ನವೆಂಬರ್ 10ಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ?
ಬೆಂಗಳೂರು, ಅಕ್ಟೋಬರ್ 17: ನವೆಂಬರ್ 10ಕ್ಕೆ ಮೈಸೂರು - ಬೆಂಗಳೂರು - ಚೆನ್ನೈ ನಡುವೆ ಲೋಕಾರ್ಪಣೆ ಮಾಡಲಾಗುವ ಭಾರತದ ಐದನೇ ವಂದೇ ಭಾರತ್ ಎಕ್ಸ್ಪ್ರೆಸ್ ಸೆಮಿ ಹೈಸ್ಪೀಡ್ ರೈಲನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಚೆನ್ನೈ, ಸೆಮಿ ಹೈ ಸ್ಪೀಡ್ನ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ನ್ನು ಮೊದಲ ರೈಲನ್ನು ಹೊರತಂದ ನಾಲ್ಕು ವರ್ಷಗಳ ನಂತರ ದಕ್ಷಿಣ ರೈಲ್ವೆಗೆ ಅದರ ಮೊದಲ ರೈಲನ್ನು ನೀಡಲಾಗಿದೆ.
ಈಗ ಓಡುತ್ತಿರುವ ಶತಾಬ್ದಿ ಎಕ್ಸ್ಪ್ರೆಸ್ ಬದಲಿಗೆ ವಂದೇ ಭಾರತ್ನ ಮೊದಲ ರೈಲಿನ ನವೀಕರಿಸಿದ ಆವೃತ್ತಿಯನ್ನು ಚೆನ್ನೈ - ಬೆಂಗಳೂರು - ಮೈಸೂರು ವಿಭಾಗದಲ್ಲಿ ಪರಿಚಯಿಸಲಾಗುವುದು. ನವೆಂಬರ್ 10ರಂದು ಪ್ರಧಾನಿ ಈ ರೈಲಿಗೆ ಧ್ವಜಾರೋಹಣ ಮಾಡಲಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಬೆಂಗಳೂರು ಅಥವಾ ಮೈಸೂರಿನಲ್ಲಿ ನಡೆಸುವ ನಿರೀಕ್ಷೆಯಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಆದಾಗ್ಯೂ, 214 ಕಿಮೀ ಚೆನ್ನೈ- ಜೋಲಾರ್ಪೇಟೆ ವಿಭಾಗದಲ್ಲಿ ರೈಲುಗಳನ್ನು ಗಂಟೆಗೆ 130 ಕಿಮೀ ವೇಗದಲ್ಲಿ ಓಡಿಸಲು ಟ್ರ್ಯಾಕ್ ನವೀಕರಣ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಪ್ರಯಾಣದ ಸಮಯವು ತಕ್ಷಣವೇ ಕಡಿಮೆಯಾಗುವುದಿಲ್ಲ. ಜೋಲಾರ್ಪೇಟೆ- ಬೆಂಗಳೂರು- ಮೈಸೂರು (283 ಕಿ.ಮೀ) ವಿಭಾಗದಲ್ಲಿ ರೈಲುಗಳ ವೇಗದ ಮಿತಿಯನ್ನು ಹೆಚ್ಚಿಸಲಾಗಿಲ್ಲ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಶತಾಬ್ದಿ ಎಕ್ಸ್ಪ್ರೆಸ್ ಚೆನ್ನೈನಿಂದ ಮೈಸೂರಿಗೆ ಏಳು ಗಂಟೆಗಳಲ್ಲಿ 497 ಕಿಮೀ ಕ್ರಮಿಸುತ್ತದೆ ಮತ್ತು 7 ಗಂಟೆ 15 ನಿಮಿಷಗಳಲ್ಲಿ ಹಿಂತಿರುಗುತ್ತದೆ.
ವಂದೇ ಭಾರತ್ ರೈಲು ಗಂಟೆಗೆ 160 ಕಿ.ಮೀ. ಚೆನ್ನೈ- ಮೈಸೂರು ನಡುವಿನ ವೇಗ ಗಂಟೆಗೆ 110 ಕಿಮೀ. ಆಗಿರುತ್ತದೆ. ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಬಿ ಜಿ ಮಲ್ಲಯ್ಯ ನೇತೃತ್ವದಲ್ಲಿ ಗುರುವಾರ ರೈಲುಗಳ ವೇಗ ಹೆಚ್ಚಿಸಲು ಸಭೆ ನಡೆಸಿದ್ದು, ಜಿಎಂ ಮತ್ತು ಚೆನ್ನೈ ಡಿಆರ್ಎಂ ಚೆನ್ನೈ-ಜೋಲಾರ್ಪೇಟೆ ವಿಭಾಗದಲ್ಲಿ ಶನಿವಾರ ವೇಗ ಪರೀಕ್ಷೆ ನಡೆಸಲಿದ್ದಾರೆ.

ಪ್ರಸ್ತುತ, 143 ಕಿಮೀ ಅರಕ್ಕೋಣಂ - ಜೋಲಾರ್ಪೇಟೆ ವಿಭಾಗದಲ್ಲಿ ನದಿ ಸೇತುವೆಗಳು ಮತ್ತು ಇತರ ಕೆಲವು ಸ್ಥಳಗಳಲ್ಲಿ ರೈಲುಗಳು 50 ರಿಂದ 70 ಕಿಮೀ ವೇಗದಲ್ಲಿ ನಿರ್ಬಂಧಿತ ವೇಗದಲ್ಲಿ ಚಲಿಸುತ್ತಿವೆ. ಚೆನ್ನೈ - ಜೋಲಾರ್ಪೇಟೆ ವಿಭಾಗದಲ್ಲಿ ಕೆಲವು ವೇಗದ ನಿರ್ಬಂಧಗಳಿವೆ. ಇಂಟರ್ಡಿಪಾರ್ಟ್ಮೆಂಟಲ್ ತಂಡಗಳು ಕೆಲವು ವಿಭಾಗಗಳಲ್ಲಿ ವೇಗವನ್ನು ಹೆಚ್ಚಿಸುವ ಕೆಲಸ ಮಾಡುತ್ತಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications