ಗೋಕರ್ಣದಲ್ಲಿ ರಮೇಶ್ ಅರವಿಂದರ ‘ಬಟರ್ ಫ್ಲೈ’!
ಕಾರವಾರ, ಅಕ್ಟೋಬರ್ 05 : ಬಹುಭಾಷಾ ನಟ, ನಿರ್ದೇಶಕ ರಮೇಶ ಅರವಿಂದರ 'ಬಟರ್ ಫ್ಲೈ’ ಸಿನಿಮಾದ ಚಿತ್ರೀಕರಣ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದಾದ ಗೋಕರ್ಣದಲ್ಲಿ ನಡೆಯುತ್ತಿದೆ.
ಗೋಕರ್ಣದ ಮುಖ್ಯ ಕಡಲತೀರ, ರಥಬೀದಿ, ಮಹಾಬಲೇಶ್ವರ ದೇವಸ್ಥಾನ, ಹಳೆಯ ಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಕೆಲವು ಪಾತ್ರದಲ್ಲಿ ಸ್ಥಳೀಯರನ್ನು ಸಹ ಕಲಾವಿದರನ್ನಾಗಿ ಬಳಸಿಕೊಳ್ಳಲಾಗಿದೆ. ಒಂದು ವಾರಗಳ ಕಾಲ ಚಿತ್ರೀಕರಣ ಗೋಕರ್ಣದಲ್ಲಿಯೇ ಮುಂದುವರಿಯಲಿದೆ.

ನಾಯಕನಾಗಿ ಅರುಣ್, ನಾಯಕಿಯಾಗಿ ಪಾರುಲ್
ನಾಯಕನಾಗಿ ಹೊಸ ಪ್ರತಿಭೆ ಅರುಣ್ ಎಂಬುವರು ನಟಿಸುತ್ತಿದ್ದು, ನಾಯಕಿಯಾಗಿ ಪ್ಯಾರ್ಗೆ ಆಗ್ ಬಿಟ್ಟೈತೆ ಖ್ಯಾತಿಯ ನಟಿ ಪಾರೂಲ್ ಯಾದವ್ ಅವರು ನಟಿಸುತ್ತಿದ್ದಾರೆ. ಕಥೆ, ನಿರ್ದೇಶನದ ಹೊಣೆಯನ್ನು ರಮೇಶ್ ಅರವಿಂದ್ ಅವರು ಹೊತ್ತಿದ್ದು, ಹಿಂದಿಯ 'ಕ್ವೀನ್’ ಸಿನಿಮಾದ ರೀಮೇಕ್ ಆಗಿದೆ.
ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು, ಮಲಯಾಳಂ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಚಿತ್ರವನ್ನು ರಮೇಶ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ತಮಿಳಿಗೆ ಕಾಜಲ್ ಅಗರ್ವಾಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

'ಗೋಕರ್ಣ ಕನ್ನಡ’ದಲ್ಲಿ ಪಾರುಲ್
ನಟಿ ಪಾರೂಲ್ 'ಬಟರ್ ಫ್ಲೈ’ನಲ್ಲಿ ಗೋಕರ್ಣದ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಗೋಕರ್ಣದಲ್ಲಿ ಪ್ರಚಲಿತದಲ್ಲಿರುವ ಸ್ಥಳೀಯ ಕನ್ನಡವನ್ನೇ ಅವರು ಸಿನಿಮಾದಲ್ಲಿ ಬಳಸಿದ್ದಾರೆ. ಅದಕ್ಕಾಗಿ ಸಖತ್ ಆಗಿ ಕಷ್ಟಪಟ್ಟು ಗೋಕರ್ಣದ ಕನ್ನಡ ಕಲಿತಿದ್ದಾರಂತೆ ಸಿನಿಮಾ ತಂಡ ಹೇಳುತ್ತಿದೆ.
ಗೋಕರ್ಣದವರನ್ನ ನೋಡಿ ಕಲಿತಿದ್ದಾರಂತೆ
ಪಾರುಲ್ ಎರಡು ದಿನ ಮೊದಲೇ ಗೋಕರ್ಣಕ್ಕೆ ಬಂದಿದ್ದಾರೆ ಅಂತ ಸುದ್ದಿಯಿದೆ. ಗೋಕರ್ಣದ ಭಾಷೆ ಮಾತ್ರವಲ್ಲದೆ ಇಲ್ಲಿನ ವಾತಾವರಣ, ಜನರ ವರ್ತನೆ, ಅವರ ಹಾವಭಾವಗಳನ್ನು ತಿಳಿದುಕೊಳ್ಳೋಕೆ ಗೋಕರ್ಣ ಫುಲ್ ಸುತ್ತಾಡಿದ್ದಾರಂತ ಕೂಡ ಕೆಲವರು ಹೇಳುತ್ತಿದ್ದಾರೆ.
ಇಲ್ಲಿನ ಕಾಲೇಜಿಗೆ ತೆರಳಿ ವಿದ್ಯಾರ್ಥಿನಿಯರು ಹೇಗೆ ಇರ್ತಾರೆ ಅನ್ನೋದನ್ನು ಕೂಡ ಅಧ್ಯಯನ ಮಾಡಿದ್ದಾರಂತೆ ಪಾರುಲ್. ಯಾಕಂದ್ರೆ 'ಬಟರ್ ಫ್ಲೈ’ನಲ್ಲಿ ಪಕ್ಕಾ ಗೋಕರ್ಣದ ಹುಡುಗಿಯರಂತೆ ಲಂಗ ಬ್ಲೌಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪಾರುಲ್.
ಕನ್ನಡ ಟ್ಯೂಷನ್ ಪಡೆದ ಪಾರುಲ್
ರಮೇಶ್ ಅವರು ಪಾರುಲ್ಗೆ ಈಗಾಗಲೇ ಕೆಲವು ದಿನಗಳ ಗೋಕರ್ಣ ಕನ್ನಡ ಕಾರ್ಯಾಗಾರ ನಡೆಸಿದ್ದಾರೆ. ಜತೆಗೆ ಗೋಕರ್ಣ ಮೂಲದ ಮುಂಬೈನಲ್ಲಿ ನೆಲೆಸಿರುವ ಲತಾ ಎಂಬ ಶಿಕ್ಷಕಿಯೊಬ್ಬರಿಂದ ಇಲ್ಲಿನ ಕನ್ನಡದ ಟ್ಯೂಷನ್ ಪಡೆದಿದ್ದಾರಂತೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications