ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಯರಿ, ತಾಳ್ಮೆಯ ನೆನಪು ತರುವ ಅಜಾತಶತ್ರು ಧರಂ ಸಿಂಗ್

|
Google Oneindia Kannada News

ಧರಂ ಸಿಂಗ್ ಅಂದಾಕ್ಷಣ ನೆನಪಾಗುವುದು ಅವರ ತಾಳ್ಮೆ. ಜೆಡಿಎಸ್ ಜತೆಗೆ ಕಾಂಗ್ರೆಸ್ ನ ದೋಸ್ತಿ ಸರಕಾರ ರಚನೆಯಾದಾಗ ಮುಖ್ಯಮಂತ್ರಿ ಆದವರು ಧರಂ ಸಿಂಗ್. ತುಂಬ ಒತ್ತಡದ ಸನ್ನಿವೇಶದಲ್ಲೂ ತಾಳ್ಮೆ ಕೆಡುತ್ತಿರಲಿಲ್ಲ. ಅದರಲ್ಲೂ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜೆಡಿಎಸ್ ನಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಧ್ಯೆ ತಿಕ್ಕಾಟ ತಾರಕಕ್ಕೇರಿತ್ತು.

ಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರ

ಇಪ್ಪತ್ತು ತಿಂಗಳ ಕಾಲ ಅವರು ಮುಖ್ಯಮಂತ್ರಿ ಆಗಿದ್ದರು. ಆ ನಂತರ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸೇರಿ ಸರಕಾರ ರಚಿಸಿ, ಮುಖ್ಯಮಂತ್ರಿ ಕೂಡ ಆದರು. ಆದರೆ ಕೊನೆ ಕ್ಷಣದವರೆಗೆ ದೇವೇಗೌಡರು ತಮ್ಮ ನೇತೃತ್ವದ ಸರಕಾರವನ್ನು ಉಳಿಸುತ್ತಾರೆ ಎಂದೇ ಧರಂ ಸಿಂಗ್ ನಂಬಿದ್ದರು.

Patience, Shayari- memories of Dharam Singh

ಬಹಳ ಸೊಗಸಾಗಿ ಶಾಯರಿಗಳನ್ನು ಹೇಳುತ್ತಿದ್ದ ಅವರು, ಮುಖ್ಯಮಂತ್ರಿಯಾಗಿ ಮಾಡಿದ ಕೊನೆ ಪತ್ರಿಕಾಗೋಷ್ಠಿಯಲ್ಲೂ ಶಾಯರಿ ಹೇಳುವ ಮೂಲಕ ತಮ್ಮ ವಿಶ್ವಾಸ ಹೇಳಿಕೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರು ಒಂದೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಆತ್ಮೀಯ ಸ್ನೇಹಿತರು. ಈ ಇಬ್ಬರ ಜೋಡಿ ಕಾಂಗ್ರೆಸ್ ನ ಶಕ್ತಿಯಾಗಿತ್ತು. ಇಬ್ಬರೂ ಹೈಕಮಾಂಡ್ ನ ನಿಷ್ಠರು.

ಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ನಿಧನಮಾಜಿ ಮುಖ್ಯಮಂತ್ರಿ ಎನ್.ಧರಂ ಸಿಂಗ್ ನಿಧನ

ರಾಜಕಾರಣದಲ್ಲಿ ಅಜಾತಶತ್ರು ಎಂಬ ವಿಶೇಷಣ ಸಿಗುವುದು ಅಪರೂಪ. ಆದರೆ ಧರಂ ಸಿಂಗ್ ಅವರನ್ನು ಹಾಗೆ ಕರೆಯುವುದಕ್ಕೆ ರಾಜ್ಯ ರಾಜಕಾರಣದಲ್ಲಿ ಯಾರೂ ಎರಡನೇ ಯೋಚನೆ ಮಾಡುವುದಿಲ್ಲ.

English summary
Patience, Shayari- memories of Dharam Singh during his chief minister period coalition with JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X