Get Updates
Get notified of breaking news, exclusive insights, and must-see stories!

Channapatna BY Election: ಚನ್ನಪಟ್ಟಣ ಗೆಲುವಿನಲ್ಲಿ ಜಮೀರ್ ರಿಯಲ್ ಹೀರೋ?

ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಎಲ್ಲಾ ಉಲ್ಟಾ ಹೊಡೆದು ಜೆಡಿಎಸ್ ನಾಯಕರ ಎದೆ ನಡುಗಿ ಹೋಗಿದೆ. ನಿಖಿಲ್ ಕುಮಾರಸ್ವಾಮಿ ಗೆಲುವು ಗ್ಯಾರಂಟಿ, ಜೆಡಿಎಸ್ ಮತ್ತೆ ತನ್ನ ಸ್ಥಾನವನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ಉಳಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಇಲ್ಲಿ ಹೀನಾಯ ಸೋಲು ಕಂಡು, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸತತ ಸೋಲಿನ ಸರದಾರನಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಚನ್ನಪಟ್ಟಣ ಗೆಲುವಿನಲ್ಲಿ ರಿಯಲ್ ಹೀರೋ ಆಗಿದ್ದು ಸಚಿವ ಜಮೀರ್ ಅವರು....

ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕು, ಗೆಲ್ಲದೇ ಹೋದರೆ ಪ್ರತಿಷ್ಠೆಯ ಯುದ್ಧದಲ್ಲಿ ಸೋಲು ಗ್ಯಾರಂಟಿ ಎಂಬ ವಾತಾವರಣ ನಿರ್ಮಾಣ ಆಗಿತ್ತು. ಅದರಲ್ಲೂ ಒಕ್ಕಲಿಗರ ಮತಗಳೇ ಇಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಪಕ್ಕಾ ಆಗಿತ್ತು. ಇದೇ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ & ಜೆಡಿಎಸ್ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿದ್ದವು. ಈ ಯುದ್ಧದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಕಾಂಗ್ರೆಸ್ & ಜೆಡಿಎಸ್ ನಾಯಕರ ನಡುವೆ ಹೀರೋ ಆಗಿದ್ದು ಸಚಿವ ಜಮೀರ್ ಅವರು! ಹೇಗೆ ಗೊತ್ತಾ? ಮುಂದೆ ಓದಿ.

nikhil-kumaraswamy-election-strategy-and-zameer-ahmed-khan-speech-in-channapatna-by-election

ಚನ್ನಪಟ್ಟಣದ ಗೆಲುವಿನ ಹೀರೋ ಸಚಿವ ಜಮೀರ್!

ಹೌದು, ನಿರ್ಣಾಯಕ ಹಂತಕ್ಕೆ ತಲುಪಿದ್ದ ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಈಗ ಭರ್ಜರಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷವೇ ಆಗಿದ್ದರೂ ಈ ಗೆಲುವಿನ ಕ್ರೆಡಿಟ್ ಮಾತ್ರ ನೇರವಾಗಿ ಜಮೀರ್ ಅಹ್ಮದ್ ಖಾನ್ ಅವರಿಗೆ ಹೋಗುತ್ತಿದೆ. ಯಾಕಂದ್ರೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಅಖಾಡದಲ್ಲಿ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಬಂದು ಭರ್ಜರಿ ಪ್ರಚಾರ ಮಾಡಿದ್ದರು.

ಮೊದಲೆ ಹೇಳಿದಂತೆ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದರೆ ಒಕ್ಕಲಿಗ ಸಮುದಾಯದ ಮತದಾರ ಪ್ರಭುಗಳ ನಂತರದ ಸ್ಥಾನ ಅಲ್ಪಸಂಖ್ಯಾತರ ಪಾಲಾಗಿದೆ. ಯಾಕಂದ್ರೆ, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಾಗಿವೆ. ಈ ಕಾರಣಕ್ಕೆ, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಅಖಾಡ ಪ್ರವೇಶ ಮಾಡಿಬಿಟ್ಟರು!

ಕಾಂಗ್ರೆಸ್ ಅಬ್ಬರಕ್ಕೆ ಜೆಡಿಎಸ್ ಕಂಗಾಲು?

ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಮಾಡಿದ್ದ ಭಾಷಣಗಳನ್ನು ವಿವಾದದ ರೂಪಕ್ಕೆ ಪರಿವರ್ತನೆ ಮಾಡಿ, ಅಲ್ಲಿಂದ ಒಂದಷ್ಟು ಟರ್ನಿಂಗ್ ಪಡೆಯಲು ಜೆಡಿಎಸ್ & ಬಿಜೆಪಿ ಲೀಡರ್ಸ್ ಎಲ್ಲಾ ರೀತಿ ಪ್ರಯತ್ನ ಮಾಡಿದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಲು ಆರಂಭವಾಗಿತ್ತು.

ಆದ್ರೆ ಕೊನೆಗೂ ಅದು ವರ್ಕೌಟ್ ಆಗಲಿಲ್ಲ, ಈ ಮೂಲಕ ಜಮೀರ್ ಅಹ್ಮದ್ ಖಾನ್ ಅವರ ಪ್ರಚಾರ & ಡಿಕೆ ಬ್ರದರ್ಸ್ ಮಾಡಿದ್ದ ಕಾರ್ಯತಂತ್ರಗಳು ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ದೊಡ್ಡ ಹೊಡೆತ ನೀಡಿದೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಸೋಲಿನ ಮೂಲಕ ಹ್ಯಾಟ್ರಿಕ್ ಸೋಲಿನ ಸುಳಿಗೆ ಸಿಲುಕಿ ಕಂಗಾಲಾಗಿ ಹೋಗಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+