Darshan Case: ಜೈಲಲ್ಲಿರುವ ನಟ ದರ್ಶನ್ಗೆ ಕೊಂಚ ರಿಲೀಫ್! ಕೋರ್ಟ್ ನೀಡಿದ ಅನುಮತಿಯೇನು?
ಬೆಂಗಳೂರು, ಸೆಪ್ಟಂಬರ್ 09: ರೇಣುಕಾಸ್ವಾಮಿ ಪ್ರಕರಣ ಆರೋಪಿ ನಟ ದರ್ಶನ್ ತೂಗುದೀಪ ಸದ್ಯ ಜೈಲಿನಲ್ಲಿದ್ದಾರೆ. ಜೈಲಿನ ಶಿಕ್ಷೆ ಅನುಭವಿಸಲಾಗದೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಹಾಗೂ ಹೆಚ್ಚುವರಿ ದಿಂಬು, ಹಾಸಿಗೆ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯು ಇಂದು ಬೆಳಗ್ಗೆ ನಡೆದಿತ್ತು. ಮಧ್ಯಾಹ್ನ ಆದೇಶ ಪ್ರಕಟಿಸುವುದಾಗಿ ನ್ಯಾಯಲಯ ತಿಳಿಸಿತ್ತು. ಇದೀಗ ಆದೇಶ ನೀಡಿದ್ದು, ಸದ್ಯಕ್ಕೆ ಬಳ್ಳಾರಿ ಜೈಲಿಗೆ ವರ್ಗಾಯಿಸಲು ಸಕಾರಣವಿಲ್ಲ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಬಳ್ಳಾರಿ ಜೈಲ್ಗೆ ಸ್ಥಳಾಂತರಕ್ಕೆ ಕೋರ್ಟ್ ನಿರಾಕರಿಸಿದೆ.
ಬೆಳಗಿನ ವಿಚಾರಣೆ ವೇಳೆ ದರ್ಶನ್ 'ತನಗೆ ವಿಷಯ ನೀಡುವಂತೆ ಆದೇಶಿಸಲು' ಕೋರಿದ್ದಾರೆ. ದರ್ಶನ್ ಜೈಲು ಯಾತನೆ ಬಗ್ಗೆ ಕೆಲವರು ನಾಟಕ ಅಂತಲೂ ಕರೆದಿದ್ದಾರೆ. ಹಲವರು ದರ್ಶನ್ಗೆ ಈ ರೀತಿ ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಿಂಬು, ಹಾಸಿಗೆ, ಬೆಡ್ಶೀಟ್ ನೀಡುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಆರೋಪಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ತಮ್ಮನ್ನು ಪರಪ್ಪನ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ವೇಳೆ ಎಲ್ಲ ಆರೊಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
ಸ್ಥಳಾಂತರಕ್ಕೆ ನಕಾರ, ಓಟಾಟಕ್ಕೆ ಅನುಮತಿ: ಕೋರ್ಟ್
ದರ್ಶನ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನಿರಾಕರಿಸಿದೆ. ಯಾವುದೇ ಸಕಾರಗಳು ಇಲ್ಲ. ದರ್ಶನ್ ಬೆಂಗಳೂರು ಜೈಲಿನಲ್ಲೇ ಇರಬೇಕು. ಆದರೆ ಜೈಲಿನ ನಿಯಮ ಪಾಲಿಸಬೇಕು. ನಿಯಮ ಉಲ್ಲಂಘಿಸುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ. ಒಂದು ವೇಳೆ ಉಲ್ಲಂಘಿಸಿದರೆ ದರ್ಶನ್ ಸ್ಥಳಾಂತರ ಬಗ್ಗೆ ಯೋಚಿಸಬಹುದು ಎಂದು ಜೈಲಾಧಿಕಾರಿ/ ಐಜಿಗೆ ಅಧಿಕಾರ ನೀಡಿದೆ.
ಬೆಂಗಳೂರು ಜೈಲಿನಲ್ಲಿ ದರ್ಶನ್ ಗೆ ಜೈಲಿನ ಮ್ಯಾನುವಲ್ ಹಾಗೂ ಕಾನೂನಿಗೆ ಒಳಪಟ್ಟು ಅಗತ್ಯ ದಿಂಬು, ಬೆಡ್ ಶೀಟ್ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಕೋರ್ಟ್ ಅನುಮಿತಿ ನೀಡಿದೆ.
ಪರಪ್ಪನ ಅಗ್ರಹಾರದಲ್ಲಿ ಆರೋಪಿ ದರ್ಶನ್ ಜೈಲಿನೊಳಗೆ ವಾಕ್ ಮಾಡಬಹುದು. ಆವರಣದೊಳಗೆ ಓಡಾಡುವುದು, ಗಾರ್ಡ್ನ ನಲ್ಲಿ ಅಲ್ಲಿ ಇಲ್ಲಿ ಸುತ್ತಾಡಲು ಅವಕಾಶ ಸಿಕ್ಕಿದೆ. ಬೇರೆ ಬೇರೆ ಖೈದಿಗಳಿಗೆ ನೀಡುವ ಸೌಕರ್ಯಗಳನ್ನು ನಿಯಮದಡಿ ನೀಡಲು ಕೋರ್ಟ್ ಅನುಮತಿ ನೀಡಿದೆ. ಆದರೆ ಯಾವ ಕಾರಣಕ್ಕೂ ಜೈಲಿನ ನಿಯಮ ಉಲ್ಲಂಘಿಸುವಂತಿಲ್ಲ. ಹಾಗೇನಾದರು ಆದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದಿದೆ. ಈ ಮೂಲಕ ದರ್ಶನ್ ಜೈಲಿನ ಒಳಗೆ ಓಡಾಟ, ಇತರ ಕೈದಿಗಳ ಜೊತೆ ತಕ್ಕಮಟ್ಟಿಗೆ ಮಾತನಾಡಲು, ಹೆಚ್ಚುವರಿ ದಿಂಬು, ಹಾಸಿಗೆ ಪಡೆಯಲು ಅನುಮತಿ ನೀಡಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications