ಮಹಾದಾಯಿ ವಿವಾದ: ಚರ್ಚೆಗೆ ಬನ್ನಿ ಎಂದು ಎಚ್ಡಿಕೆಯಿಂದ ಆಹ್ವಾನ
ಬೆಂಗಳೂರು, ಸೆ. 27: ಕರ್ನಾಟಕ ಮತ್ತು ಗೋವಾ ನಡುವೆ ಉಂಟಾಗಿರುವ ನದಿ ನೀರು ಹಂಚಿಕೆ ವಿವಾದ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಗೋವಾದ ಮುಖಂಡರೊಡನೆ ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ.
ಕಳಸಾ-ಬಂಡೂರಿ ಕುಡಿಯುವ ನದಿ ನೀರು ಯೋಜನೆ ಅನುಷ್ಠಾನ ಹಾಗೂ ಮಹದಾಯಿ ನದಿ ನೀರು ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲು ಸಮಯ ನಿಗದಿಪಡಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಗೋವಾದ ವಿರೋಧ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.[ಕಳಸಾ-ಬಂಡೂರಿ ಹೋರಾಟಕ್ಕೆ ಕೈ ಜೋಡಿಸಿದ ಕರ್ನಾಟಕ]
ಇದಲ್ಲದೆ
ಗೋವಾದ
ಮಾಜಿ
ಮುಖ್ಯಮಂತ್ರಿ
ಹಾಗೂ
ಹಾಲಿ
ವಿಧಾನಸಭೆ
ಪ್ರತಿಪಕ್ಷದ
ನಾಯಕ
ನಾರಾಯಣ
ಸಿಂಗ್
ರಾಣೆ
ಹಾಗೂ
ಪ್ರದೇಶ
ಗೋವಾ
ಕಾಂಗ್ರೆಸ್
ಸಮಿತಿ
ಅಧ್ಯಕ್ಷ
ಲುಜಿನೋ
ಫಲೇರಿಯೋಗೆ
ಪ್ರತ್ಯೇಕ
ಪತ್ರ
ಬರೆದಿದ್ದಾರೆ.
ಕರ್ನಾಟಕದ ಐದು ಜಿಲ್ಲೆಗಳಿಗೆ ಮಹದಾಯಿ ನದಿಯಿಂದ ಕಳಸಾ-ಬಂಡೂರಿ ನಾಲಾ ಮೂಲಕ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಆದ್ದರಿಂದ ಪ್ರಕರಣವನ್ನು ನ್ಯಾಯಾಧಿಕರಣದಿಂದ ಹೊರಗಿಟ್ಟು ಸಮಸ್ಯೆ ಪರಿಹರಿಸಲು ಉಭಯ ರಾಜ್ಯಗಳ ನಾಯಕರು ಮುಂದಾಗಬೇಕೆಂದು ಪತ್ರದಲ್ಲಿ ಕೋರಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]
ರಾಜ್ಯದಲ್ಲಿ
ಬರಗಾಲವಿದೆ:
ಕರ್ನಾಟಕದಲ್ಲಿ
ಇಂದು
27
ಜಿಲ್ಲೆಗಳಲ್ಲಿ
ಬರಗಾಲ
ಭೀಕರವಾಗಿ
ಆವರಿಸಿದೆ.
ವಿಶೇಷವಾಗಿ
ಉತ್ತರ
ಕರ್ನಾಟಕದಲ್ಲಿ
ಇದರ
ಪರಿಸ್ಥಿತಿ
ಊಹೆಗೂ
ನಿಲುಕದಂತಾಗಿದೆ.
ಈ
ಹಿನ್ನೆಲೆಯಲ್ಲಿ
ನ್ಯಾಯಾಧಿಕರಣದ
ಅಂತಿಮ
ತೀರ್ಪು
ಬರುವವರೆಗೂ
ಕಾಯದೆ
ಮಾತುಕತೆ
ಮೂಲಕವೇ
ಪರಿಹರಿಸಿಕೊಳ್ಳುವುದು
ಒಳಿತು
ಎಂದು
ಕುಮಾರಸ್ವಾಮಿ
ಸಲಹೆ
ಮಾಡಿದ್ದಾರೆ.
[ಮಹದಾಯಿ
ಪರಿಹಾರಕ್ಕೆ
ಸರ್ಕಾರ
ಬದ್ಧ:
ಎಂಬಿ
ಪಾಟೀಲ್]
'ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದೇನೆ. ಈವರೆಗೂ ನನಗೆ ಸಮಯಾವಕಾಶ ನಿಗದಿಯಾಗಿಲ್ಲ. ಉಭಯ ನಾಯಕರು ಮಾತುಕತೆಗೆ ಸಮಯ ನಿಗದಿಪಡಿಸಿದರೆ ಗೋವಾಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.[ರಾಜಕಾರಣಿಗಳೇ, ಉತ್ತರ ಕರ್ನಾಟಕ ಬಾಯಾರಿದೆ!]
ಈ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಉತ್ತರ ಕರ್ನಾಟಕದಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥಪಡಿಸಿ ಉಭಯ ರಾಜ್ಯಗಳು ಸೌಹಾರ್ದಯುತವಾಗಿರಲು ಹೊಸ ಮುನ್ನುಡಿ ಬರೆಯೋಣ ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.