ಕೃಷಿ ಪ್ರೊಫೆಸರ್ ಖ್ಯಾತಿಯ ಪುಟ್ಟೀರಮ್ಮ ಇನ್ನಿಲ್ಲ: ಕೃಷಿಯಲ್ಲಿ ಲಾಭ-ನಷ್ಟದ ಲೆಕ್ಕಾಚಾರವನ್ನೇ ನೋಡದ ಮಹಾತಾಯಿ
ಚಾಮರಾಜನಗರ: ಇಲ್ಲಿನ ಕೃಷಿಕ ಮಹಿಳೆ, ಕೃಷಿ ಪ್ರೊಫೆಸರ್ ಎಂದೇ ಖ್ಯಾತಿ ಗಳಿಸಿರುವ ಪುಟ್ಟೀರಮ್ಮ ಇನ್ನಿಲ್ಲ. 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾಮರಾಜನಗರದ ಪುಣ್ಯದಹುಂಡಿಯ ಪುಟ್ಟೀರಮ್ಮ ಅವರು ನೂರಕ್ಕೂ ಹೆಚ್ಚು ಬೆರಕೆ ಸೊಪ್ಪುಗಳನ್ನು ಗುರುತಿಸುವ ಅಪಾರ ಜ್ಞಾನ ಹೊಂದಿದ್ದರು. ಬೆರಕೆ ಸೊಪ್ಪಿನ ಬಳಕೆಯೇ ನಶಿಸುತ್ತಿರುವ ಕಾಲಮಾನದಲ್ಲಿ ಅದರ ಜ್ಞಾನವನ್ನು ತಮ್ಮ ಗ್ರಾಮದ ಎಳೆಯ ಹೆಣ್ಣುಮಕ್ಕಳಿಗೂ ಕಲಿಸಿದ್ದು ಇವರ ವಿಶೇಷ.
ಮಿಶ್ರ ಬೆಳೆ-ಬೆರಕೆ ಸೊಪ್ಪಿನ ವಿಸ್ಮಯ ಲೋಕದ ಭಂಡಾರವಾಗಿದ್ದ ಪುಟ್ಟೀರಮ್ಮ ನಿಧನರಾಗಿದ್ದಾರೆ. ನೆಲಮೂಲ ಕೃಷಿ ಜ್ಞಾನದ ಕೊಂಡಿಯೊಂದು ಕಳಚಿದಂತಾಗಿದೆ. ನೆಲಮೂಲದ 'ಕೃಷಿ ಪ್ರೊಫೆಸರ್'ನಂತೆ ಕಾಣುತ್ತಿದ್ದ ಪುಟ್ಟೀರಮ್ಮ ಕೃಷಿ ಎಂಬುದನ್ನು ಲಾಭ ನಷ್ಟದ ಬಾಬ್ತಾಗಿ ನೋಡಲೇ ಇಲ್ಲ. ತಾವು ಕಲಿತ ಜ್ಞಾನವನ್ನು ತಮ್ಮೊಳಗಿಟ್ಟುಕೊಳ್ಳದೆ ತಲೆಮಾರುಗಳಿಗೆ ತಲುಪಿಸುತ್ತಿದ್ದದ್ದು ವಿಶೇಷವಾಗಿತ್ತು. ಬೇಸಾಯಕ್ಕೆ ಇವರು ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಸರ್ಕಾರ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದೆ.

ಪುಟ್ಟೀರಮ್ಮ ಹಿನ್ನೆಲೆ ಏನು
ಪುಟ್ಟೀರಮ್ಮ ಅವರು ಅತ್ಯಂತ ಹಿಂದುಳಿದ ಕುಟುಂಬದಿಂದ ಬಂದವರು. ಕೃಷಿಕ ಮಹಿಳೆಯಾದ ಪುಟ್ಟೀರಮ್ಮ ಅವರು ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಗ್ರಾಮದವರು. ಪತಿ ಲಿಂಗೇಗೌಡ ಶತಾಯುಷಿ. ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ತಂದೆ ಈರೇಗೌಡ, ತಾಯಿ ಉಚ್ಚಮ್ಮ. ಲಿಂಗೇಗೌಡರನ್ನು ವಿವಾಹವಾಗಿ ಗುಂಡ್ಲುಪೇಟೆ ಆಲತ್ತೂರಿಗೆ ಬಂದ ಪುಟ್ಟೀರಮ್ಮ ಅವರು ಇಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದರು. ಇವರ ಕುಟುಂಬ ಕಾರಣಾಂತರಗಳಿಂದ 30 ವರ್ಷಗಳ ಹಿಂದೆಯೇ ಪಣ್ಯದಹುಂಡಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಸೋದರ ಮಾವ ಕೊಟ್ಟಿದ್ದ ಒಂದು ಎಕರೆ ಹದಿನೈದು ಗುಂಟೆ ಜಮೀನೇ ಇವರಿಗೆ ಮುಂದೆ ಇವರ ಕರ್ಮ ಭೂಮಿಯೂ ಹಾಗೂ ಪ್ರಯೋಗಶಾಲೆಯಾಗಿಯೂ ಬದಲಾಯಿತು.
ಬೆರೆಕೆ ಸೊಪ್ಪು - ಪುಟ್ಟೀರಮ್ಮ ಮೀರಿಸುವವರುಂಟೆ
ಪುಟ್ಟೀರಮ್ಮ ಅವರು ಬೆರೆಕೆ ಸೊಪ್ಪಿನ ವಿಚಾರದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರು. ಕಾಡಿನಲ್ಲಿ ಸಿಗುವುದು ಬೆರಕೆಸೊಪ್ಪು. ಬೆರೆಕೆ ಸೊಪ್ಪು ಪ್ರಕೃತಿ ಕೊಟ್ಟ ಆಹಾರ. ನಮ್ಮಲ್ಲಿ ನೂರೊಂದು ಸೊಪ್ಪುಗಳಿವೆ. 40 ಸೊಪ್ಪಗಳನ್ನು ಹೊಲದಲ್ಲಿ, ಬೇಲಿಮೇಲೆ ನಾವೇ ಬೆಳೆಯುತಿದ್ದೆವು. ಅರವತ್ತು ಸೊಪ್ಪುಗಳನ್ನು ಕಾಡಿನಿಂದ ತರುತ್ತಿದ್ದೆವು ಎಂದು ಪುಟ್ಟೀರಮ್ಮ ಹೇಳಿದ್ದರು.
ಪುಟ್ಟೀರಮ್ಮ ಸಾಧನೆ ಸ್ಮರಿಸಿದ ಕನ್ನಡಿಗರು
ನೂರಕ್ಕೂ ಹೆಚ್ಚು ಬೆರಕೆ ಸೊಪ್ಪುಗಳನ್ನು ಗುರುತಿಸುವ ಅಪಾರ ಜ್ಞಾನ ಇವರಿಗಿತ್ತು. ಬೆರಕೆ ಸೊಪ್ಪಿನ ಬಳಕೆಯೇ ನಶಿಸುತ್ತಿರುವ ಕಾಲಮಾನದಲ್ಲಿ ಅದರ ಜ್ಞಾನವನ್ನು ತಮ್ಮ ಗ್ರಾಮ ಎಳೆಯ ಹೆಣ್ಣುಮಕ್ಕಳಿಗೂ ಕಲಿಸಿದ್ದು ಇವರ ವಿಶೇಷ. ಒಣಭೂಮಿ ಕೃಷಿ, ಅಕ್ಕಡಿ ಬೇಸಾಯ ಹಾಗೂ ಬೆರಕೆ ಸೊಪ್ಪುಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದರು. ಇಕ್ರಾ ಸಂಸ್ಥೆಯು ಇವರ ಬಗ್ಗೆ ಒಳ್ಳೆಯ ಪುಸ್ತಕ ಪ್ರಕಟಿಸಿದೆ. 88 ವರ್ಷ ನಮ್ಮೊಂದಿಗಿದ್ದ "ಕೃಷಿ ಪ್ರೊಫೆಸರ್ ಪುಟ್ಟೀರಮ್ಮ" ಅವರಿಗೆ ನಮನಗಳು ಎಂದು ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications