ಮಠಗಳ ಮೇಲೆ ನಿಯಂತ್ರಣ, ಮಠಾಧೀಶರಿಂದ ಹೋರಾಟ
ಬೆಂಗಳೂರು, ಡಿ.22 : ಉತ್ತರಾಧಿಕಾರಿ ನೇಮಕ ವಿವಾದ, ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಮಠಗಳನ್ನು ತನ್ನ ಹತೋಟಿಗೆ ಕಾನೂನು ಪ್ರಕಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ವಿಧೇಯಕವೊಂದನ್ನು ಮಂಡನೆ ಮಾಡಿದೆ. ಆದರೆ, ಹಲವು ಮಠಾಧೀಶರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಕರ್ನಾಟಕ
ಹಿಂದೂ
ಧಾರ್ಮಿಕ
ಸಂಸ್ಥೆಗಳು
ಮತ್ತು
ಧರ್ಮದಾಯ
ದತ್ತಿಗಳ
(ತಿದ್ದುಪಡಿ)
ಮಸೂದೆಯನ್ನು
ರಾಜ್ಯ
ಸರ್ಕಾರ
ಕೈ
ಬಿಡಬೇಕು.
ಇಲ್ಲದಿದ್ದರೆ
ಸಿದ್ದರಾಮಯ್ಯ
ಅವರನ್ನು
ಮುಖ್ಯಮಂತ್ರಿ
ಹುದ್ದೆಯಿಂದ
ಬದಲಾಯಿಸುವವರೆಗೆ
ಹೋರಾಟ
ನಡೆಸುತ್ತೇವೆ
ಎಂದು
ಕಲಬುರಗಿಯಲ್ಲಿ
ಶ್ರೀಶೈಲ
ಸಾರಂಗಧರ
ಮಠದ
ಸಾರಂಗಧರ
ದೇಶಿಕೇಂದ್ರ
ಸ್ವಾಮೀಜಿ
ಹೇಳಿದ್ದಾರೆ.
[ಮಠಗಳ
ಮೇಲೆ
ಹಿಡಿತಕ್ಕೆ
ಸಜ್ಜಾದ
ಸರ್ಕಾರ]
ಇತ್ತ ಮೈಸೂರಿನಲ್ಲಿ ಮಾತನಾಡಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಸರ್ಕಾರ ಮಠಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹುನ್ನಾರ ನಡೆಸಿದೆ. ಇದರ ವಿರುದ್ಧ ಎಲ್ಲ ಮಠಾಧಿಪತಿಗಳನ್ನು ಸೇರಿಸಿ ಹೋರಾಟ ರೂಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. [ಮಠಗಳಿಗೆ ನಿಯಂತ್ರಣ ಬೇಕು : ನಿಡುಮಾಮಿಡಿ ಶ್ರೀ]
24ರಂದು ಪ್ರತಿಭಟನೆ : ಗೋಹತ್ಯೆ ನಿಷೇಧ ಮಸೂದೆ ವಾಪಸ್ ಪಡೆದಿರುವುದು ಹಾಗೂ ಮಠಗಳನ್ನು ಸ್ವಾಧೀನಪಡಿಸಿಕೊಳ್ಳುವ ಮಸೂದೆ ಮಂಡಿಸಿರುವುದನ್ನು ವಿರೋಧಿಸಿ ಡಿ.24ರಂದು ಬಜರಂಗದಳ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಕೊನೆಯ ದಿನ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಮಂಡಿಸಿದ ಮಠಗಳ ನಿಯಂತ್ರಣ ವಿಧೇಯಕಕ್ಕೆ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಮಠ-ಮಾನ್ಯಗಳನ್ನು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಅಕ್ಷಮ್ಯ. ಇಂಥ ಕೆಲಸಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕೈಹಾಕಬಾರದು ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಬಿಜೆಪಿಯೂ ಇದರ ವಿರುದ್ಧ ಹೋರಾಟ ಆರಂಭಿಸಲಿದೆ.