ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಯರಗೋಳ್ ಡ್ಯಾಂನಲ್ಲಿ ಪೋಲಾಗುತ್ತಿದೆ ನೀರು
ಕೋಲಾರ, ಅಕ್ಟೋಬರ್ 03: ಕೋಲಾರ ತಾಲೂಕು, ಮಾಲೂರು ಮತ್ತು ಬಂಗಾರಪೇಟೆ ಪ್ರದೇಶದ ಜೊತೆಗೆ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯರಗೋಳ್ ಅಣೆಕಟ್ಟು ಯೋಜನೆ ತ್ವರಿತಗತಿಯಲ್ಲಿ ನಡೆಯುತ್ತಿಲ್ಲದ ಕಾರಣ ಸಾಕಷ್ಟು ನೀರು ಪೋಲಾಗುತ್ತಿದೆ. ಈ ಕುರಿತು ಇಲ್ಲಿನ ಜನಪ್ರತಿನಿಧಿಗಳ್ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಾಮರಾಜನಗರ: ಬರಗಿಕೆರೆ ಏರಿ ಒಡೆದೀತು ಹುಷಾರು!
ಯರಗೋಳ್ ಯೋಜನೆ ಪೂರ್ಣಗೊಂಡಿಲ್ಲದ ಕಾರಣ ಸ್ಥಳೀಯರಿಗಾಗುತ್ತಿರುವ ನೀರಿನ ನಷ್ಟದ ಕುರಿತು ಹಿರಿಯ ಪರಿಸರ ವಾದಿ ತ್ಯಾಗರಾಜುರವರು ದಾಖಲೆ ಸಮೇತ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಜೆತೆಗೆ ಈ ಕುರಿತು ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಹಾಕಿ, ಜನಪ್ರತಿನಿಧಿಗಳಿಗೆ ಈ ವಿಡಿಯೋ ತಲುಪುವವರೆಗೂ ಶೆರ್ ಮಾಡುವಂತೆ ಮನವಿಮಾಡಿಕೊಂದಿದ್ದಾರೆ.
ಈ ವಿಡಿಯೋ ನೋಡಿ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
Comments
English summary
plenty of water wasting in Yaragol dam in Kolar, due to negligence of representatives of the area. People express their outrage.
Story first published: Tuesday, October 3, 2017, 15:10 [IST]