ದಕ್ಷಿಣ ಕನ್ನಡದಿಂದ ಹೊರ ಜಿಲ್ಲೆಗೆ ಮರಳು ಸಾಗಿಸುವಂತಿಲ್ಲ
ಮಂಗಳೂರು, ಜೂನ್ 10 : 'ಮುಂಗಾರು ಮಳೆ ಆರಂಭವಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ. ನಿಷೇಧ ಜಾರಿಯಲ್ಲಿರುವ ಅವಧಿಯಲ್ಲಿ ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡುವಂತಿಲ್ಲ' ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
'ದಕ್ಷಿಣ
ಕನ್ನಡ
ಜಿಲ್ಲೆಯಲ್ಲಿ
ಜೂ.16
ರಿಂದ
ಆ
.15ರ
ವರೆಗೆ
ಮರಳುಗಾರಿಕೆಯನ್ನು
ಸಂಪೂರ್ಣವಾಗಿ
ನಿಷೇಧಿಸಲಾಗಿದೆ.
ಈ
ಸಂದರ್ಭದಲ್ಲಿ
ಸ್ಥಳೀಯ
ಕಾಮಗಾರಿಗಳಿಗೆ
ತೊಂದರೆಯಾಗದಂತೆ
ಮರಳು
ಸಂಗ್ರಹಿಸಿ
ಜಿಲ್ಲೆಯಲ್ಲಿ
ಮಾತ್ರ
ಸಾಗಾಟ
ಮಾಡಲು
ಅವಕಾಶ
ನೀಡಲಾಗಿದೆ'
ಎಂದು
ಜಿಲ್ಲಾಧಿಕಾರಿ
ಎ.ಬಿ.
ಇಬ್ರಾಹಿಂ
ಹೇಳಿದ್ದಾರೆ.
[ದಕ್ಷಿಣ
ಕನ್ನಡ
:
ಮರಳುಗಾರಿಕೆ
ನಿಷೇಧ]
ಸಂಗ್ರಹಿಸಿರುವ ಮರಳನ್ನು ಜೂನ್ 16 ರಿಂದ 21ರವರೆಗೆ ಮಾತ್ರ ಸಾಗಾಟ ಮಾಡಬಹುದು. ಆದರೆ, ನಿಷೇಧದ ಅವಧಿಯಲ್ಲಿ ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡಲು ಅವಕಾಶವಿಲ್ಲ. ಈ ಅವಧಿಯಲ್ಲಿ ಅನಧಿಕೃತ ಮರಳುಗಾರಿಕೆ, ಸಾಗಾಟ ತಡೆಯಲು ಪ್ರತಿ ತಾಲೂಕುಗಳಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. [ಮಂಗಳೂರಲ್ಲಿ ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ]
ಸಿಸಿ ಕ್ಯಾಮೆರಾ ಅಳವಡಿಕೆ : ಅನಧಿಕೃತ ಮರಳು ಸಾಗಾಟ ತಡೆಗಟ್ಟಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅದನ್ನು ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿಯೇ ಗಮನಿಸಲಾಗುತ್ತದೆ. ಈಗಾಗಲೇ ಅಕ್ರಮವಾಗಿ ಮರಳ ಸಾಗಣೆ ಮಾಡುತ್ತಿದ್ದ 77 ವಾಹನಗಳ ಪರವಾನಿಗೆ ತಾತ್ಕಾಲಿಕವಾಗಿ ರದ್ದುಪಡಿಸಲು ಇಲಾಖೆಗೆ ಪತ್ರ ಬರೆದು, ಪರವಾನಿಗೆ ರದ್ದು ಮಾಡಲಾಗಿದೆ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]