ಕರ್ನಾಟಕದಲ್ಲಿ ಮಾಯವಾಗುತ್ತಿರುವ ತೃತೀಯ ಶಕ್ತಿ
ಬೆಂಗಳೂರು, ಮೇ 22: ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲಿ ಮೋದಿ ಸುನಾಮಿಗೆ ಸಿಲುಕಿ ಪುರಾತನ ಕಾಂಗ್ರೆಸ್ ಪಕ್ಷವಷ್ಟೇ ತರಗೆಲೆಯಂತೆ ಉದುರಿಲ್ಲ. ರಾಜ್ಯದಲ್ಲಿ ತೃತೀಯ ರಂಗವು ಶಕ್ತಿಹೀನವಾಗುತ್ತಿದೆ. ಪಕ್ಷೇತರರೂ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಪಕ್ಷಗಳು ಶೇ. 16ರಷ್ಟು ಮತ ಪಡೆದಿವೆ.
ದಕ್ಷಿಣ ಭಾರತದಲ್ಲಿ ಇತರೆ ನೆರೆಯ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಅಥವಾ ತೃತೀಯ ರಂಗ ಪಕ್ಷಗಳು ಮತ ಗಳಿಸಿವುದು ಅಷ್ಟಕ್ಕಷ್ಟೇ. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟು ಶೇ. 80ರಷ್ಟು ಗಳಿಸಿದ್ದರೆ ಉಳಿದ ಪಕ್ಷಗಳ ಸಾಧನೆ ಶೇ. 20ಕ್ಕೆ ಸೀಮಿತವಾಗಿತ್ತು. ಇದರರ್ಥ ತೃತೀಯ ಶಕ್ತಿಯ ಬಲ ಶೇ. 4ರಷ್ಟು ಕುಸಿದಿದೆ ಎಂದಾಯಿತು.
ಅದಕ್ಕಿಂತ ಹಿಂದೆ ಅಂದರ 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟು ಶೇ. 72ರಷ್ಟು ಗಳಿಸಿದ್ದವು. ಆಗ ತೃತೀಯ ರಂಗದ ಸಾಧನೆ ಶೇ. 28ರಷ್ಟಾಗಿತ್ತು. ಅಂದರೆ ಗಣನೀಯ ಪ್ರಮಾಣಲ್ಲಿ (ಶೇ. 8ರಷ್ಟು) ಮತಗಳನ್ನು ಕಳೆದುಕೊಂಡಿತ್ತು.
ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಹೀಗಿತ್ತು:

ಲೋಕಸಭಾ ಚುನಾವಣೆಯಲ್ಲಿ ಎಡ ರಂಗದ ಸಾಧನೆ ಕರ್ನಾಟಕದಲ್ಲಿ ಎಂದಿಗೂ ಆಶಾದಾಯಕವಾಗಿಲ್ಲ. 2014ರಲ್ಲಿ ಎಡ ರಂಗದ ಸಾಧನೆ ಶೇ 0.3 ಮಾತ್ರ. ಬಹುಜನ ಸಮಾಜ ಪಕ್ಷದ ಸಾಧನೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 2009ರಲ್ಲಿ ಶೇ. 2 ರಷ್ಟು ಮತ ಗಳಿಕೆ ಹೊಂದಿದ್ದ ಬಿಎಸ್ ಪಿ, ಇದೀಗ ಶೆ. 1ಕ್ಕಿಂತ ಕಡಿಮೆ ಮತ ಗಳಿಸಿದೆ. ಇನ್ನು ಹೊಸದಾಗಿ ಅವತರಿಸಿದ ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿ ಶೇ. 0.8ರಷ್ಟು ಮತ ಗಳಿಸಿದೆ. ಇದು ನೋಟಾ (NOTA) ಸಾಧನೆಗಿಂತ ಕಡಿಮೆಯಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications