ಕಾರ್ಮೋಡ ಕವಿದಿತ್ತೋ, ಕೆರೆ - ಕಟ್ಟೆ ತುಂಬ್ಯಾವೋ: ಚನ್ನಗಿರಿಯ ರಾಮಲಿಂಗೇಶ್ವರನ ಕಾರ್ಣಿಕ!
ದಾವಣಗೆರೆ, ಮಾರ್ಚ್ 09: ಕಾರ್ಮೋಡ ಕವಿದಿತ್ತೋ, ಕೆರೆ - ಕಟ್ಟೆ, ನದಿಗಳು ತುಂಬಿ ಹರಿದಾವೋ, ಗಗನದಿ ಮುತ್ತು ಸುರಿದಾವೋ. ಇದು ದಾವಣಗೆರೆ ಜೆಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ - ಕೆಂಗಾಪುರ ರಾಂಪುರ ಮಠದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರ್ಣಿಕ.
ಹೌದು, ಶನಿವಾರದಿಂದ ಹರನಹಳ್ಳಿ - ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ ಮುಳ್ಳು ಗದ್ದುಗೆ ಉತ್ಸವ ಆರಂಭವಾಗಿದ್ದು, ಐದು ದಿನಗಳ ಕಾಲ ಈ ಉತ್ಸವ ನಡೆಯಲಿದೆ. ಶಿವರಾತ್ರಿ ಪ್ರಯುಕ್ತ ನಡೆಯುವ ಮುಳ್ಳು ಗದ್ದುಗೆ ಉತ್ಸವ ಆರಂಭದ ವೇಳೆ ಭವಿಷ್ಯವಾಣಿ ನುಡಿಯುವ ಸಂಪ್ರದಾಯವಿದ್ದು, ಮುಳ್ಳು ಗದ್ದುಗೆ ಮೇಲೆ ಕೆಂಗಾಪುರ ರಾಂಪುರ ಮಠದ ರಾಮಲಿಂಗೇಶ್ವರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

ಈ ವರ್ಷ ಉತ್ತಮ ಮಳೆಯ ಮುನ್ಸೂಚನೆ ನೀಡುವ ಮೂಲಕ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧವಾಗಲಿದೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳುಕಲಿವೆ ಎಂದು ಕೆಂಗಾಪುರ ರಾಂಪುರ ಮಠದ ರಾಮಲಿಂಗೇಶ್ವರ ಸ್ವಾಮೀಜಿಯ ಕಾರ್ಣಿಕವನ್ನ ವಿಶ್ಲೇಷಿಸಿದ್ದಾರೆ.
ಇನ್ನೂ ಮುಳ್ಳು ಗದ್ದುಗೆ ಉತ್ಸವಕ್ಕೆ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ ಚಾಲನೆ ನೀಡಿದರು. ಕಳೆದ ಬಾರಿ ಕಾರ್ಮೋಡ ಕವಿದಾವೋ, ಗಗನದಿಂದ ಮುತ್ತು ಉದುರ್ಯಾವೋ, ಅಂತರಂಗದ ಹಕ್ಕಿ ಹಾರಿ ಹೋದಿತೋ ಎಂಬ ಕಾರ್ಣಿಕ ನುಡಿದಿದ್ದಾರೆ.











Click it and Unblock the Notifications