Get Updates
Get notified of breaking news, exclusive insights, and must-see stories!

Dhan Dhanya Krishi Yojana: ಕೇಂದ್ರದಿಂದ ಕರ್ನಾಟಕದ ಈ 2 ಜಿಲ್ಲೆಗಳಿಗೆ ಬಂಪರ್ ಸುದ್ದಿ

ಹಾವೇರಿ/ಗದಗ, ಅಕ್ಟೋಬರ್ 11: ವಿಧಾನಸಭಾ ಕ್ಷೇತ್ರಗಳಲ್ಲಿ ಹಾವೇರಿ ಮತ್ತು ಗದಗ ಎರಡು ಪ್ರತ್ಯೇಕ ಕ್ಷೇತ್ರಗಳಗಿವೆ. ಲೋಕಸಭೆ ವಿಚಾರದ ಮಟ್ಟಿಗೆ ಈ ಎರಡು ಜಿಲ್ಲೆಗಳು ಒಂದೇ ಆಗಿವೆ. ಕೇಂದ್ರ ಸರ್ಕಾರ ಇವೆರಡು ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು "ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆ' (PM Dhan Dhanya Krishi Yojana) ಜಾರಿಗೆ ತರುತ್ತಿದೆ. ಇಂದು ಅಕ್ಟೋಬರ್ 11ರಂದು ದೇಶದ 100 ಜಿಲ್ಲೆಗಳಲ್ಲಿ ಅನುಷ್ಠಾನವಾಗುವಂತೆ ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ.

ಈ ಆಧುನಿಕ ಕೃಷಿ ಯೋಜನೆ ಇಂದಿನಿಂದ ಜಾರಿಯಾಗುವ ದೇಶದ 100 ಜಿಲ್ಲೆಗಳಲ್ಲಿ ಹಾವೇರಿ, ಗದಗ ಜಿಲ್ಲೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಸೇರ್ಪಡೆಗೆ ಕೇಂದ್ರ ಸಚಿವ ಶಿವರಾಜ್ ಚೌವ್ಹಾಣ್ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆ ತಿಳಿಸಿದ್ದಾರೆ.

PM Launches Dhan Dhanya Krishi Yojana Added Haveri and Gadag Distric of State Boost farmers

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ಈ "ಧನ ಧಾನ್ಯ ಕೃಷಿ ಯೋಜನೆ'ಯಿಂದ ಕೃಷಿಗೆ, ರೈತರಿಗೆ ಒಂದಷ್ಟು ಪ್ರಯೋಜನೆವಾಗಲಿವೆ. ಕೃಷಿ ಉತ್ಪಾದನೆ ಹೆಚ್ಚಳವಾಗಲಿದೆ. ನೀರಾವರಿ ಸೌಲಭ್ಯ, ಅಲ್ಪಾವಧಿ ಹಾಗೂ ದೀರ್ಘಾವಧಿ ಹಣಕಾಸು ನೆರವು ನೀಡುವ ಯೋಜನೆ ಇದಾಗಿದೆ. ಪಂಚಾಯತ್‌ ಮತ್ತು ಬ್ಲಾಕ್‌ ಕೇಂದ್ರಗಳಲ್ಲಿ ದಾಸ್ತಾನು ಘಟಕಗಳ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಮಹತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ಉತ್ತರ ಕರ್ನಾಟಕದ ಹಾವೇರಿ ಮತ್ತು ಗದಗ ಜಿಲ್ಲೆಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಜೀ ಅವರಿಂದ ವರ್ಚ್ಯುಯಲ್ ಮೂಲಕ ಯೋಜನೆಯ ಲೋಕಾರ್ಪಣೆ ಮಾಡಲಿದ್ದಾರೆ.

ಏನಿದು ಯೋಜನೆ? ಇದರ ಉದ್ದೇಶವೇನು?

ಭಾರತದಲ್ಲಿ ಈ ಆಧುನಿಕ ಕೃಷಿ ಯೋಜನೆಯನ್ನು ಕೇಂದ್ರ ಸರ್ಕಾರ "ಕೃಷಿಯಲ್ಲಿ ಹೂಡಿಕೆ ಹೆಚ್ಚಿಸಲು, ರೈತರ ಆದಾಯ ಹೆಚ್ಚಿಸಲು, ಒಟ್ಟಾರೆ ವ್ಯವಸಾಯ ಕ್ಷೇತ್ರ ಉತ್ತೇಜಿಸಲು ಆಹಾರ ಸರಬರಾಜು ವ್ಯವಸ್ಥೆ ಸುಧಾರಿಸಲು, ಹೊಸ ಹೊಸ ತಂತ್ರಜ್ಞಾನ ಪರಿಚಯಿಸುವುದು, ಕೃಷಿ ಉತ್ಪಾದನೆ ಹೆಚ್ಚಿಸುವುದು, ರೈತರ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡುವುದು' ಸೇರಿದಂತೆ ಮಹತ್ತರ ಉದ್ದೇಶದಿಂದ ಈ ಜಾರಿಗೆ ತರಲಾಗುತ್ತಿದೆ.

ಈ ಯೋಜನೆ ಜಾರಿಯಿಂದ 1.7 ರೈತರಿಗೆ ಪ್ರಯೋಜನವಾಗಲಿದೆ. ನೀರಾವರಿಗೆ ಉತ್ತೇಜಿಸುವ ಕಾರಣ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರಗಳ ಲಭ್ಯವಾಗುತ್ತದೆ. ಬಂಜರು ಭೂಮಿಯ ಫಲವತ್ತತೆ ಹೆಚ್ಚಳ ಮಾಡುವ ಅಂಶವು ಇದರಲ್ಲಿದೆ. ರೈತರು ಪಡೆಯುವ ಸಾಲ, ಸಬ್ಸಿಡಿಗಳಿಗೆ ಈ ಯೋಜನೆ ಪೂರಕವಾಗಿದೆ. ಹೀಗೆ ಅನೇಕ ಪ್ರಯೋಜನಗಳನ್ನು ದೇಶದ ರೈತರು ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಯೋಜನೆ 100 ಜಿಲ್ಲೆಗಳಿಗಿಂತಲೂ ಹೆಚ್ಚಿನ ರಾಜ್ಯಗಳಿಗೆ ವಿಸ್ತರಣೆ ಆಗುವ ನಿರೀಕ್ಷೆ ಇದೆ.

ಕೃಷಿ ಯೋಜನೆ ಲೋಕಾರ್ಪಣೆ ಸಮಾರಂಭ

ಇಂದು (ಶನಿವಾರ) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನಮಂತ್ರಿ ಧನ - ಧಾನ್ಯ ಕೃಷಿ ಯೋಜನೆ ಉದ್ಘಾಟನೆಯ ಕಾರ್ಯಕ್ರಮ ನಡೆಯಿತು. ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ - ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿರವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಡಾ ವಿಜಯಮಹಾಂತೇಶ ದಾನಮ್ಮನವರ, ಮಾಜಿ ಶಾಸಕ ವೀರುಪಾಕ್ಷಪ್ಪ ಬಳ್ಳಾರಿ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ವೀರನಗೌಡ ಪುಟ್ಟನಗೌಡ್ರ, ಜಂಟೀ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ, ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಡೀನ್ ಡಾ ಕೆ.ವಿ ಬಸವಕುಮಾರ ಅವರು ಹೊಸ ಯೋಜನೆ ಚಾಲನೆಗೆ ಸಾಕ್ಷಿಯಾದರು.

ಯೋಜನೆಗಳು ಗ್ರಾಮೀಣ ಆರ್ಥಿಕ ಬೆಳವಣಿಗೆಗೆ ಸಹಕಾರಿ

ಪ್ರಧಾನಿಯ ದೂರದೃಷ್ಟಿ ಪರಿಣಾಮವಾಗಿ ಭಾರತವು ತನ್ನ ಕೃಷಿ ಭೂದೃಶ್ಯವನ್ನು ಪರಿವರ್ತಿಸುವತ್ತ ಐತಿಹಾಸಿಕ ಹೆಜ್ಜೆ ಇಟ್ಟಿದೆ. ರೈತರ ಕಲ್ಯಾಣ ಮತ್ತು ಗ್ರಾಮೀಣ ಸಮೃದ್ಧಿಗೆ ಸರ್ಕಾರದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಉದ್ಯಮಗಳ ಖಾತೆ (MSME) ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.

ಹೊಸ ಕೃಷಿ ಯೋಜನೆ ಬಗ್ಗೆ ಎಕ್ಸ್‌ ಪೋಸ್ಟ್ ಮಾಡಿರುವ ಅವರು, ₹24,000 ಕೋಟಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಮತ್ತು ₹11,440 ಕೋಟಿ ದ್ವಿದಳ ಧಾನ್ಯಗಳ ವಲಯದಲ್ಲಿ ಸ್ವಾವಲಂಬನೆಗಾಗಿ ಮಿಷನ್‌ನ ಪ್ರಾರಂಭವಾಗಿದೆ. ಇದು ಅನ್ನದಾತರಿಗೆ ಸಬಲೀಕರಣದ ಹೊಸ ಯುಗದತ್ತ ಕೊಂಡೊಯ್ಯಲಿದೆ. ಇನ್ನೂ ₹5,450 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳ ಸಮರ್ಪಣೆ ಮತ್ತು ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣೆಯಲ್ಲಿ ₹815 ಕೋಟಿ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ್ದು ಸಹ ಗ್ರಾಮೀಣ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+