ರಾಜ್ಯಾದ್ಯಂತ ವ್ಯಾಪಿಸಿದ ಮುಂಗಾರು: ಕರಾವಳಿಗೆ ಎಚ್ಚರಿಕೆ
ಬೆಂಗಳೂರು, ಜೂನ್ 12: ನಿರೀಕ್ಷೆಯಂತೆ ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದೆ. ಕರಾವಳಿ ಪ್ರದೇಶಗಳ ಜೊತೆಗೆ ಇಡೀ ರಾಜ್ಯಕ್ಕೆ ಮುಂಗಾರು ವ್ಯಾಪಿಸಿದೆ.
Recommended Video
Bengaluru corona cases are getting scarier everyday | Bengaluru | Oneindia Kannada
ಕರಾವಳಿ ಪ್ರದೇಶ ಹಾಗೂ ಮಲೆನಾಡಿನಲ್ಲಿ ವರುಣ ಆರ್ಭಟ ಜೋರಾಗಿರಲಿದೆ. ಉಳಿದ ಕಡೆ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಹೇಳಿದೆ.
ಜೂನ್ 1ರಿಂದ ಈವರೆಗೂ ವಾಡಿಕೆಯಂತೆ 55 ಮೀ.ಮೀ ಮಳೆಯಾಗುವ ಬದಲು 60 ಮೀ.ಮೀ ಪ್ರಮಾಣದಷ್ಟು ಮಳೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಇಂದು ಸಹ ಮಳೆ ಮುಂದುವರಿದೆ. ಮೆಜೆಸ್ಟಿಕ್, ಶಿವಾಜಿನಗರ, ಯಶವಂತಪುರ, ಶಾಂತಿನಗರ, ರಾಜಭವನ್ ಸುತ್ತಾಮುತ್ತ ಮಳೆಯಾಗಿದೆ.
ವಾಯುಭಾರ ಕುಸಿತ ಹಿನ್ನೆಲೆ ರಾಜ್ಯಾದ್ಯಂತ ಇನ್ನು ಕೆಲವು ದಿನ ಸತತವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications