ವೋಟಿಗಾಗಿ ನೋಟು : ಮಲ್ಲಿಕಾರ್ಜುನ ಖೂಬಾಗೆ ಜಾಮೀನು
ಬೆಂಗಳೂರು, ಜೂನ್ 20 : ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಹಣ ಕೇಳಿದ ಆರೋಪವನ್ನು ಖೂಬಾ ಎದುರಿಸುತ್ತಿದ್ದಾರೆ.
ವೋಟಿಗಾಗಿ
ನೋಟು
ಆರೋಪಕ್ಕೆ
ಸಂಬಂಧಿಸಿದಂತೆ
ಬಸವಕಲ್ಯಾಣ
ಶಾಸಕ
ಮಲ್ಲಿಕಾರ್ಜುನ
ಖೂಬಾ
ಅವರ
ವಿರುದ್ಧ
ವಿಧಾನಸೌಧ
ಪೊಲೀಸ್
ಠಾಣೆಯಲ್ಲಿ
ಎಫ್ಐಆರ್
ದಾಖಲಾಗಿದೆ.
ಶೀಘ್ರದಲ್ಲೇ
ಈ
ಕುರಿತ
ತನಿಖೆ
ಸಿಬಿಐಗೆ
ಹಸ್ತಾಂತರವಾಗಲಿದೆ.
[ವೋಟಿಗಾಗಿ
ನೋಟು:
ಯಾರು,
ಏನು
ಹೇಳಿದರು?]
ಎಫ್ಐಆರ್ ದಾಖಲಾಗುತ್ತಿದ್ದಂತೆ ಶಾಸಕರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಆರೋಪದ ಕುರಿತು ಸಿಬಿಐ ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. [ಸ್ಟಿಂಗ್ ಆಪರೇಷನ್: ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!]
ಶಾಸಕರು ಹೇಳುವುದೇನು? : ಈ ಪ್ರಕರಣದ ಕುರಿತು ಈಗಾಗಲೇ ಸ್ಪಷ್ಟನೆ ಕೊಟ್ಟಿರುವ ಮಲ್ಲಿಕಾರ್ಜುನ ಖೂಬಾ ಅವರು, 'ಇದು ನನ್ನ ವಿರುದ್ಧ ಮಾಡಲಾದ ಷಡ್ಯಂತ್ರ. ಈ ರಹಸ್ಯ ಕಾರ್ಯಚರಣೆ ಬಗ್ಗೆ ನನಗೆ ಗೊತ್ತಿತ್ತು. ಇದರ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಲು ನಾನು ಚರ್ಚೆಯಲ್ಲಿ ಭಾಗಿಯಾದೆ. ನನ್ನ ಬಳಿಯೂ ಈ ರಹಸ್ಯ ಕಾರ್ಯಚಣೆಯ ದಾಖಲೆಗಳು ಇವೆ ಅವುಗಳನ್ನು ಮುಂದೆ ಬಹಿರಂಗ ಪಡಿಸುತ್ತೆನೆ' ಎಂದು ಹೇಳಿದ್ದಾರೆ. ['ಫಾರೂಕ್ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ']
ರಾಜ್ಯಸಭಾ ಚುನಾವಣೆಗೆ ಅಡ್ಡ ಮತದಾನ ಮಾಡಲು ಶಾಸಕರು ಕೋಟಿ ಕೋಟಿ ಡೀಲ್ ಮಾಡಿದ್ದು ರಾಷ್ಟ್ರೀಯ ಮಾದ್ಯಮಗಳ ರಹಸ್ಯ ಕಾರ್ಯಚರಣೆಯಲ್ಲಿ ಬಹಿರಂಗವಾಗಿತ್ತು. ಮಲ್ಲಿಕಾರ್ಜುನ ಖೂಬಾ ಅವರು ಇದರಲ್ಲಿ ಸಿಕ್ಕಿಬಿದ್ದಿದ್ದರು.
ಜೂನ್ 11ರಂದು ರಾಜ್ಯಸಭೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ನ ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ, ಬಿಜೆಪಿಯ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಜೆಡಿಎಸ್ನ ಬಿ.ಎಂ.ಫಾರೂಕ್ ಅವರು ಸೋಲು ಅನುಭವಿಸಿದ್ದರು.