ಚಿತ್ರಗಳು : ಕೊಡಗಿನಲ್ಲಿ ತೀವ್ರತೆಗೊಂಡ ಆರಿದ್ರ ಮಳೆಯ ಆರ್ಭಟ
ಕೊಡಗು, ಜೂನ್ 30 : ಕೊಡಗಿನಲ್ಲಿ ಆರಿದ್ರ ಮಳೆಯ ಆರ್ಭಟ ಮುಂದುವರೆದಿದ್ದು, ಕಾವೇರಿ ನದಿ ಸೇರಿದಂತೆ ಜಿಲ್ಲೆಯಾದ್ಯಂತ ನದಿಗಳು ಪ್ರವಾಹದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಮುಳುಗಡೆಗೊಂಡಿದ್ದರಿಂದ ಭಾಗಮಂಡಲ-ಮಡಿಕೇರಿ- ನಾಪೋಕ್ಲು ರಸ್ತೆ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗಿನ ವಿವಿಧೆಡೆಗಳಲ್ಲಿ ರಸ್ತೆಗಳು, ಮನೆಗಳು, ರಕ್ಷಣಾ ಗೋಡೆಗಳು, ಮರಗಿಡಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ಭಾರೀ ಹಾನಿ ಉಂಟಾಗಿದೆ. [ಮಳೆಗಾಲದ ಅತಿಥಿಯಾಗಿ ಬಂದ ಹೆಬ್ಬಾವು!]

ಮಲ್ಲಿಕಾರ್ಜುನ ನಗರದ ಡಾ. ಅಂಬೇಡ್ಕರ್ ಬಡಾವಣೆಯಲ್ಲಿರುವ ದಿವಾಕರ್ ಎಂಬವರ ಮನೆಯ ಹಿಂಭಾಗದ ಅಡುಗೆ ಕೋಣೆ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಚಾಮುಂಡೇಶ್ವರಿ ನಗರದ ನಿವಾಸಿ ನಾಗಮ್ಮ ಎಂಬವರ ಹಳೆಯ ಮನೆ ಕುಸಿದುಬಿದ್ದಿದೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]
ಇದೇ ನಗರದಲ್ಲಿ ಸಮುದಾಯ ಭವನದ ಬಳಿ ತಡೆಗೋಡೆ ಕುಸಿದಿದೆ. ಓಂಕಾರೇಶ್ವರ ದೇವಾಲಯದ ರೆಡ್ ಫರ್ನ್ ಹೋಟೆಲ್ ಬಳಿ ತಡೆಗೋಡೆ ಹಾಗೂ ರಾಜಸೀಟಿನ ಕೆಳಗಿನ ರಸ್ತೆಯಲ್ಲಿ ರಾಜ್ ದರ್ಶನ ಹೋಟೇಲ್ ಮಾಲೀಕರ ಮನೆಯ ತಡೆಗೋಡೆ ಕುಸಿದುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.












Click it and Unblock the Notifications