ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿರುವುದಕ್ಕೆ ಕಿರುಕುಳ-ಹೈಕೋರ್ಟ್ನಲ್ಲಿ ಆರೋಪ
ಬೆಂಗಳೂರು,
ನ
20:
ಶಾಸಕ
ಡಿ.ಕೆ.
ಶಿವಕುಮಾರ್
ಕರ್ನಾಟಕ
ಪ್ರದೇಶ
ಕಾಂಗ್ರೆಸ್
ಸಮಿತಿ
ಅಧ್ಯಕ್ಷರಾಗಿರುವ
ಕಾರಣಕ್ಕಾಗಿ
ಅವರ
ವಿರುದ್ಧ
ಹಲವು
ಪ್ರಕರಣಗಳನ್ನು
ದಾಖಲಿಸಿ
ಕಿರುಕುಳ
ನೀಡಲಾಗುತ್ತಿದ್ದು,
ಅವರ
ವಿರುದ್ಧ
ರಾಜಕೀಯ
ಪಿತೂರಿ
ನಡೆಯುತ್ತಿದೆ.
ಹೀಗೆಂದು
ಡಿ.ಕೆ.ಶಿವಕುಮಾರ್
ಪರ
ವಕೀಲರು
ಹೈಕೋರ್ಟ್ನಲ್ಲಿ
ಗಂಭೀರ
ಆರೋಪ
ಮಾಡಿದ್ದಾರೆ.
ಇದು
ಅತ್ಯಂತ
ಮಹತ್ವದ್ದಾಗಿದ್ದು,
ಇದಕ್ಕೆ
ಉತ್ತರಿಸಬೇಕಾದ
ಹೊಣೆ
ಇದೀಗ
ಪ್ರಾಸಿಕ್ಯೂಷನ್
ಮೇಲಿದೆ.
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಹೇಗಾದರೂ ಮಾಡಿ ಅವರಿಗೆ ತೊಂದರೆ ನೀಡಬೇಕೆಂದು ಸತಾಯಿಸಲಾಗುತ್ತಿದೆ ಎಂದೂ ಸಹ ಹೇಳಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಪ್ರಕರಣ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ವಿಶೇಷ ನ್ಯಾಯಪೀಠ ವಿಚಾರಣೆ ನಡೆಸಿತು.
'ಶಾಸಕರು
ಸಂಸದರ
ವಿರುದ್ಧದ
ಕ್ರಿಮಿನಲ್
ಪ್ರಕರಣಗಳ
ಮೇಲ್ಮನವಿಯನ್ನು
ನ್ಯಾಯಮೂರ್ತಿ
ಎಸ್.ಸುನಿಲ್
ದತ್
ಯಾದವ್
ಅವರಿದ್ದ
ಧಾರವಾಡ
ಹೈಕೋರ್ಟ್ನ
ವಿಶೇಷ
ನ್ಯಾಯಪೀಠ
ವಿಚಾರಣೆ
ನಡೆಸಿತು.
ವಾದ
ಮಂಡನೆ
ಅಪೂರ್ಣಗೊಂಡಿದ್ದು
ವಿಚಾರಣೆಯನ್ನು
ಇದೇ
28ಕ್ಕೆ
ಮುಂದೂಡಲಾಗಿದೆ.
ಅರ್ಜಿದಾರರು ಸಾರ್ವಜನಿಕ ಸೇವಕ. ಅವರ ವಿರುದ್ಧ ದಾಖಲಿಸಿರುವ ಈ ಪ್ರಕರಣದಲ್ಲಿ ಅವರ ಕುಟುಂಬದ ಸದಸ್ಯರೆಲ್ಲರ ಆದಾಯವನ್ನು ಪರಿಗಣಿಸಲಾಗಿದೆ. ಅವರ ಮನೆಯಲ್ಲಿ 41 ಲಕ್ಷ ದೊರೆತಿದೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಎರಡು ಕೇಸು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮತ್ತೊಂದು ಕೇಸು, ಆದಾಯ ತೆರಿಗೆ ನಾಲ್ಕು ಕೇಸುಗಳನ್ನು ದಾಖಲಿಸಿತ್ತು.
ಆದರೆ, ಈ ಕೇಸುಗಳಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಿಡುಗಡೆ ನೀಡಿತ್ತು. ಈ ಆದೇಶ ಪ್ರಶ್ನಿಸಿದ ಮೇಲ್ಮನವಿಯನ್ನು ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಈಗ ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ' ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
'ಜಾಮೀನು ದೊರೆತ ಮೇಲೆ ಜಾರಿ ನಿರ್ದೇಶನಾಲಯದ ಮಾಹಿತಿ ಅನುಸಾರ ಸಿಬಿಐ ಕೇಸು ದಾಖಲಿಸಿದೆ. ಇದೆಲ್ಲಾ ಅರ್ಜಿದಾರರಿಗೆ ಕೇವಲ ಕಿರುಕುಳ ನೀಡಬೇಕೆಂಬ ಏಕೈಕ ಉದ್ದೇಶ ಹೊಂದಿದ ದುರುದ್ದೇಶಪೂರಿತ ಕ್ರಮವಾಗಿದೆ' ಎಂದರು.
ಪ್ರಕರಣವೇನು: 'ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಪ್ರಕರಣ ದಾಖಲಿಸಿದೆ. 'ಸಿಬಿಐ ದಾಖಲಿಸಿರುವ ಈ ಎಫ್ಐಆರ್ ಕಾನೂನು ಬಾಹಿರವಾಗಿದ್ದು ಇದನ್ನು ರದ್ದುಗೊಳಿಸಬೇಕು' ಎಂದು ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.