ಕರಾವಳಿ ಬಂದರಿಗೆ ಬೊಂಬಾಟ್ ಬೂತಾಯಿ!
ಮಂಗಳೂರು, ಜೂನ್ 11 : ಒಂದೆಡೆ ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಸಾರಲಾಗಿದೆ. ಮತ್ತೊಂದೆಡೆ ನಾಡದೋಣಿಗಳು ತೂಫಾನ್ಗಾಗಿ ಕಾದು ಕೂತಿದೆ. ಇವುಗಳ ಜತೆಯಲ್ಲಿ ಬಂದರಿಗೆ ಬೂತಾಯಿ ಮೀನುಗಳು ಭರ್ಜರಿಯಾಗಿ ಬರುತ್ತಿವೆ.
ಈ ವರ್ಷದ ಮೀನುಗಾರಿಕಾ ವರ್ಷದಲ್ಲಿ ಬೂತಾಯಿ ಮೀನು ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಕರಾವಳಿಯ ಮೀನುಗಾರರಿಗೆ ದೊರಕಿತ್ತು. ಇದರಿಂದಾಗಿ ಓಮನ್ ದೇಶದ ಬೂತಾಯಿಗಳು ಗುಜರಾತ್ ಬಂದರಿನ ಮೂಲಕ ಕರಾವಳಿ ಬಂದರಿಗೆ ಬರುತ್ತಿದ್ದವು.[ಕರಾವಳಿಗೆ ಬಂತು ಒಮಾನ್ ಬೂತಾಯಿ ಮೀನು!]

ಮೀನುಗಾರಿಕೆ ಇಲಾಖೆಯ ಲೆಕ್ಕಾಚಾರದ ಪ್ರಕಾರ 2014-15 ರಲ್ಲಿ 26034 ಸಾವಿರ ಟನ್ ಬೂತಾಯಿಗಳನ್ನು ಹಿಡಿಯಲಾಗಿತ್ತು. ಅದೇ 2015-16 ರಲ್ಲಿ 10644 ಸಾವಿರ ಟನ್ ಮೀನುಗಳನ್ನು ಹಿಡಿಯಲಾಗಿತ್ತು. ಈ ಎಲ್ಲ ಲೆಕ್ಕಾಚಾರದ ಪ್ರಕಾರ ಈ ವರ್ಷ ಬೂತಾಯಿ ಮೀನುಗಳ ಸಂಖ್ಯೆ ಬಹಳಷ್ಟು ಕ್ಷೀಣಿಸಿತ್ತು. [ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ]
'ಕರಾವಳಿಯ ಬಂದರಿನಲ್ಲಿ ಬೂತಾಯಿ ಹಾಗೂ ಬಂಗುಡೆ ಈ ಹಿಂದೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮೀನುಗಾರರಿಗೆ ದೊರಕುತ್ತಿತ್ತು' ಎನ್ನುವುದು ಮಂಗಳೂರು ಮೀನುಗಾರಿಕಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಗಣೇಶನ್ ಅವರ ಮಾತು. [ಉಡುಪಿಯಲ್ಲಿ ಗಗನಕ್ಕೇರಿದ ಮೀನಿನ ಬೆಲೆ]
ನೆರೆರಾಜ್ಯಗಳ ಬೂತಾಯಿ : ಕರಾವಳಿಯ ಬಂದರುಗಳಿಗೆ ಇಲ್ಲಿಯ ವರೆಗೆ ಓಮನ್ ದೇಶದಿಂದ ಬೂತಾಯಿಗಳು ಬರುತ್ತಿತ್ತು. ದೊಡ್ಡ ಗಾತ್ರದ ಓಮನ್ ಮೀನುಗಳಿಗೆ ಕೆಜಿ ಯೊಂದಕ್ಕೆ ಭರ್ತಿ 130 ರಿಂದ 140ರ ವರೆಗೆ ದರವಿತ್ತು.
ಈಗ ಕೇರಳ, ಮದ್ರಾಸ್ ಹಾಗೂ ಆಂಧ್ರದಿಂದ ಮೀನುಗಳು ಬರುತ್ತಿವೆ. ಈ ಸಮಯದಲ್ಲಿ ಅವರಿಗೆ ಮೀನುಗಾರಿಕೆಗೆ ಅವಕಾಶವಿದೆ. ವಿಶೇಷವಾಗಿ ಬೂತಾಯಿ ಬಾಕ್ಸ್ ರೂಪದಲ್ಲಿ ಅಂದರೆ 40 ಕೆಜಿ ಬೂತಾಯಿ 3 ಸಾವಿರಕ್ಕೆ ಮಾರಾಟವಾಗಿದೆ. ಇನ್ನೂ ಒಂದೆರಡು ದಿನಗಳಲ್ಲಿ ಈ ದರಗಳಲ್ಲಿ ಏರಿಳಿತಗಳು ಕಾಣಿಸಿಕೊಳ್ಳಬಹುದು.
ತೂಫಾನ್ ಬಂದಿಲ್ಲ : ತೂಫಾನ್ ಬಂದ ನಂತರ ನಾಡ ದೋಣಿ ಮೀನುಗಾರಿಕೆ ಆರಂಭವಾಗುತ್ತದೆ. ಈ ಬಾರಿಯ ತೂಫಾನ್ ಇನ್ನೂ ಕೂಡಾ ಸರಿಯಾಗಿ ನಿಗದಿಯಾಗಿಲ್ಲ. ಜೂನ್ ತಿಂಗಳ ಕೊನೆ ಭಾಗದಲ್ಲಿ ತೂಫಾನ್ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ನಾಡಡೋಣಿ ಮೀನುಗಾರಿಕೆ ಆರಂಭವಾದ ನಂತರ ಕರಾವಳಿಯ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications