ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ವೈ ಅವ್ರದ್ದು ಬಸ್ ಸ್ಟ್ಯಾಂಡ್ ಲವ್, ಕಾಂಗ್ರೆಸ್ಸಿನಗರು ಮುತ್ತೈದೆಯರು: ಸಿಎಂ ಇಬ್ರಾಹಿಂ

|
Google Oneindia Kannada News

ಬೆಂಗಳೂರು, ಜ 17: ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ ತಮ್ಮ ಎಂದಿನ ಸ್ಟೈಲಿನಲ್ಲಿ ಬಿಜೆಪಿ ಮತ್ತು ಯಡಿಯೂರಪ್ಪನವರನ್ನು ಕಿಚಾಯಿಸಿದ್ದಾರೆ.

ಆಪರೇಷನ್ ಕಮಲ ನಡೆಸಲಿಲ್ಲ, ನಾವು ಯಾವ ಆಪರೇಷನ್ ಮಾಡಲು ಹೋಗಿರಲಿಲ್ಲ ಎಂದು ಯಡಿಯೂರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಇಬ್ರಾಹಿಂ, ಯಡಿಯೂರಪ್ಪನವರದ್ದು ಬಸ್ ಸ್ಟ್ಯಾಂಡ್ ಲವ್, ಕಾಂಗ್ರೆಸ್ಸಿನವರು ಮುತ್ತೈದೆಯರು ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಸರ್ಕಾರ ರಚನೆಯನ್ನು ರಸವತ್ತಾಗಿ ಬಣ್ಣಿಸಿದ ಸಿ.ಎಂ.ಇಬ್ರಾಹಿಂ!ಬಿಜೆಪಿ ಸರ್ಕಾರ ರಚನೆಯನ್ನು ರಸವತ್ತಾಗಿ ಬಣ್ಣಿಸಿದ ಸಿ.ಎಂ.ಇಬ್ರಾಹಿಂ!

ಮದುವೆಯಾದ ಹುಡುಗಿಯನ್ನು ನಾವು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ, ನಮ್ಮ ಶಾಸಕರ ಬಳಿ ಬಂದು ನೀನು ಬರ್ತೀಯಾ ಎಂದು ಕೇಳುವುದು, ಯಡಿಯೂರಪ್ಪನವರಿಗೆ ಈ ವಯಸ್ಸಿನಲ್ಲಿ ಇನ್ನೆಷ್ಟು ದಿನ ಬಸ್ ಸ್ಟ್ಯಾಂಡ್ ಲವ್ ಎಂದು ಇಬ್ರಾಹಿಂ ಟೀಕಿಸಿದ್ದಾರೆ.

Operation Kamala: Congress leader CM Ibrahim statement on BJP and Yeddyurappa

ನೀವೇ ಏನೇ ಇದ್ದರೂ ಬಸುರಿಯರನ್ನು ಕರೆದುಕೊಂಡು ಹೋಗಬಹುದೇ ಹೊರತು, ಮುತ್ತೈದೆ ಮತ್ತು ಪತಿವ್ರತೆಯರನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು, ಇಬ್ರಾಹಿಂ ತಮ್ಮ ಪಕ್ಷದ ಶಾಸಕರನ್ನು ಮುತ್ತೈದರಿಗೆ ಹೋಲಿಸಿದ್ದಾರೆ.

ನಾನು ತಮಾಷೆಯಾಗಿ ಇದನ್ನು ಹೇಳಿದ್ದರೂ, ರಾಜ್ಯದ ಜನತೆ ಆಪರೇಷನ್ ಕಮಲ ವಿದ್ಯಮಾನವನ್ನು ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಜನರಿಗೆ ಅನುಕಂಪ ಶುರುವಾಗಿದೆ ಎಂದು ಇಬ್ರಾಹಿಂ ಹೇಳಿದ್ದಾರೆ.

ಆಪರೇಷನ್ ಕಮಲ ನಡೆಸಲೇ ಇಲ್ಲ, ಚುನಾವಣೆ ಬಗ್ಗೆ ಚರ್ಚೆ: ಬಿಎಸ್ವೈಆಪರೇಷನ್ ಕಮಲ ನಡೆಸಲೇ ಇಲ್ಲ, ಚುನಾವಣೆ ಬಗ್ಗೆ ಚರ್ಚೆ: ಬಿಎಸ್ವೈ

ಪಂಚ ರಾಜ್ಯಗಳ ಸೋತ ಮೇಲೆ, ಎಲ್ಲೋ ಕಳೆದುಕೊಂಡಿದ್ದನ್ನು ಕರ್ನಾಟಕದಲ್ಲಿ ಹುಡುಕುತ್ತೇನೆ ಎಂದರೆ ಆಗುವುದಿಲ್ಲ. ಬಳ್ಳಾರಿಯಲ್ಲಿ ಯದ್ವಾತದ್ವ ಸೋತಿದ್ದರೂ ಬಿಜೆಪಿಯವರಿಗೆ ಇನ್ನೂ ಬುದ್ದಿ ಬಂದಿಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ.

English summary
Operation Kamala: Congress leader CM Ibrahim statement on BJP and Yeddyurappa. BSY should stop doing 'bus stand love', Ibrahim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X