ಹುಬ್ಬಳ್ಳಿಯಲ್ಲಿ ಪಬ್ ದಾಳಿಗೆ ಮುತಾಲಿಕ್ ಸಜ್ಜು?

ಹುಬ್ಬಳ್ಳಿಯ ಹೋಟೆಲ್ ಹಂಸದ ಓಎಂಜಿ ಲಾಂಜ್ ಬಾರ್ ನಲ್ಲಿ ಶನಿವಾರ ಡಿಜೆ ರೋಹಿತ್ ಬಾರ್ಕರ್ ಅವರು ಪಾರ್ಟಿ ಆಯೋಜಿಸಿದ್ದಾರೆ. ಇಂಥ ಪಾರ್ಟಿಗಳನ್ನು ನಡೆಸಲು ಖಂಡಿತ ಬಿಡುವುದಿಲ್ಲ. ಈ ಪಾರ್ಟಿಯನ್ನು ಪೊಲೀಸರು ತಡೆಯದಿದ್ದರೆ ತಮ್ಮ ಸಂಘಟನೆಯ ಕಾರ್ಯಕರ್ತರೇ ಕಾನೂನನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಮುತಾಲಿಕ್ ಗುಡುಗಿದ್ದಾರೆ.
"ಇಂಥಹ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸರು ಜಾಣಕುರುಡುತನ ತೋರಿಸುತ್ತಿದ್ದಾರೆ. ನಮಗೆ ಬೇರೆ ದಾರಿಯೇ ಇಲ್ಲ. ಮಂಗಳೂರಿನಲ್ಲಿ 2009ರಲ್ಲಿ ನಡೆಸಿದ ಪಬ್ ದಾಳಿಯ ರೀತಿಯಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಲೇಬೇಕಾಗುತ್ತದೆ" ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಒಂದು ವರದಿಯ ಪ್ರಕಾರ, ಹುಬ್ಬಳ್ಳಿಯಲ್ಲಿ ಲಕ್ಷುರಿ ಹೋಟೆಲುಗಳಲ್ಲಿ ನಡೆಯುತ್ತಿರುವ ಈ ಡಿಜೆ ಪಾರ್ಟಿಗಳು ರಾತ್ರಿ 11ರ ನಂತರವೇ ಆರಂಭವಾಗುತ್ತವೆ ಮತ್ತು ಮುಕ್ತಾಯವಾಗುವುದು ಕೋಳಿ ಕೂಗುವ ಸಮಯದಲ್ಲಿ. ಇಂಥ ಪಾರ್ಟಿಗಳಿಗೆ ಹೋಗಿರುವ ಕೆಲ ವಿದ್ಯಾರ್ಥಿಗಳು, ಕೆಲ ಪಾರ್ಟಿಗಳು ಬೆಳಗಿನ ಜಾವ 4ರವರೆಗೆ ನಡೆಯುತ್ತವೆ ಎಂಬ ಮಾಹಿತಿ ನೀಡಿದ್ದಾರೆ.
ಬಿವಿಬಿ ಇಂಜಿನಿಯರಿಂಗ್ ಕಾಲೇಜು, ಜಿಕೆ ಕಾನೂನು ಕಾಲೇಜು, ಸಕ್ಕರಿ ಫಾರ್ಮಸಿ ಮತ್ತು ಹೈಸ್ಕೂಲು, ಸಿಐಎಂ ಪಾಲಿಟೆಕ್ನಿಕ್ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳ ಬಳಿಯೇ ಇಂಥ ಅನೇಕ ಹೋಟೆಲುಗಳಿದ್ದು, ಅವುಗಳಲ್ಲಿ ನಡೆಯುವ ಪಾರ್ಟಿ ಮತ್ತು ಮ್ಯೂಸಿಕ್ ಸದ್ದು ಸುತ್ತಲಿನವರನ್ನು ಕೂಡ ಬೆಚ್ಚಿಬೀಳಿಸುತ್ತಿವೆ.
ಮುಚ್ಚಿದ ಕದದ ಹಿಂದೆ ನಡೆಯುವ ಈ ಐಷಾರಾಮಿ ಮತ್ತು ಅನೈತಿಕ ಚಟುವಟಿಕೆಗಳಿಂದ ಕೂಡಿದ ಪಾರ್ಟಿಗಳ ಮೇಲೆ ಪೊಲೀಸರು ಕಡಿವಾಣ ಹಾಕಿಲ್ಲ. ಈ ಪಾರ್ಟಿಗಳಿಗೆ ಹಾಲ್ ಗಳನ್ನು ಬಾಡಿಗೆ ನೀಡುವುದಷ್ಟೇ ನಮ್ಮ ಕೆಲಸ. ಮುಂದಿನದ ನಮ್ಮ ಹಿಡಿತದಲ್ಲಿರುವುದಿಲ್ಲ ಎಂದು ಹೋಟೆಲಿನ ಸಿಬ್ಬಂದಿಯೊಬ್ಬ ಹೇಳಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಬಿ.ಎ. ಪದ್ಮನಾರಾಯಣ ಅವರು, ಅನೈತಿಕ ಚಟುವಟಿಕೆಗಳು ಹೋಟೆಲುಗಳಲ್ಲಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಮತ್ತು ಇವುಗಳಿಗೆ ಅವಕಾಶವನ್ನೂ ನೀಡುವುದಿಲ್ಲ ಎಂದು ಹೇಳಿದ್ದಾರೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications