ವರ್ಕ್ ಫ್ರಂ ಹೋಂ: ಲ್ಯಾಪ್ ಟಾಪ್ ಮಾರಾಟಗಾರರಿಗೆ ಸಿಕ್ಕಿದ್ದೇ ಸೀರುಂಡೆ
ಕೊರೊನಾ ವೈರಸ್ ಹಾವಳಿಯಿಂದ ವಿಶ್ವವೆಲ್ಲಾ ತಲ್ಲಣವಾಗಿ ಕೂತಿದ್ದು ಒಂದು ಕಡೆಯಾದರೆ, ದಿನದಿಂದ ದಿನಕ್ಕೆ ಆರ್ಥಿಕತೆಯೂ ಕುಸಿಯುತ್ತಿರುವುದು ಇನ್ನೊಂದೆಡೆ. ಎಲ್ಲಾ ಉದ್ಯಮಗಳು ತೀವ್ರ ನಷ್ಟದಲ್ಲಿದ್ದರೆ, ಒಂದು ಉದ್ಯಮ ಮಾತ್ರ, ಭರ್ಜರಿ ವಹಿವಾಟು ನಡೆಸುತ್ತಿದೆ.
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿನ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡಲು ಹೇಳಿದೆ. ಆ ಮೂಲಕ, ಕೊರೊನಾ ವೈರಸ್ ಪಸರಿಸದಂತೆ, ಸಾಮಾಜಿಕ ಜವಾಬ್ದಾರಿಯ ನಿರ್ಧಾರವನ್ನು ತೆಗೆದುಕೊಂಡಿದೆ.
WFH ನೀಡಿರುವ ಹಲವು ಸಂಸ್ಥೆಗಳಲ್ಲಿ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಮೂಲಕ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿವೆ. ವರ್ಕ್ ಫ್ರಂ ಹೋಂ ನೀಡುವಾಗ, ಡೆಸ್ಕ್ ಟಾಪ್ ನಲ್ಲಿ ಕೆಲಸ ಮಾಡುವ ನೌಕರರಿಗೆ ಲ್ಯಾಪ್ ಟಾಪ್ ನೀಡುವ ಅನಿವಾರ್ತೆಯಲ್ಲಿ ಸಂಸ್ಥೆಗಳಿವೆ.

ಇದು ತಾತ್ಕಾಲಿಕ ಕೆಲಸ ಪದ್ದತಿ ಆಗಿರುವುದರಿಂದ, ಬಹುತೇಕ ಸಂಸ್ಥೆಗಳು ನೌಕರಿಗೆ ಲ್ಯಾಪ್ ಟಾಪ್ ಅನ್ನು ಮಾಸಿಕ ಬಾಡಿಗೆಯ ಆಧಾರದ ಮೇಲೆ ತೆಗೆದುಕೊಳ್ಲುತ್ತಿವೆ. ಹೆಚ್ಚಿನ ಕಂಪೆನಿಗಳು WFH ಮೊರೆ ಹೋಗಿರುವುದರಿಂದ, ಲ್ಯಾಪ್ ಟಾಪ್ ಮಾರಾಟದ ಉದ್ಯಮ ಸದ್ಯ ಸಿಕ್ಕಾಪಟ್ಟೆ ಬಿರುಸಾಗಿ ಸಾಗುತ್ತಿವೆ.
ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬೇಡಿಕೆ ಬಂದಿರುವುದರಿಂದ, ಲ್ಯಾಪ್ ಟಾಪ್ ಬಾಡಿಗೆಗೆ ನೀಡುವ ಸಂಸ್ಥೆಗಳು, ಅಲ್ಲಲ್ಲಿ ಪರಿಸ್ಥಿತಿಗೆ ತಕ್ಕಂತೆ ಬೆಲೆಯನ್ನು ಏರಿಸಿವೆ. ಯಾರೂ ಕೇಳದ, ಮೂಲೆಯಲ್ಲಿ ಬಿದ್ದಿರುವ ಕಾನ್ಫಿಗರೇಶನ್ ಮಾಡೆಲ್ ಲ್ಯಾಪ್ ಗಳಿಗೂ ಎಲ್ಲಿಲ್ಲದ ಡಿಮಾಂಡ್.
ಇದೊಂದು, ತಾತ್ಕಾಲಿಕ ಪದ್ದತಿಯಾಗಿರುವುದರಿಂದ, ಕೆಲಸ ನಿರ್ವಹಿಸಲು ಸಾಕಾಗುವಷ್ಟು ಮಾಡೆಲಿನ ಲ್ಯಾಪ್ ಟಾಪ್ ಗಳನ್ನು ಸಂಸ್ಥೆಗಳು ತಮ್ಮ ನೌಕರರಿಗೆ ನೀಡುತ್ತಿವೆ. ಹಾಗಾಗಿ, ಧೂಳು ಹಿಡಿದು ಕೂತಿದ್ದ ಲ್ಯಾಪ್ ಟಾಪ್ ಗಳಿಗೆ ಅವಧಿಗಿಂತ ಮುಂಚೆನೇ ಆಯುಧಪೂಜೆ ಭಾಗ್ಯ.

ಉದಾಹರಣೆಗೆ, ಡಿಮಾಂಡ್ ಇಲ್ಲದ ಕೋರ್ ಐ3, 4th ಜನರೇಶನ್ ಲ್ಯಾಪ್ ಟಾಪ್ ಗಳನ್ನೂ ಸಂಸ್ಥೆಗಳು ಬಾಡಿಗೆಗೆ ತೆಗೆದುಕೊಳ್ಳುತ್ತಿವೆ. ಅಂದಾಜು, ತಿಂಗಳಿಗೆ 1,800 - 2,500 ರೂಪಾಯಿಗಳಿವೆ ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳುತ್ತಿವೆ.
ಒಟ್ಟಿನಲ್ಲಿ, ಕೊರೊನಾ ಹಾವಳಿ ಊರೆಲ್ಲಾ ಹಬ್ಬಿದ್ದರೂ, ಈ ಉದ್ಯಮ ಮಾತ್ರ ಭರ್ಜರಿ ವಹಿವಾಟು ನಡೆಸುತ್ತಿವೆ. ಬೆಲೆ ಏನೇ ಆಗಿರಲಿ, ಸಂಸ್ಥೆಗಳ ಪಾಲಿಗೆ ತುರ್ತು ಪರಿಸ್ಥಿತಿಯಂತಾಗಿರುವ ಈ ಸಮಯದಲ್ಲಿ ಲ್ಯಾಪ್ ಟಾಪ್ ಮಾರಾಟ / ಬಾಡಿಗೆ ನೀಡುವ ಸಂಸ್ಥೆಗಳು, ಕಸ್ಟಮರ್ ಸಪೋರ್ಟ್ ಚೆನ್ನಾಗಿ ಮಾಡುತ್ತಿವೆ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಚಾರ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ












Click it and Unblock the Notifications