ಚಿತ್ರಗಳು : ಕೊಡಗಿನಲ್ಲಿ ತೀವ್ರತೆಗೊಂಡ ಆರಿದ್ರ ಮಳೆಯ ಆರ್ಭಟ

ಕೊಡಗು, ಜೂನ್ 30 : ಕೊಡಗಿನಲ್ಲಿ ಆರಿದ್ರ ಮಳೆಯ ಆರ್ಭಟ ಮುಂದುವರೆದಿದ್ದು, ಕಾವೇರಿ ನದಿ ಸೇರಿದಂತೆ ಜಿಲ್ಲೆಯಾದ್ಯಂತ ನದಿಗಳು ಪ್ರವಾಹದ ಮಟ್ಟದಲ್ಲಿ ಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಮುಳುಗಡೆಗೊಂಡಿದ್ದರಿಂದ ಭಾಗಮಂಡಲ-ಮಡಿಕೇರಿ- ನಾಪೋಕ್ಲು ರಸ್ತೆ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗಿನ ವಿವಿಧೆಡೆಗಳಲ್ಲಿ ರಸ್ತೆಗಳು, ಮನೆಗಳು, ರಕ್ಷಣಾ ಗೋಡೆಗಳು, ಮರಗಿಡಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ಭಾರೀ ಹಾನಿ ಉಂಟಾಗಿದೆ. [ಮಳೆಗಾಲದ ಅತಿಥಿಯಾಗಿ ಬಂದ ಹೆಬ್ಬಾವು!]

kodagu

ಮಲ್ಲಿಕಾರ್ಜುನ ನಗರದ ಡಾ. ಅಂಬೇಡ್ಕರ್ ಬಡಾವಣೆಯಲ್ಲಿರುವ ದಿವಾಕರ್ ಎಂಬವರ ಮನೆಯ ಹಿಂಭಾಗದ ಅಡುಗೆ ಕೋಣೆ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಚಾಮುಂಡೇಶ್ವರಿ ನಗರದ ನಿವಾಸಿ ನಾಗಮ್ಮ ಎಂಬವರ ಹಳೆಯ ಮನೆ ಕುಸಿದುಬಿದ್ದಿದೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

ಇದೇ ನಗರದಲ್ಲಿ ಸಮುದಾಯ ಭವನದ ಬಳಿ ತಡೆಗೋಡೆ ಕುಸಿದಿದೆ. ಓಂಕಾರೇಶ್ವರ ದೇವಾಲಯದ ರೆಡ್ ಫರ್ನ್ ಹೋಟೆಲ್ ಬಳಿ ತಡೆಗೋಡೆ ಹಾಗೂ ರಾಜಸೀಟಿನ ಕೆಳಗಿನ ರಸ್ತೆಯಲ್ಲಿ ರಾಜ್ ದರ್ಶನ ಹೋಟೇಲ್ ಮಾಲೀಕರ ಮನೆಯ ತಡೆಗೋಡೆ ಕುಸಿದುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

-

-

-

-

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+