ಮುಂಗಾರು ಮಳೆ ಅಬ್ಬರ: ಜಲಾಶಯಗಳ ಇಂದಿನ ಮಟ್ಟ
ಬೆಂಗಳೂರು, ಜುಲೈ, 06: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಅದರೊಂದಿಗೆ ಜಲಾಶಯಗಳ ಮಟ್ಟದಲ್ಲಿ ಸುಧಾರಣೆ ಕಂಡಿದೆ.
ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಉತ್ತರಕನ್ನಡ ಜಿಲ್ಲೆ ಶಿರಸಿ, ಸಿದ್ದಾಪುರ, ಹೊನ್ನಾವರ ಮತ್ತು ಭಟ್ಕಳದಲ್ಲಿ ಭಾರೀ ಮಳೆಯಾಗುತ್ತಿದೆ.[ತುಂಬಿ ಹರಿಯುವ ತುಂಗಾನದಿಯಲ್ಲಿ ಶಿವಮೊಗ್ಗ ಎಸ್ಪಿ ಸಾಹಸ]

ಶಿವಮೊಗ್ಗ ತಾಲೂಕು ಗಾಜನೂರು ತುಂಗಾ ಜಲಾಶಯ ಭರ್ತಿಯಾದ್ದರಿಂದ 15 ಕ್ರಸ್ಟ್ಗೇಟ್ಗಳನ್ನು ತೆರೆದು ನೀರನ್ನುಹೊರಗೆ ಬಿಡಲಾಗಿದೆ. ಇನ್ನು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ, ಕೊಪ್ಪ. ಕೊಟ್ಟಿಗೆಹಾರದಲ್ಲೂ ಮಳೆಯಾಗುತ್ತಿದೆ.[ಮೈದುಂಬಿದ ಜೋಗ ನೋಡಿಕೊಂಡು ಬನ್ನಿ]
ಉಡುಪಿ ಮತ್ತು ಹೊನ್ನಾವರದಲ್ಲಿ ಮಂಗಳವಾರ 6 ಸೆಂಮೀ ಮಳೆಯಾಗಿದೆ. ಮಂಗಳೂರು, ಕೊಲ್ಲೂರು, ಮಂಕಿ, ಆಗುಂಬೆ, ಹೊಸನಗರದಲ್ಲಿ 5 ಸೆಂ ಮೀ ಮಳೇ ದಾಖಲಾಗಿದೆ. ಪಣಂಬೂರು, ಕುಂದಾಪುರ, ಹುಲಿಕಲ್, ಬಂಟ್ವಾಳ, ಬೆಳ್ತಂಗಡಿ, ಯಲ್ಲಾಪುರದಲ್ಲೂ ಮಳೆಯಾಗುತ್ತಿದೆ.[ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್ನತ್ತ ಪ್ರವಾಸಿಗರ ದೌಡು]
ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆ ಪರಿಣಾಮ ಜಲಾಶಯಗಳ ಒಳ ಹರಿವಿನ ಪ್ರಮಾಣ ಹೆಚ್ಚಿದೆ. ಇದು ಮುಂದಿನ ಕೃಷಿ ಚಟುವಟಿಕೆ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಯಾವ ಜಲಾಶಯದಲ್ಲಿ ಎಷ್ಟು ನೀರು ಶೇಖರಣೆಯಾಗಿದೆ ನೋಡಿಕೊಂಡು ಬನ್ನಿ..
ಜಲಾಶಯಗಳ ಮಟ್ಟ
| ಜಲಾಶಯ | ಇಂದಿನ ಮಟ್ಟ(ಅಡಿ) | ಗರಿಷ್ಠ ಮಟ್ಟ(ಅಡಿ) | ಒಳಹರಿವು(ಕ್ಯೂಸೆಕ್) | ಹೊರಹರಿವು |
| ಕಬಿನಿ | 2,263 | 2,284 | 5,000(ಕ್ಯೂಸೆಕ್) | 2,000 |
| ಲಿಂಗನಮಕ್ಕಿ | 1,771 | 1,819 | 24,568 | --- |
| ಭದ್ರಾ | 129 | 186 | 14,989 | 107 |
| ತುಂಗಭದ್ರಾ | 1,596 | 1,663 | 31,548 | 160 |
| ಕೆಆರ್ ಎಸ್ | 88 | 124.80 | 8662 | 2643 |
| ಹಾರಂಗಿ | 2,848 | 2,859 | 6860 | --- |
| ಹೇಮಾವತಿ | 2,884 | 2,922 | 1864 | 75 |












Click it and Unblock the Notifications