Get Updates
Get notified of breaking news, exclusive insights, and must-see stories!

ಪಡಿತರ ವಿತರಕರ ಮಾಲೀಕರ ಬೇಡಿಕೆಗಳ ಕುರಿತು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದೇನು?

ಬೆಂಗಳೂರು: ನಮ್ಮ ಸರ್ಕಾರವು ಪಡಿತರ ವಿತರಕರ ಮಾಲೀಕರಿಗೆ ಕಮಿಷನ್ ಹೆಚ್ಚಳ ಮಾಡಿದ್ದು, ಸರ್ಕಾರವು ಪಡಿತರ ವಿತರಕರ ಮಾಲೀಕರಿಗೆ ಪರವಾಗಿದೆ. ಮುಂದೆ ರಾಜ್ಯದ ಜನರಿಗೆ ಅನುಕೂಲವಾಗಲು ಇಂದಿರಾ ಕಿಟ್ ಮೂಲಕ ತೊಗರಿ ಬೇಳೆ,ಎಣ್ಣೆ,ಸಕ್ಕರೆ,ಉಪ್ಪು ನೀಡಲು ಯೋಜನೆ ರೂಪಿಸಿದ್ದು, ನಿಮಗೂ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಮ್ಮ ಪರವಾಗಿದ್ದೇವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಹೇಳಿದರು.

ರಾಜ್ಯ ಪಡಿತರ ವಿತರಕರ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಉದ್ಘಾಟಿಸಿದರು. ರಾಜ್ಯ ಪಡಿತರ ವಿತರಕ ಸಂಘದ ವತಿಯಿಂದ ನೂತನ‌ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಂಘದ ವತಿಯಿಂದ ನಿರ್ಮಾಣವಾಗುತ್ತಿರುವ ನ್ಯಾಯ ಬೆಲೆ ಅಂಗಡಿ ಕುರಿತ ಸಿನಿಮಾದ ಟೀಸರ್ ಅನ್ನು ಅನಾವರಣ ಗೊಳಿಸಿದರು. ನಂತರ ಮಾತನಾಡಿ, ಕೇಂದ್ರ ಸರ್ಕಾರದಿಂದ ಸೂಕ್ತ ವಾದ ದರದಲ್ಲಿ ರಾಗಿ ಮತ್ತು ಜೋಳಕ್ಕೆ ಬೆಂಬಲ ಬೆಲೆ ನೀಡಿರುವುದರಿಂದ ಕೇಂದ್ರದ ಆಹಾರ ಸಚಿವ ಜೋಶಿಯವರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸಬೇಕಾಗುತ್ತದೆ ಎಂದರು.

Minister KH Muniyappa Our government is in favor of the owners of ration distributors

ಗ್ರಾಹಕರ ಕುರಿತು ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ ಗ್ರಾಹಕ ಎಂದರೆ ಅನಪೇಕ್ಷಿತ ವ್ಯಕ್ತಿ ಅಲ್ಲ ಆತ ನಮ್ಮಲ್ಲಿಗೆ ಬರುವ ಗೌರವಾನ್ವಿತ ವ್ಯಕ್ತಿ. ಆತ ನಮ್ಮಿಂದ ಉಪಕಾರ ಬಯಸುವುದಿಲ್ಲ.ಬದಲಾಗಿ ಆತನ ಭೇಟಿ ನಮಗೆ ಸೇವೆಯ ಅವಕಾಶ ಕೊಡುತ್ತದೆ. ನಾವೆಲ್ಲರೂ ಗ್ರಾಹಕರ ಕೆಳಗೆ ಕೆಲಸ ಮಾಡಬೇಕಾಗುತ್ತದೆ ಮುಖ್ಯಮಂತ್ರಿ ಯಾಗಲಿ ನಾವಾಗಲಿ ಎಲ್ಲಾರೂ ಗ್ರಾಹಕ ಸೇವೆಯಲ್ಲಿ ತೊಡಗಿರುತ್ತೇವೆ ಎಂದರು. ಕೇಂದ್ರ ಸಚಿವರೊಂದಿಗೆ ಬೇಟಿ ಮಾಡಿ ಸಭೆಯನ್ನು ನಡೆಸಿ ತಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಜನಸಂಖ್ಯೆ ಆಧಾರಿತ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದೆ ಎಂದು ಪ್ರಶಂಸಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವು ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡುವ ಗುರಿ ಹೊಂದಿದ್ದು, ಅದನ್ನು ಅಕ್ಷರಶಃ ಅನುಷ್ಠಾನಗೊಳಿಸುವ ಬದ್ಧತೆ ನಮ್ಮ ಸರ್ಕಾರದ್ದಾಗಿದೆ ಎಂದು ಸ್ಪಷ್ಟಪಡಿಸಿದರು.

ಸಮಾಜದ ದಶಕಗಳ ಹೋರಾಟಕ್ಕೆ ಇಂದು ಫಲ ದೊರೆತಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣದಲ್ಲಿ ಸಮಾನ ಅವಕಾಶ ಕಲ್ಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು. ಒಗ್ಗಟ್ಟು, ಪಕ್ಷಾತೀತ ಚಿಂತನೆ, ಶಿಕ್ಷಣದ ಮಹತ್ವ ಮತ್ತು ಸಹೋದರತ್ವವೇ ಸಮಾಜದ ಬಲ ಎಂದು ತಿಳಿಸಿದ ಅವರು, ಸಮುದಾಯ ಸಂಘಟನೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಆಯುಕ್ತರಾದ ರವಿಕುಮಾರ್,ನಿಗಮ ನಿರ್ದೇಶಕರಾದ ಜಗದೀಶ್ , ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಪಡಿತರ ವಿತರಕ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ , ಅಧಿಕಾರಿಗಳು,ಪಡಿತರ ವಿತರಕ ಮಾಲಿಕ ಸಂಘದ ಮಾಲಿಕರು ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+