PM Modi in Belagavi Live : ಬೆಳಗಾವಿಯಿಂದ ನಿರ್ಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಳ್ಳಲು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಲಕ್ಷಾಂತರ ಜನರು ಕಾತರರಾಗಿದ್ದಾರೆ. ಪ್ರಧಾನಿಯ ಕರ್ನಾಟಕ ಭೇಟಿ, ಪಾಲ್ಗೊಳ್ಳುವ ಕಾರ್ಯಕ್ರಮ ಸೇರಿದಂತೆ ಕ್ಷಣ ಕ್ಷಣದ ಮಾಹಿತಿ ಇಲ್ಲಿ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 27: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸೋಮವಾರ (ಫೆ. 27) ಕರ್ನಾಟಕಕ್ಕೆ ಭೇಟಿ ನೀಡಿದರು. ಅವರ ಆಗಮನಕ್ಕೆ ಕೆಲವೇ ಕ್ಷಣಗಳು ಬಾಕಿ ಇವೆ. ರಾಜ್ಯದ ಮಲೆನಾಡಿನ ಜಿಲ್ಲೆ ಶಿವಮೊಗ್ಗ ಮತ್ತು ದೊಡ್ಡ ಜಿಲ್ಲೆ ಬೆಳಗಾವಿ ಗೆ ಅವರು ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Live : ಪ್ರಧಾನಿ ಶ್ರೀ @narendramodi ಅವರಿಂದ ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತು ಬಿಡುಗಡೆ #KarnatakaWelcomesModi #BJPYeBharavase #PMKisan https://t.co/zz6mBVCzy6
— BJP Karnataka (@BJP4Karnataka) February 27, 2023
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಮಂತಿಗಳು ಫೆಬ್ರವರಿ ತಿಂಗಳಲ್ಲೇ ಕರ್ನಾಟಕಕ್ಕೆ ಇದು ಮೂರನೇ ಬಾರಿಗೆ ಆಗಮಿಸುತ್ತಿದ್ದಾರೆ. ಇದರಲ್ಲಿ ಚುನಾವಣಾ ತಂತ್ರವು ಅಡಗಿದೆ ಎನ್ನಲಾಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಷ್ಟ್ರಕವಿ ಕುವೆಂಪು ಹೆಸರಿನ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅವರು ಉದ್ಘಾಟಿಸಲಿದ್ದಾರೆ. ಜೊತೆಗೆ ಕೆಲವು ಶಂಕುಸ್ಥಾಪನೆಗಳನ್ನು ಅವರು ನೆರವೇರಿಸಿದರು.

ಶಿವಮೊಗ್ಗ ಭೇಟಿ ಬಳಿಕ ಸೋಮವಾರವೇ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ತೆರಳಿದರು. ಅಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ದೇಶವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಲವು ಷರತ್ತು ವಿಧಿಸಿದ್ದರಿಂದ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಇನ್ನು ಎರಡು ಕಾರ್ಯಕ್ರಮಗಳಲ್ಲಿ ಸೂಕ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಆಸನ ವ್ಯವಸ್ಥೆ, ಶಿವಮೊಗ್ಗ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಳ್ಳಲು ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಲಕ್ಷಾಂತರ ಜನರು ಕಾತರರಾಗಿದ್ದಾರೆ. ಪ್ರಧಾನಿಯ ಕರ್ನಾಟಕ ಭೇಟಿ, ಪಾಲ್ಗೊಳ್ಳುವ ಕಾರ್ಯಕ್ರಮ ಸೇರಿದಂತೆ ಕ್ಷಣ ಕ್ಷಣದ ಮಾಹಿತಿ ಇಲ್ಲಿ ತಿಳಿಯಿರಿ.
ಭಾಷಣ ಮುಗಿಸಿ ನಿರ್ಗಮಿಸಿದ ಪ್ರಧಾನಿ
ನಾನು ಬದುಕಿರೋದೆ ಅವರಿಗೆ ಸಮಸ್ಯೆ
ವಿಪಕ್ಷಗಳಿಗೆ ಪ್ರಧಾನಿ ಚಾಟಿ
ಕೃಷಿಗೆ ಬಿಜೆಪಿ ಆದ್ಯತೆ
ಆಧುನಿಕತೆಯೊಂದಿಗೆ ಕೃಷಿ ಜೋಡನೆ: ಮೋದಿ

ಭ್ರಷ್ಟಾಚಾರ ಇಲ್ಲದೇ ರೈತರಿಗೆ ನೇರ ಹಣ ವರ್ಗಾವಣೆ
ನೂರು ವರ್ಷದ ಹಿಂದೆ ಸ್ಟಾರ್ಟ್ಅಪ್: ಮೋದಿ
ಬೆಳಗಾವಿ: ಪ್ರಧಾನಿ ಮೋದಿ ಮಾತು ಆರಂಭ
ರೈತರಿಗೆ ಪಿಎಂ ಕಿಸಾನ್ ನಿಧಿ ಕಂತು: ಚಾಲನೆ
ಪ್ರಧಾನಿ ರೋಡ್ ಶೋ ಕೊಂಡಾಡಿದ ಬೊಮ್ಮಾಯಿ
ಪ್ರಧಾನಿಗೆ ಸನ್ಮಾನ
1ಗಂಟೆ 35 ನಿಮಿಷದ ರೋಡ್ ಶೋ ಮುಕ್ತಾಯ
ಮೋದಿ ಮತ್ತೆ ಪ್ರಧಾನಿ ಆಗಲು ಬೆಂಬಲಿಸಿ: ಲಕ್ಷ್ಮಣ್ ಸವದಿ
ಬೆಳಗಾವಿ: ಸಮಾರಂಭದಲ್ಲಿ ಕುರ್ಚಿ ಕದನ
ಬೆಳಗಾವಿಯಲ್ಲಿ ಪ್ರಧಾನಿ 'ಮೆಗಾ ರೋಡ್ ಶೋ'













Click it and Unblock the Notifications