ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ದೂರು: ಮುಂಗಾರು ಮಳೆ ಗಣೇಶ್ ಕಾರು ಚಾಲಕ ಸಾವು

By Srinath
|
Google Oneindia Kannada News

maddur-bike-accident-kannada-actor-ganesh-driver-killed
ಮದ್ದೂರು, ಜ.6-ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್ ಬಳಿ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ' ಮುಂಗಾರು ಮಳೆ ' ಖ್ಯಾತಿಯ ನಟ ಗಣೇಶ್ ಅವರ ಕಾರು ಚಾಲಕ ತಿಲಕ್ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಕೃಷ್ಣಪ್ಪ ಎಂಬುವರ ಪುತ್ರ ತಿಲಕ್ (24) ಹಾಗೂ ಮನೋಹರ ರಾವ್ ಅವರ ಪುತ್ರ ಶಿವಾಜಿ ರಾವ್ (26) ಮೃತಪಟ್ಟ ದುರ್ದೈವಿಗಳು. ಗೂಡ್ಸ್ ಆಟೋ ಚಾಲಕನಾಗಿರುವ ಶಿವಾಜಿ ರಾವ್ ಜತೆ ನಿನ್ನೆ ಬೆಳಗ್ಗೆ ತಿಲಕ್ ಬೈಕಿನಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿರುವ ಶಿವನಸಮುದ್ರಕ್ಕೆ (ಬ್ಲಫ್) ತೆರಳಿದ್ದರು. ಅಲ್ಲಿನ ಮಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ರಾತ್ರಿ ಅದೇ ಬೈಕಿನಲ್ಲಿ ಕಳೆದ ರಾತ್ರಿ ಇಬ್ಬರೂ ವಾಪಸ್ ಆಗಿದ್ದಾರೆ.

ಮದ್ದೂರು-ಕೊಳ್ಳೇಗಾಲ ರಸ್ತೆಯ ಉಪ್ಪಿನಕೆರೆ ಗೇಟ್ ಬಳಿ ಬೆಂಗಳೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಮತ್ತು ತಿಲಕ್ ಇದ್ದ ಬೈಕಿಗೆ ಡಿಕ್ಕಿಯಾಗಿ ತಿಲಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಿವಾಜಿರಾವ್ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮದ್ದೂರು ಪೊಲೀಸ್ ಠಾಣೆ ಪಿಎಸ್‌ ಐ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ.

English summary
Maddur- Bike accident Kannada actor Mungaru Male fame Ganesh driver killed. In an accident that happened on Maddur-Kollegala Road at Uppinakere Gate a bike crashed into a pvt bus resulting spot death of the rider Thilak (24) and pillion rider Shivaji Rao (26) at the Hospital. Thilak, a resident of Bangalore was a car driver to Mungaru Male fame Kannada actor Ganesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X