ಆರ್ಟಿಓ ಚೆಕ್ಪೋಸ್ಟ್ಗಳ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು, ಆಗಸ್ಟ್ 23 : ಮಂಗಳವಾರ ಮುಂಜಾನೆ ರಾಜ್ಯದ 5 ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಮೂರು ಆರ್ಟಿಓ ಚೆಕ್ಪೋಸ್ಟ್ ಮತ್ತು ಎರಡು ತೆರಿಗೆ ಚೆಕ್ಪೋಸ್ಟ್ಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.
ಉಪಲೋಕಾಯುಕ್ತ
ನ್ಯಾ.
ಸುಭಾಷ್
ಅಡಿ
ಅವರ
ನಿರ್ದೇಶನದಂತೆ
ರಾಜ್ಯದ
5
ಕಡೆ
ಮಂಗಳವಾರ
ಮುಂಜಾನೆ
5
ಗಂಟೆಗೆ
ಲೋಕಾಯುಕ್ತ
ದಾಳಿ
ನಡೆದಿದೆ.
ಬೇರೆ
ಜಿಲ್ಲೆಯ
ಎಸ್ಪಿಗಳನ್ನು
ಬಳಕೆ
ಮಾಡಿಕೊಂಡು
ಈ
ದಾಳಿ
ನಡೆಸಿರುವುದು
ವಿಶೇಷ.[ಲೋಕಾಯುಕ್ತದಲ್ಲಿ
ಭ್ರಷ್ಟಾಚಾರ,
ಭಾಸ್ಕರರಾವ್
7ನೇ
ಆರೋಪಿ]
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಹುಬ್ಬಳ್ಳಿ-ಬಳ್ಳಾರಿ ಹೆದ್ದಾರಿ ಸೇರಿದಂತೆ ಮೂರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಓ) ಚೆಕ್ಪೋಸ್ಟ್ ಮತ್ತು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ, ಬಳ್ಳಾರಿಯ ಹಗರಿ ವಾಣಿಜ್ಯ ತೆರಿಗೆ ಇಲಾಖೆ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಲಾಗಿದೆ.[ಭ್ರಷ್ಟಾಚಾರ ನಿಗ್ರಹ ದಳದಿಂದ ವೆಬ್ ಸೈಟ್, ಫೇಸ್ಬುಕ್ ಪುಟ]
ಬಾಗೇಪಲ್ಲಿ ಚೆಕ್ಪೋಸ್ಟ್ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ದಾಳಿ ನಡೆದಿದ್ದು 1.5 ಲಕ್ಷ ರೂ. ನಗದು ಪತ್ತೆಯಾಗಿದೆ. ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದು, ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.