ಬೆಂಗಳೂರು-ನಾಂದೇಡ್ ರೈಲು ಅಪಘಾತಕ್ಕೆ ಕಾರಣ ಬಹಿರಂಗ
ಬೆಂಗಳೂರು, ಮಾರ್ಚ್ 07 : ಬೆಂಗಳೂರು-ನಾಂದೇಡ್ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೆ ಲಾರಿ ಚಾಲಕ ಕಾರಣ ಎಂಬುದು ತನಿಖಾ ವರದಿಯಿಂದ ಬಹಿರಂಗವಾಗಿದೆ. ಈ ರೈಲು ಅಪಘಾತದಲ್ಲಿ ದೇವದುರ್ಗ ಕ್ಷೇತ್ರದ ಅಂದಿನ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಸೇರಿದಂತೆ ಐವರು ಮೃತಪಟ್ಟಿದ್ದರು.
2015ರ
ಆಗಸ್ಟ್
24ರಂದು
ಆಂಧ್ರಪ್ರದೇಶದ
ಮಡಕಶಿರ
ಬಳಿಯ
ರೈಲ್ವೆ
ಕ್ರಾಸಿಂಗ್
ಬಳಿ
ಗ್ರಾನೈಟ್
ತುಂಬಿದ್ದ
ಲಾರಿ
ಬೆಂಗಳೂರು-ನಾಂದೇಡ್
ಎಕ್ಸ್ಪ್ರೆಸ್
ರೈಲಿಗೆ
ಡಿಕ್ಕಿ
ಹೊಡೆದಿತ್ತು.
ಈ
ಅಪಘಾತದಿಂದಾಗಿ
ಬೆಂಗಳೂರು
ರೈಲ್ವೆ
ವಲಯಕ್ಕೆ
3
ಕೋಟಿ
ರೂ.
ನಷ್ಟವಾಗಿದೆ
ಎಂದು
ವರದಿ
ಹೇಳಿದೆ.
[ಐವರನ್ನು
ಬಲಿಪಡೆದ
ರೈಲು
ದುರಂತದ
ಚಿತ್ರಗಳು]
ನೈಋತ್ಯ ರೈಲ್ವೆಯ ರೈಲ್ವೆ ಸುರಕ್ಷತಾ ಆಯುಕ್ತ ಸತೀಶ್ ಕುಮಾರ್ ಮಿತ್ತಲ್ ಅವರು ಈ ವರದಿ ಸಿದ್ಧಪಡಿಸಿದ್ದಾರೆ. ಲಾರಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಗ್ರಾನೈಟ್ ತುಂಬಲಾಗಿತ್ತು. ಲಾರಿ ಚಾಲಕನ ಬಳಿ ಡ್ರೈವಿಂಗ್ ಲೈಸೆನ್ಸ್ ಸಹ ಇರಲಿಲ್ಲ ಎಂದು ಮಿತ್ತಲ್ ವರದಿಯಲ್ಲಿ ಹೇಳಿದ್ದಾರೆ. [ದೇವದುರ್ಗ ಉಪ ಚುನಾವಣೆ : ಗೆದ್ದವರು ಯಾರು?]
ಆಗಸ್ಟ್
24ರಂದು
ಮುಂಜಾನೆ
2.14ಕ್ಕೆ
ಈ
ಅಪಘಾತ
ಸಂಭವಿಸಿದೆ.
21
ಟನ್
ಗ್ರಾನೈಟ್
ತುಂಬಬೇಕಿದ್ದ
ಲಾರಿಯಲ್ಲಿ
4
ಟನ್
ಹೆಚ್ಚು
ಕಲ್ಲು
ತುಂಬಲಾಗಿತ್ತು.
40
ಕಿ.ಮೀ.
ವೇಗದಲ್ಲಿ
ಬಂದ
ಲಾರಿ
ರೈಲ್ವೆ
ಕ್ರಾಸಿಂಗ್ನಲ್ಲಿ
ರೈಲಿಗೆ
ಡಿಕ್ಕಿ
ಹೊಡೆದಿದೆ
ಎಂದು
ವರದಿ
ಹೇಳಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎಚ್ 1, ಎಸ್ 1, ಎಸ್ 2 ಮತ್ತು ಬಿ 1 ಬೋಗಿಗಳು ಹಳಿ ತಪ್ಪಿದವು. ಮೊದಲನೆ ದರ್ಜೆ ಎಚ್ 1 ಬೋಗಿಗೆ ಲಾರಿ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ 5 ಜನರು ಮೃತಪಟ್ಟರು. ಅಪಘಾತದಲ್ಲಿ 4 ಜನರು ಗಾಯಗೊಂಡರು ಎಂದು ವರದಿ ತಿಳಿಸಿದೆ.
ಉಪ ಚುನಾವಣೆ : ಈ ರೈಲು ಅಪಘಾತದಲ್ಲಿ ಶಾಸಕ ಎ.ವೆಂಕಟೇಶ್ ನಾಯಕ್ ಅವರು ಮೃತಪಟ್ಟಿದ್ದರಿಂದ ದೇವದುರ್ಗ ಕ್ಷೇತ್ರ ತೆರವಾಗಿತ್ತು. 2016ರ ಫೆ.13ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರು ಗೆಲುವು ಸಾಧಿಸಿದ್ದಾರೆ.