Oneindia Impact: ಆನ್ಲೈನ್ ಲೋನ್ ಆಪ್ಗಳ ಅಕ್ರಮ ಬುಡಕ್ಕೆ ಬೆಂಕಿ ಇಟ್ಟ ಇಡಿ!
ಬೆಂಗಳೂರು, ಮೇ. 12: ಆನ್ಲೈನ್ನಲ್ಲೇ ಬಿಡಿಗಾಸು ತುರ್ತು ಸಾಲ ಕೊಟ್ಟು ಮಾನ ಹರಾಜು ಹಾಕಿ ಜೀವ ತೆಗೆಯುತ್ತಿದ್ದ ಇನ್ಸ್ಟೆಂಟ್ ಲೋನ್ ಆಪ್ಗಳ ವಿರುದ್ಧ ಜಾರಿ ನಿರ್ದೇಶನಾಲಯ ಸದ್ದಿಲ್ಲದೇ ಸಮರ ಸಾರಿದೆ. ಬೇನಾಮಿ ವ್ಯವಹಾರ, ಜನರಿಂದ ದುಬಾರಿ ಬಡ್ಡಿ ಸುಲಿಗೆ ಸಂಬಂಧ ಏಳು ಆನ್ಲೋನ್ ಲೋನ್ ಆಪ್ಗಳ ಕೋಟ್ಯಂತರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಆನ್ಲೈನ್ ಲೋನ್ ಆಪ್ಗಳ ವಂಚನೆ, ಮರ್ಯಾದೆ ತೆಗೆಯುವ ಬಗ್ಗೆ ಒನ್ಇಂಡಿಯಾ ಕನ್ನಡ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಭಾರತದ ವಿವಿಧ ರಾಜ್ಯಗಳಲ್ಲಿ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸಿದ್ದ ಚೀನಾ ಮೂಲದ ಏಳು ಆನ್ಲೈನ್ ಲೋನ್ ಆಪ್ ಹೆಸರಿನ ಬ್ಯಾಂಕ್ ಖಾತೆಗಳಲ್ಲಿದ್ದ 76.67 ಕೋಟಿ ರೂ. ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮನಿ ಲಾಂಡರಿಂಗ್ ಆಕ್ಟ್ 2002 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ದೇಶದಲ್ಲಿ ಬೇನಾಮಿ ವಹಿವಾಟು ನಡೆಸುತ್ತಿರುವ ಆನ್ಲೈನ್ ಲೋನ್ ಆಪ್ಗಳ ಅಕ್ರಮದ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಇಡಿ 40 ಅಧಿಕಾರಿಗಳ ಈ ಕಾರ್ಯ ಇದೀಗ ಮತ್ತೆ ತಲೆಯೆತ್ತಿರುವ ತುರ್ತುಸಾಲ ಲೋನ್ ಆಪ್ಗಳಲ್ಲಿ ನಡುಕ ಹುಟ್ಟಿಸಿದೆ.

ಏನಿದು ಅಕ್ರಮ
ಕೊರೊನಾ ಮೊದಲ ಅಲೆ ಬಂದ ಕೂಡಲೇ ಜನರು ಅರ್ಥಿಕ ಸಂಕಷ್ಟಕ್ಕೆ ಒಳಗಾದರು. ಈ ವೇಳೆ ಆನ್ಲೈನ್ನಲ್ಲಿ ಐದು ನಿಮಿಷಕ್ಕೆ ಸಾಲ ಕೊಡುವ ಲೋನ್ ಆಪ್ಗಳು ಹುಟ್ಟಿಕೊಂಡಿದ್ದವು. ಲೋನ್ ಬಯಸುವ ಮೊಬೈಲ್ ಎಲ್ಲಾ ಸಂಪರ್ಕ ಸಂಖ್ಯೆ, ಡಾಟಾ ಕದ್ದು ಸಾಲ ನೀಡುತ್ತಿದ್ದ ಲೋನ್ ಆಪ್ಗಳು, ಶೇ. 40 ರಿಂದ 50 ರಷ್ಟು ಬಡ್ಡಿ, ಚಕ್ರಬಡ್ಡಿ ವಸೂಲಿ ಮಾಡುತ್ತಿದ್ದವು. ಸಾಲ ಮರುಪಾವತಿ ಮಾಡದವರ ಮರ್ಯಾದೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ತೆಗೆಯುತ್ತಿದ್ದರು. ಬಿಡಿಗಾಸು ಪಾವತಿಸಲಾಗದೇ ಮರ್ಯಾದೆಗೆ ಅಂಜಿ ತೆಲಂಗಾಣದಲ್ಲಿ ಕೆಲವರು ಆತ್ಮಹತ್ಯೆಗೆ ಶರಣಾದರು. ಮೊದಲು ಸೈಬರಾಬಾದ್ ಪೊಲೀಸರು ಆನ್ಲೈನ್ ಲೋನ್ ಆಪ್ಗಳ ಅಕ್ರಮವನ್ನು ಬಯಲಿಗೆ ಎಳೆದಿದ್ದರು.

400 ಆಪ್ಗಳ ವಿರುದ್ಧ ದಾಳಿ
ಲೋನ್ ಆಪ್ಗಳ ಅಕ್ರಮ ಜಾಲ ನಡೆಸುತ್ತಿದ್ದ ಕಂಪನಿಗಳ ಮೇಳೆ ದಾಳಿ ನಡೆಸಿದ್ದ ಸೈಬರಾಬಾದ್ ಪೊಲೀಸರು, ಸುಮಾರು 400 ಲೋನ್ ಆಪ್ಗಳನ್ನು ಪಟ್ಟಿ ಮಾಡಿದ್ದರು. ಈ ಜಾಲದಲ್ಲಿ ಶಾಮೀಲಾಗಿದ್ದ ಹಲವರನ್ನು ಬಂಧಿಸಿದ್ದರು. ಲೋನ್ ಆಪ್ ಜಾಲ ಇಡೀ ದೇಶವ್ಯಾಪ್ತಿ ಹರಡಿರುವ ಸಂಗತಿ ಅದಾಗಲೇ ಬೆಳಕಿಗೆ ಬಂದಿತ್ತು. ಆರ್ಬಿಐ ನಿಯಮಗಳನ್ನು ಉಲ್ಲಂಘನೆ ಮಾಡಿ ಆನ್ಲೈನ್ ನಲ್ಲಿ ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದ ಆಪ್ಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಅವನ್ನು ಪ್ಲೇ ಸ್ಟೋರ್ನಿಂದ ತೆಗೆಯುವಂತೆ ಗೂಗಲ್ ಸಂಸ್ಥೆಗೆ ಪತ್ರ ಬರೆದಿತ್ತು. ಸೈಬರಾಬಾದ್ ಪೊಲೀಸರು ಕ್ರಮ ಜರುಗಿಸುತ್ತಿದ್ದಂತೆ ಹಲವು ಆಪ್ಗಳು ಪ್ಲೇ ಸ್ಟೋರ್ನಿಂದ ಕಣ್ಮರೆಯಾಗಿದ್ದವು.

ಒನ್ ಇಂಡಿಯಾ ಸರಣಿ ವರದಿಗಳು
ಆನ್ಲೈನ್ ಲೋನ್ ಆಪ್ಗಳ ಅಕ್ರಮ ರಾಜಧಾನಿ ಬೆಂಗಳೂರಿನಲ್ಲಿ ಲೋನ್ ರೀಕವರಿ ಗುತ್ತಿಗೆ ಪಡೆದಿದ್ದ ಕಾಲ್ ಸೆಂಟರ್ಗಳ ಜಾಲದ ಬಗ್ಗೆ ಒನ್ಇಂಡಿಯಾ ಕನ್ನಡ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಕರ್ನಾಟಕದಲ್ಲಿ ತುರ್ತುಸಾಲ ಆನ್ಲೈನ್ ಲೋನ್ ಆಪ್ಗಳ ಬಡ್ಡಿ ದಂಧೆಯನ್ನು ಎಳೆಎಳೆಯಾಗಿ ಒನ್ಇಂಡಿಯಾ ಕನ್ನಡ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಸಾಮಾಜಿಕ ಜಾಲ ತಾಣದಲ್ಲಿ ಒನ್ಇಂಡಿಯಾ ಪ್ರಕಟಿಸಿದ್ದ ಸರಣಿ ವರದಿಗಳು ಬಹುದೊಡ್ಡ ಚರ್ಚೆ ಹುಟ್ಟು ಹಾಕಿದ್ದವು. ಒನ್ಇಂಡಿಯಾ ಕನ್ನಡ ವರದಿ ಬೆನ್ನಲ್ಲೇ ಸೈಬರಾಬಾದ್ ಪೊಲೀಸರು ಈ ಅಕ್ರಮ ಜಾಲದ ವಿರುದ್ಧ ಕೇಸು ದಾಖಲಿಸಿದ್ದು ಕಾಕತಾಳೀಯ. ಆನಂತರ ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ದೇಶವ್ಯಾಪ್ತಿ ಲೋನ್ ಆಪ್ಗಳ ಅಕ್ರಮದ ವಿರುದ್ಧ ಪ್ರಕರಣಗಳು ದಾಖಲಾದವು. ಚೀನಾ ಮೂಲದ ಲೋನ್ ಆಪ್ಗಳಲ್ಲಿ ಬೇನಾಮಿ ಹಣ ಹೂಡಿಕೆ ಮಾಡಿರುವ ಸುಳಿವಿನ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು.
Recommended Video

ಸಿಸಿಬಿ ಪೊಲೀಸರ ಅರ್ಧ ಕೆಲಸ
ರಾಜ್ಯದಲ್ಲಿ ಆನ್ಲೈನ್ ಲೋನ್ ಆಪ್ಗಳ ವಿರುದ್ಧ ಒಂದಡೆ ಸಿಸಿಬಿ ಪೊಲೀಸರು ಇನ್ನೊಂದಡೆ ಸಿಐಡಿ ಸೈಬರ್ ಘಟಕದ ಪೊಲೀಸರು ಸಮರ ಸಾರಿದ್ದರು. ತುರ್ತು ಸಾಲ ವಸೂಲಿ ಮಾಡಲು, ಸಾಲ ಪಡೆದವರ ಮರ್ಯಾದೆ ತೆಗೆಯಲು ಬೆಂಗಳೂರಿನಲ್ಲಿ ತೆರೆದಿದ್ದ ಕಾಲ್ ಸೆಂಟರ್ ಗಳ ಮೇಲೂ ದಾಳಿ ನಡೆದಿತ್ತು. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಆನ್ಲೈನ್ ಲೋನ್ ಆಪ್ಗಳ ವಿರುದ್ಧ ಕೇಸು ದಾಖಲಿಸಿದ್ದರು. ಆದರೆ, ಲೋನ್ ಆಪ್ಗಳ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಸಿಸಿಬಿ ಪೊಲೀಸರು ಸಂಪೂರ್ಣ ವಿಫಲರಾದರು. ಸಿಸಿಬಿ ಪೊಲೀಸರಂತೆ ಸಿಐಡಿ ಸೈಬರ್ ಘಟಕದ ಪೊಲೀಸರು ಕೂಡ ಆರಂಭದಲ್ಲಿ ತನಿಖೆ ನಡೆಸಿ ನಂತರ ಕೈತೊಳೆದುಕೊಂಡದ್ದರು. ನೆರೆ ರಾಜ್ಯ ತಮಿಳುನಾಡಿನಲ್ಲಿ ಸುಮಾರು 25 ಸಾವಿರ ಕೋಟಿ ವಹಿವಾಟು ನಡೆಸಿದ್ದ ಚೀನಾ ಮೂಲದ ಲೋನ್ ಆಪ್ ಗಳ ಕಿಂಗ್ ಪಿನ್ಗಳನ್ನು ಬಂಧಿಸಿದ್ದನ್ನು ಸ್ಮರಿಸಬಹುದು. ಇದೀಗ ಇಡಿ ಅಧಿಕಾರಿಗಳು ಲೋನ್ ಆಪ್ಗಳಿಗೆ ತಕ್ಕ ಬುದ್ಧಿ ಕಲಿಸುವ ಭರವಸೆ ಮೂಡಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications