ವಿದ್ಯುತ್ ಕೊರತೆ : ಬೀದಿ ದೀಪಕ್ಕೂ ಬಂತು ಮಾರ್ಗಸೂಚಿ
ಬೆಂಗಳೂರು, ಸೆಪ್ಟೆಂಬರ್, 10 : ವಿದ್ಯುತ್ ಉಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಸರ್ಕಾರದ ಕಣ್ಣು ಬೀದಿ ದೀಪಗಳ ಮೇಲೆ ಬಿದ್ದಿದೆ. ತಡವಾಗಿ ಬೀದಿ ದೀಪಗಳನ್ನು ಆನ್ ಮಾಡಿ, ಬೇಗನೆ ಆರಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ.
ವಿಧಾನಸೌಧದಲ್ಲಿ
ಬುಧವಾರ
ಪತ್ರಿಕಾಗೋಷ್ಠಿ
ನಡೆಸಿದ
ಇಂಧನ
ಸಚಿವ
ಡಿ.ಕೆ.ಶಿವಕುಮಾರ್
ಅವರು
ಈ
ಕುರಿತು
ಮಾಹಿತಿ
ನೀಡಿದರು.
ಸಂಜೆ
7
ಗಂಟೆಗೆ
ಬೀದಿ
ದೀಪಗಳನ್ನು
ಆನ್
ಮಾಡಿ,
ಬೆಳಗ್ಗೆ
5
ಗಂಟೆಗೆ
ಆಫ್
ಮಾಡಲಾಗುತ್ತದೆ.
[ಬೆಂಗಳೂರಲ್ಲಿ
4
ಗಂಟೆ
ಲೋಡ್
ಶೆಡ್ಡಿಂಗ್]
'ಕೆಲವು ನಗರಗಳಲ್ಲಿ ಸಂಜೆ 6 ಗಂಟೆಗೆ ಬೀದಿ ದೀಪಗಳನ್ನು ಹಾಕಲಾಗುತ್ತಿತ್ತು. ಇನ್ನು ಮುಂದೆ 7 ಗಂಟೆಗೆ ಆನ್ ಮಾಡಲು ಸೂಚನೆ ನೀಡಲಾಗಿದೆ. ಬೆಳಗ್ಗೆ 6 ಗಂಟೆ ಬದಲು 5 ಗಂಟೆಗೆ ಆರಿಸುವಂತೆ ಇಂಜಿನಿಯರ್ಗಳಿಗೆ ಸೂಚನೆ ನೀಡಲಾಗಿದೆ' ಎಂದು ಸಚಿವರು ಹೇಳಿದರು. ['ಕತ್ತಲೆ ಭಾಗ್ಯ' ಯೋಜನೆಯ ಪ್ರಯೋಜನಗಳು ಯಾವವು?!]
ಗಣೇಶನಿಗೂ ಪವರ್ ಇಲ್ಲ : ಈ ಬಾರಿ ವಿದ್ಯುತ್ ಕೊರತೆಯ ಬಿಸಿ ಗಣೇಶ ಚತುರ್ಥಿಗೂ ತಟ್ಟಲಿದೆ. ಗಣೇಶನನ್ನು ಕೂರಿಸುವವರು ನೇರವಾಗಿ ವಿದ್ಯುತ್ ಮಾರ್ಗದಿಂದಲೇ ಅಕ್ರಮವಾಗಿ ಸಂಪರ್ಕ ಪಡೆಯುತ್ತಿದ್ದರು. ಆದರೆ, ಈ ಬಾರಿ ಗಣೇಶ ಉತ್ಸವದ ಕಾರ್ಯಕ್ರಮಗಳಿಗೆ ಜನರೇಟರ್ಗಳನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. [ನಿಮ್ಮ ಏರಿಯಾದಲ್ಲಿ ಎಷ್ಟು ಗಂಟೆ ಪವರ್ ಕಟ್?]
ವಿವಿಧ ರೀತಿಯ ಸುಧಾರಣಾ ಕ್ರಮಗಳ ಮೂಲಕ ಕನಿಷ್ಠ 800 ಮೆಗಾವಾಟ್ ವಿದ್ಯುತ್ ಉಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ವಿವಿಧ ಮೂಲಗಳಿಂದ ವಿದ್ಯುತ್ ಖರೀದಿ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಡಿಸೆಂಬರ್ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯುತ್ ಹಂಚಿಕೆ : ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಂಚಿಕೆ ಮಾಡುವ ವಿದ್ಯುತ್ ಕುರಿತು ಸಚಿವರು ಮಾಹಿತಿ ನೀಡಿದರು. ಬೆಸ್ಕಾಂಗೆ 3,015 ಮೆಗಾವಾಟ್, ಹೆಸ್ಕಾಂಗೆ 1,235 ಮೆಗಾವಾಟ್, ಜೆಸ್ಕಾಂಗೆ 983 ಮೆಗಾವಾಟ್, ಮೆಸ್ಕಾಂಗೆ 513 ಮೆಗಾವಾಟ್ ಹಂಚಿಕೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.