ ಕಚ್ಚಾ ತೈಲ ಮತ್ತು ಎಲ್ಪಿಜಿ (LPG) ಸರಕುಗಳ ಮೇಲಿನ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಇದರಿಂದಾಗಿ ತೈಲ ಆಮದು ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಗಲಿದೆ. ಶಿಪ್ಪಿಂಗ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು ಮಾಹಿತಿ ನೀಡಿ, "ಪರ್ಷಿಯನ್ ಕೊಲ್ಲಿಯಲ್ಲಿರುವ ಭಾರತದ ಎಲ್ಲಾ 22 ಹಡಗುಗಳು ಮತ್ತು 611 ನಾವಿಕರು ಸುರಕ್ಷಿತವಾಗಿದ್ದಾರೆ. ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಯಾವುದೇ ಬಂದರುಗಳಲ್ಲಿ ಸರಕು ಸಾಗಣೆಯ ದಟ್ಟಣೆ ವರದಿಯಾಗಿಲ್ಲ" ಎಂದು ತಿಳಿಸಿದ್ದಾರೆ.
ಇದೇ ದಿನ ಅಮೆರಿಕದ ಟೆಕ್ಸಾಸ್ನಿಂದ ಎಲ್ಪಿಜಿ ಹೊತ್ತ ಮತ್ತೊಂದು ಹಡಗು ನವ ಮಂಗಳೂರು ಬಂದರಿಗೆ ಬಂದಿದೆ. ಕಳೆದ ಬುಧವಾರವಷ್ಟೇ 'ಜಾಗ್ ಲಾಡ್ಕಿ' ಎಂಬ ಭಾರತೀಯ ಧ್ವಜದ ಕಚ್ಚಾ ತೈಲ ನೌಕೆಯು ಗುಜರಾತ್ನ ಮುದ್ರಾ ಬಂದರನ್ನು ಯಶಸ್ವಿಯಾಗಿ ತಲುಪಿತ್ತು. ಮಾರ್ಚ್ 13ರಂದು ಹಾರ್ಮುಜ್ ಜಲಸಂಧಿಯನ್ನು ದಾಟಿದ್ದ ಎಂ.ಟಿ ಶಿವಲಿಕ್ ಮತ್ತು ಎಂ.ಟಿ ನಂದಾದೇವಿ ನೌಕೆಗಳು ಈಗಾಗಲೇ ಭಾರತಕ್ಕೆ ಎಲ್ಪಿಜಿ ತಲುಪಿಸಿವೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ವ್ಯಾಪಾರ ಮಾರ್ಗಗಳಲ್ಲಿ ಸಂಘರ್ಷದ ನೆರಳು ಬಿದ್ದಿದ್ದರೂ, ಭಾರತವು ಯಶಸ್ವಿಯಾಗಿ ತನ್ನ ಇಂಧನ ಪೂರೈಕೆಯನ್ನು ಮುಂದುವರಿಸುತ್ತಿದೆ.
ಯುದ್ಧದ ನಡುವೆಯೂ ಭಾರತದ ಬಲ
ಪ್ರಸ್ತುತ ಇಸ್ರೇಲ್ ಮತ್ತು ಇತರೆ ದೇಶಗಳ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಸಂಚರಿಸುವ ಹಡಗುಗಳಿಗೆ ಭದ್ರತಾ ಆತಂಕ ಎದುರಾಗಿದೆ. ಜಗತ್ತಿನ ಒಟ್ಟು ತೈಲ ಬಳಕೆಯ ಸುಮಾರು 20% ಭಾಗ ಈ ಮಾರ್ಗದ ಮೂಲಕವೇ ಸಾಗುತ್ತದೆ. ಇಂತಹ ಕಠಿಣ ಸಮಯದಲ್ಲಿ ಭಾರತೀಯ ನೌಕೆಗಳಾದ 'ಎಂ.ಟಿ ಶಿವಲಿಕ್' ಮತ್ತು 'ಎಂ.ಟಿ ನಂದಾದೇವಿ' ಸುಮಾರು 92,712 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಿರುವುದು ಭಾರತದ ರಾಜತಾಂತ್ರಿಕ ಮತ್ತು ನೌಕಾಬಲದ ಯಶಸ್ಸನ್ನು ತೋರಿಸುತ್ತದೆ.
ಎಂ.ಟಿ ಅಕ್ವಾ ಟೈಟಾನ್ ಹಡಗು ರಷ್ಯಾದಿಂದ ಕಚ್ಚಾ ತೈಲವನ್ನು ಹೊತ್ತು ತಂದಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ನೀಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಪಶ್ಚಿಮ ಏಷ್ಯಾದ ಯುದ್ಧದ ಕಾರಣದಿಂದ ಈ ಸರಬರಾಜು ಮಾರ್ಗಗಳು ವ್ಯತ್ಯಯವಾಗುವ ಭೀತಿ ಇತ್ತು. ಈಗ ಮಂಗಳೂರು ತೀರಕ್ಕೆ ಈ ಹಡಗು ಬಂದಿರುವುದು MRPL ರಿಫೈನರಿ ಕಾರ್ಯಾಚರಣೆಗೆ ದೊಡ್ಡ ಆನೆಬಲ ನೀಡಿದಂತಾಗಿದೆ.
#WATCH | Mangaluru, Karnataka: The Russian oil-laden tanker MT Aqua Titan, chartered by Mangalore Refinery and Petrochemicals Ltd (MRPL), is docked in the Arabian Sea, about 10 nautical miles (about 18.5 km) off the Mangalore coast. pic.twitter.com/A8z0JWVqGC
— ANI (@ANI) March 22, 2026
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications