ಟ್ವಿಟ್ಟರಲ್ಲಿ #ImplementKalasaBanduri ಟ್ರೆಂಡ್ ಆಗಲೇಬೇಕ್!
ಮದುವೆ ಮುಂಜಿಯ ವಾರ್ಷಿಕೋತ್ಸವವೆಂದರೆ ಅಲ್ಲೊಂದು ಸಂಭ್ರಮವಿರುತ್ತದೆ. ಆದರೆ, ಹನಿಹನಿ ನೀರಿಗಾಗಿ ನಡೆಸುತ್ತಿರುವ ಹೋರಾಟಕ್ಕೇ ಒಂದು ವರ್ಷ ಸಂದಿದೆಯೆಂದು ಸಂಭ್ರಮದಿಂದ ಆಚರಿಸಬೇಕೋ, ಈ ಹೋರಾಟವನ್ನು ಕಡೆಗಣಿಸಿದವರನ್ನು ಹಿಡಿದುಕೊಂಡು ಬಾರಿಸಬೇಕೋ?
ಕಳಸಾ ಬಂಡೂರಿ ನೀರಿನ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿರುವ ನೋವಿನ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ಮಾಡುವುದಕ್ಕೆ ಸಾಮಾಜಿಕ ಜಾಲತಾಣದ ಕನ್ನಡಿಗರು ತಯಾರಾಗಿದ್ದಾರೆ. ಜುಲೈ 13ರ ಬುಧವಾರ ಬೆಳಿಗ್ಗೆ 7 ಗಂಟೆಯಿಂದ #ImplementKalasaBanduri ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕನ್ನಡಿಗರು ಟ್ವೀಟ್ ಯುದ್ಧವನ್ನು ಆರಂಭಿಸಲಿದ್ದಾರೆ.
ನಾಡಿನ ಗಣ್ಯರಾದ ನಟ ಶಿವರಾಜ್ ಕುಮಾರ್, ದೊಡ್ಡಣ್ಣ, ಸ್ವಾಮಿಗಳಾದ ಬಸವ ಮೃತ್ಯುಂಜಯ, ಡಾ. ಶಿವಕುಮಾರ ಸ್ವಾಮೀಜಿ, ನಿರ್ಮಾಲಾನಂದ ಸ್ವಾಮೀಜಿ, ಹಲವಾರು ಕವಿಗಳು, ಚಂದ್ರಶೇಖರ್ ಕಂಬಾರರಂತ ದೊಡ್ಡ ಸಾಹಿತಿಗಳು ಹೋರಾಟಗಾರರಿಗೆ ಶುಭಕೋರಿ ಅವರ ವಿಡಿಯೋ ಮೂಲಕ ಬೆಂಬಲಿಸಿದ್ದಾರೆ. ಖ್ಯಾತನಾಮರು ಮಾತ್ರ ಬೆಂಬಲಿಸಿದರೆ ಸಾಕಾಗುವುದಿಲ್ಲ, ಇಡೀ ನಾಡಿನ ಪ್ರತಿ ಕನ್ನಡಿಗರು ಈ ಹೋರಾಟಕ್ಕೆ ಶಕ್ತಿ ನೀಡಬೇಕು. [ಕಳಸಾ ಬಂಡೂರಿ ಹೋರಾಟಕ್ಕೆ ಐಟಿಬಿಟಿ ಕನ್ನಡಿಗರ ಕಿಚ್ಚು]

ಕಾವೇರಿ ನೀರನ್ನು ತಮಿಳುನಾಡಿಗೆ, ಮಹದಾಯಿ ನದಿಯ ನೀರನ್ನು ಗೋವಾಕ್ಕೆ ಕೊಟ್ಟರೆ ಕನ್ನಡಿಗರು ಏನ್ ಮಾಡ್ಬೇಕು? ಕೇಂದ್ರ ಸರ್ಕಾರ - ರಾಜ್ಯ ಸರ್ಕಾರಗಳು ಒಂದು ನಿಲುವಿಗೆ ಬಂದು ಸಮಸ್ಯೆ ಬಗೆಹರಿಸುವಂತಾಗಲೆಂದು ಒತ್ತಾಯಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಕನ್ನಡಿಗರು ಮಾತ್ರವಲ್ಲ ಕರ್ನಾಟಕದ ಗಾಳಿ ನೀರು ಸೇವಿಸುತ್ತಿರುವ ಪ್ರತಿ ನಾಗರಿಕರು ಕೈಜೋಡಿಸಬೇಕು.
ಕನ್ನಡಿಗರು ಮಾಡಬೇಕಿರುವುದು ಇಷ್ಟೇ : ಎಲ್ಲರೂ ನಾಳೆ ನಿಮ್ಮ ನಿಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಒಂದು ಸೆಲ್ಫೀ ವಿಡಿಯೋವನ್ನು "I SUPPORT KALASA BANDURI FROM 'YOUR PLACE'" ಅಂತ ಮಾಡಿ ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿರಿ.
Your Place ಅಂತ ಇದ್ದಲ್ಲಿ ನಿಮ್ಮ ಊರನ್ನು ನಮೂದಿಸಿ. ಯಾಕೆ ನಿಮ್ಮ ಊರಿನ ಹೆಸರು ಅಂದ್ರೆ, ಇಡೀ ದೇಶಕ್ಕೆ ಗೊತ್ತಾಗಲಿ, ಪೂರ್ತಿ ಕರ್ನಾಟಕ ಜನ ಕಳಸಾ ಬಂಡೂರಿಗೆ ಸಪ್ಪೋರ್ಟ್ ಮಾಡ್ತಿದಾರೆ ಎಂದು. [ಏನಿದು ಕಳಸಾ-ಬಂಡೂರಿ ಯೋಜನೆ?]

ಉದಾಹರಣೆಗೆ :
I SUPPORT KALASA BANDURI FROM ಹಾನಗಲ್
I SUPPORT KALASA BANDURI FROM ಬೆಂಗಳೂರು
I SUPPORT KALASA BANDURI FROM ಕುಂದಾಪುರ
ಹೀಗೆ ಜುಲೈ 13ರಂದು ಬುಧವಾರ ಫೇಸ್ ಬುಕ್ ನಲ್ಲಿ ಮತ್ತು ಟ್ವಿಟ್ಟರಲ್ಲಿ ಲಕ್ಷಾಂತರ ವಿಡಿಯೋ ಹರದಾಡಲಿ. ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಬರಲಿ. ಬೆಂಬಲಿಸದೆ ತಣ್ಣಗೆ ಕುಳಿತವರಿಗೂ ಬಿಸಿ ಮುಟ್ಟಲಿ. ಇದು ಪಕ್ಷಾತೀತ ಮತ್ತು ನಮ್ಮ ಜನರ ಕೂಗಿಗೆ ಬಲ ಕೊಡುವ ಹೋರಾಟ. ಎಲ್ಲರೂ ಇದನ್ನು ಬೆಂಬಲಿಸೋಣ. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications