'ಚಿತ್ತಾಪುರ ಸಹಾಯವಾಣಿ' ಆರಂಭಿಸಿದ ಪ್ರಿಯಾಂಕ ಖರ್ಗೆ
ಕಲಬುರಗಿ, ಮೇ 4 : ತಮ್ಮ ಕ್ಷೇತ್ರದ ಜನರ ಸಮಸ್ಯೆಗಳನ್ನು ತಿಳಿಯಲು ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ 24*7 ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಎರಡು ನಿಮಿಷದಲ್ಲಿ ಜನರು ದೂರು ಹೇಳಿದರೆ ಅದು ರೆಕಾರ್ಡ್ ಆಗಿ ಶಾಸಕರ ಕಚೇರಿ ತಲುಪಲಿದೆ.
ಮತದಾರರ
ಕುಂದು-ಕೊರತೆಯನ್ನು
ಆಲಿಸಲು
ಶಾಸಕ
ಪ್ರಿಯಾಂಕ
ಖರ್ಗೆ
ಅವರು
ಈ
ವಿನೂತನ
ವ್ಯವಸ್ಥೆಯನ್ನು
ಜಾರಿಗೆ
ತಂದಿದ್ದಾರೆ.
ಸಹಾಯವಾಣಿಗೆ
'ಚಿತ್ತಾಪುರ
ಸಹಾಯವಾಣಿ'
ಎಂದು
ನಾಮಕರಣ
ಮಾಡಲಾಗಿದ್ದು,
ದಿನದ
24
ಗಂಟೆಯೂ
ಇದು
ಕಾರ್ಯನಿರ್ವಹಿಸಲಿದೆ.
ಕ್ಷೇತ್ರದ ಯಾವುದೇ ವ್ಯಕ್ತಿ ಪಕ್ಷಭೇದ ಮರೆತು 1860-425-4040 ಸಂಖ್ಯೆಗೆ ಕರೆ ಮಾಡಿ ದೂರು ಮತ್ತು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಕಚೇರಿ ಸಿಬ್ಬಂದಿ ಅಥವ ಸ್ವತಃ ಶಾಸಕರೇ ಕರೆ ಮಾಡಿದವರನ್ನು ಸಂಪರ್ಕಿಸಿ ಅವರ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತಾರೆ.[ಬಡ ಕುಟುಂಬ ಮನೆ ಕಟ್ಟಿಕೊಳ್ಳಲು ಶಾಸಕರ ನೆರವು]
ದೂರು ನೀಡುವುದು ಹೇಗೆ : ನಿಗದಿತ ಸಂಖ್ಯೆಗೆ ಜನರು ಕರೆ ಮಾಡಿದಾಗ ಮೊದಲು ಸ್ವಾಗತ ಕೇಳಿ ಬರುತ್ತದೆ. ನಂತರ ಬೀಪ್ ಟೋನ್ ಕೇಳಿದ ಬಳಿಕ ಎರಡು ನಿಮಿಷದಲ್ಲಿ ಜನರು ಸಮಸ್ಯೆಯನ್ನು ಹೇಳಬೇಕು. ಅದು ಶಾಸಕರ ಕಚೇರಿಯ ಸರ್ವರ್ನಲ್ಲಿ ದಾಖಲಾಗುತ್ತದೆ. [ಶಾಸಕರ ಫೋನ್ ಸಮಸ್ಯೆ, ಸಿಎಂ ಸಿದ್ದರಾಮಯ್ಯಗೆ ಪತ್ರ!]
ಬಳಿಕ
ದೂರುದಾರರ
ಮೊಬೈಲ್ಗೆ
ಕರೆ
ಮಾಡಿ
ಅವರ
ಸಮಸ್ಯೆಗಳನ್ನು
ಬಗೆಹರಿಸಲಾಗುತ್ತದೆ.
ದೂರುದಾರರು
ಕೊಟ್ಟಿರುವ
ಮಾಹಿತಿ
ಹಾಗೂ
ಸಮಸ್ಯೆಗಳನ್ನು
ಗೌಪ್ಯವಾಗಿ
ಇಡಲಾಗುತ್ತದೆ
ಎಂದು
ಶಾಸಕ
ಪ್ರಿಯಾಂಕ
ಖರ್ಗೆ
ಹೇಳಿದ್ದಾರೆ.
CHITTAPUR CITIZENS can now call 1860-425-4040 for any GRIEVANCES | SUGGESTIONS | COMPLAINTS regarding constituency's...
Posted by Priyank Kharge on Sunday, May 3, 2015
ಏನು ಮಾಡಬಹುದು?
ಈ 24*7 ಸಹಾಯವಾಣಿಗೆ ಕರೆ ಮಾಡುವ ಜನರು
*
ಚಿತ್ತಾಪುರ
ಕ್ಷೇತ್ರವನ್ನು
ಅಭಿವೃದ್ಧಿಪಡಿಸಲು
ಸಲಹೆ-ಸೂಚನೆ
ನೀಡಬಹುದು
*
ತಾಲೂಕಿನ
ಆಡಳಿತವನ್ನು
ಚುರುಕುಗೊಳಿಸಲು
ಸಲಹೆ
ನೀಡಬಹುದು
*
ಭ್ರಷ್ಟಾಚಾರ,
ಕಾಮಗಾರಿ
ವಿಳಂಬ
ಮುಂತಾದವುಗಳ
ಕುರಿತು
ದೂರು
ಕೊಡಬಹುದು
*
ಸಾರ್ವಜನಿಕರಿಗೆ
ಅಗತ್ಯವಾದ
ಸೌಲಭ್ಯಗಳ
ಕುರಿತು
ಬೇಡಿಕೆ
ಸಲ್ಲಿಸಬಹುದು