ಮೈಸೂರಿನಲ್ಲಿ ಮ್ಯಾಗಿಗೆ ಮತ್ತೊಂದು ಪರೀಕ್ಷೆ
ನವದೆಹಲಿ, ಜನವರಿ 13 : ಮ್ಯಾಗಿಗೆ ಮತ್ತೊಂದು ಪರೀಕ್ಷೆ ಎದುರಾಗಿದೆ. ಮ್ಯಾಗಿ ನೂಡಲ್ಸ್ನಲ್ಲಿನ ಸೀಸ ಹಾಗೂ ಮಾನೊಸೋಡಿಯಂ ಗುಟ್ಲಮೆಟ್ ಪ್ರಮಾಣ ಎಷ್ಟಿದೆ? ಎಂದು ಸ್ಪಷ್ಟವಾಗಿ ತಿಳಿಸುವಂತೆ ಸುಪ್ರೀಂಕೋರ್ಟ್ ಮೈಸೂರಿನ ಸಿಎಫ್ಟಿಆರ್ಐಗೆ ಸೂಚನೆ ನೀಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ ಮುಂದುವರೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ, ಯಾವುದೇ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. [ಮ್ಯಾಗಿಗೆ ಮೈಸೂರಿನಲ್ಲಿ ಪರೀಕ್ಷೆ]

ಮ್ಯಾಗಿಯಲ್ಲಿನ ಸೀಸ ಹಾಗೂ ಮಾನೊಸೋಡಿಯಂ ಗುಟ್ಲಮೆಟ್ ಪ್ರಮಾಣವು ಕಾಯ್ದೆಯನ್ವಯ ಅನುಮತಿ ನೀಡಬಹುದಾದ ಅಳತೆಯಲ್ಲೇ ಇದೆಯೇ? ಎಂಬ ಬಗ್ಗೆ ಹೆಚ್ಚಿನ ವಿವರದ ಅಗತ್ಯವಿದೆ ಎಂದು ಹೇಳಿದ ಕೋರ್ಟ್, ಮತ್ತೊಮ್ಮೆ ವರದಿ ನೀಡುವಂತೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ)ಗೆ ಸೂಚನೆ ನೀಡಿತು. [ಮ್ಯಾಗಿ ಮ್ಯಾಜಿಕ್: 21 ದಿನದಲ್ಲಿ 50 ಮಿಲಿಯನ್ ಮಾರಾಟ]
2015ರ ಡಿಸೆಂಬರ್ 16ರಂದು ಅರ್ಜಿಯ ವಿಚಾರಣೆ ವೇಳೆ ಮ್ಯಾಗಿ ಪರೀಕ್ಷೆ ನಡೆಸುವಂತೆ ಕೋರ್ಟ್ ಸಿಎಫ್ಟಿಆರ್ಐಗೆ ಸೂಚನೆ ನೀಡಿತ್ತು. ಪ್ರಯೋಗಾಲಯ ಸಲ್ಲಿಸಿದ್ದ ಎರಡು ಪ್ರಮಾಣ ಪತ್ರಗಳನ್ನು ಇಂದು ಪರಿಶೀಲಿಸಿದ ಕೋರ್ಟ್, ಹೆಚ್ಚಿನ ವಿವರಣೆ ಬೇಕಾದ ಅಗತ್ಯವಿದೆ ಎಂದು ಹೇಳಿತು. [ವಾವ್! ಮತ್ತೆ ಭಾರತೀಯರ ಹೊಟ್ಟೆ ಸೇರಲಿದೆ ಮ್ಯಾಗಿ?]
ಪರೀಕ್ಷೆಗೆ ಅಗತ್ಯವಿದ್ದರೆ ಪುನಃ ಮ್ಯಾಗಿ ಮಾದರಿಗಳನ್ನು ಸಂಗ್ರಹಣೆ ಮಾಡಬಹುದು ಎಂದು ಹೇಳಿರುವ ಕೋರ್ಟ್ ವರದಿ ಸಲ್ಲಿಕೆಗೆ 8 ವಾರಗಳ ಕಾಲವಕಾಶವನ್ನು ನೀಡಿದೆ. ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications