Monsoon in Karnataka: ಜೂನ್‌ನಲ್ಲಿ ಶೇ 50 ಮಳೆ ಕೊರತೆ, 16 ಜಿಲ್ಲೆಗಳಲ್ಲಿ ಬರಗಾಲದಂತಹ ಪರಿಸ್ಥಿತಿ

ಬೆಂಗಳೂರು, ಜುಲೈ 01: ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಮಳೆ ಆಶಾಭಾವನೆ ಮೂಡಿಸಿದ್ದರೂ ಮಳೆಗಾಲದ ಮೊದಲ ತಿಂಗಳ ಜೂನ್‌ನಲ್ಲಿ ಶೇ.50 ರಷ್ಟು ಮಳೆ ಕೊರತೆಯಾಗಿದೆ. ಅಂಕಿಅಂಶಗಳ ಪ್ರಕಾರ, ಜೂನ್‌ನಲ್ಲಿ ಸಾಮಾನ್ಯವಾಗಿ 150 ಮಿಮೀ ಮಳೆಯಾಗುತ್ತಿತ್ತು. ಆದರೆ, ಈ ವರ್ಷದ ಜೂನ್ 30 ರ ವರೆಗೆ ರಾಜ್ಯದಲ್ಲಿ ಸುಮಾರು 75 ಮಿಮೀ ಮಳೆ ದಾಖಲಾಗಿದೆ. ಅದರಲ್ಲಿ ಹೆಚ್ಚಿನ ಮಳೆಯು ಕಳೆದ ವಾರದಲ್ಲಿ ಆಗಿದೆ.

ಶೇ 19ರ ವರೆಗಿನ ಮಳೆ ಕೊರತೆಯನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಶೇ 50 ಕೊರತೆಯು ಗಮನಾರ್ಹ ಕೊರತೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ, ರಾಜ್ಯವು ಜೂನ್‌ನಲ್ಲಿ ಹೆಚ್ಚುವರಿಯನ್ನು ಪಡೆಯಿತು. 2021 ರಲ್ಲಿ ಶೇ 33 ಮತ್ತು 2022 ರಲ್ಲಿ ಶೇ 4 ಹೆಚ್ಚುವರಿ ಮಳೆಯು ರಾಜ್ಯದಲ್ಲಿ ಆಗಿತ್ತು.

monsoon: Karnataka records 50% rain deficit in June, 16 districts face drought-like situation

ಈ ಕುರಿತು ಮಾತನಾಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಈ ವರ್ಷ ಕೊರತೆಯು ಶೇ 66 ರಷ್ಟಿತ್ತು. ಆದರೆ, ಕಳೆದ ವಾರದಲ್ಲಿ ಮಳೆ ಸುರಿದದ್ದು ಸುಮಾರು ಶೇ 50 ಕ್ಕೆ ಇಳಿದಿದೆ ಎಂದು ಹೇಳಿದರು. ರಾಜ್ಯದ 31 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ. ಅವುಗಳಲ್ಲಿನ ಕೊರತೆಯು ಶೇ 60 ಮತ್ತು ಶೇ 99 ರ ನಡುವೆ ಇದೆ.

ಮುನ್ಸೂಚನೆಯ ಪ್ರಕಾರ, ಜುಲೈ ಆರಂಭದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಅವರು ಹೇಳಿದರು. 'ತಾಲ್ಲೂಕುಗಳು ಮತ್ತು ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸುವ ಮೊದಲು ನಾವು ಅಲ್ಲಿಯವರೆಗೆ ಕಾಯಲು ನಿರ್ಧರಿಸಿದ್ದೇವೆ' ಎಂದು ಕೃಷ್ಣ ಬೈರೇಗೌಡ 'ಟೈಮ್ಸ್‌ ಆಫ್‌ ಇಂಡಿಯಾ' ಪತ್ರಿಕೆಗೆ ತಿಳಿಸಿದ್ದಾರೆ.

monsoon: Karnataka records 50% rain deficit in June, 16 districts face drought-like situation

ಕಂದಾಯ ಇಲಾಖೆ ಅಧಿಕಾರಿಗಳೂ ಭರವಸೆ ಇಟ್ಟುಕೊಂಡಿದ್ದಾರೆ. ಕೊರತೆ ಆತಂಕಕಾರಿಯಾಗಿದೆ. ಜುಲೈನಲ್ಲಿ ಗರಿಷ್ಠ ಮಳೆ ಆಗುವ ಸಾಧ್ಯತೆ ಇದೆ. ಇದು ರಾಜ್ಯದಲ್ಲಿ ಮಳೆ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ ಇದು ಸಹಜವಾಗುತ್ತಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಉತ್ತಮ ಮಳೆಯಾಗುತ್ತದೆ. ಜುಲೈ ತಿಂಗಳ ಮುನ್ಸೂಚನೆಯು ಮಾನ್ಸೂನ್ ಟ್ರಫ್ ಲೈನ್ ವಾತಾವರಣದ ಕೆಳಗಿನ ಪದರಗಳಿಗೆ ಇಳಿದಿದೆ ಮತ್ತು ಇದು ವ್ಯಾಪಕ ಮಳೆಯನ್ನು ಪ್ರಚೋದಿಸುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆದಾಗ್ಯೂ, ಅಲ್ಪ ಪ್ರಮಾಣದ ಮಳೆಯು ಅನೇಕ ಜಿಲ್ಲೆಗಳಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ. ಏಕೆಂದರೆ ಹಲವಾರು ಪ್ರಮುಖ ಜಲಾಶಯಗಳಿಗೆ ಶೂನ್ಯ ಒಳಹರಿವು ಇದೆ.

ಬೆಂಗಳೂರಿಗೆ ಕಾವೇರಿ ನೀರನ್ನು ಪೂರೈಸುವ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟಿನ ನೀರಿನ ಮಟ್ಟವು ಪ್ರಸ್ತುತ 77 ಅಡಿಗಳಲ್ಲಿದ್ದು, ಅದರ ಗರಿಷ್ಠ ಸಾಮರ್ಥ್ಯದ 124.8 ಅಡಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಇದರಿಂದ ರಾಜ್ಯಾದ್ಯಂತ ಬಿತ್ತನೆಗೂ ಹಾನಿಯಾಗಿದೆ.

ಜುಲೈ ಮೊದಲ ವಾರದಲ್ಲಿ ಮಳೆಯಾದರೆ ರೈತರು ಬಿತ್ತನೆಗೆ ಮುಂದಾಗಬೇಕಾಗುತ್ತದೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕಳೆದ ಮೂರು ವರ್ಷಗಳಿಂದ ದಾಖಲೆಯ ಆಹಾರ ಧಾನ್ಯ ಉತ್ಪಾದನೆಯಾಗಿದೆ. ಆದರೆ, ಈ ಬಾರಿ ಉತ್ಪಾದನೆಯಲ್ಲಿ ಕುಸಿತದ ಮುನ್ಸೂಚನೆ ಇದೆ ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+