ಸಚಿವ ಜಾರ್ಜ್ ವಿರುದ್ಧ ಗಣಪತಿ ಪತ್ನಿ, ಪುತ್ರರಿಂದ ದೂರು
ಮಡಿಕೇರಿ, ಜುಲೈ 11 : ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಪತ್ನಿ ಮತ್ತು ಪುತ್ರರು ಸಚಿವ ಕೆ.ಜೆ.ಜಾರ್ಜ್ ಅವರ ವಿರುದ್ಧ ಪ್ರತ್ಯೇಕವಾದ ದೂರು ನೀಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಈ ದೂರನ್ನು ಸಿಐಡಿಗೆ ಹಸ್ತಾಂತರ ಮಾಡುವ ಭರವಸೆ ನೀಡಿದ್ದಾರೆ.
ಎಂ.ಕೆ.ಗಣಪತಿ
ಅವರ
ಪುತ್ರರಾದ
ನೇಹಾಲ್
ಹಾಗೂ
ಸೋಹಿಲ್
ಅವರು
ಭಾನುವಾರ
ರಾತ್ರಿ
ಕುಶಾಲನಗರ
ಗ್ರಾಮಾಂತರ
ಠಾಣೆಗೆ
ಆರು
ಪುಟಗಳ
ಎರಡು
ಪ್ರತ್ಯೇಕ
ದೂರು
ಸಲ್ಲಿಸಿದ್ದಾರೆ.
'ಸಚಿವ
ಕೆ.ಜೆ.ಜಾರ್ಜ್,
ಲೋಕಾಯುಕ್ತ
ಐಜಿಪಿ
ಪ್ರಣವ್
ಮೊಹಂತಿ,
ಎಡಿಜಿಪಿ
ಎ.ಎಂ.ಪ್ರಸಾದ್
ವಿರುದ್ಧ
ಎಫ್ಐಆರ್
ದಾಖಲು
ಮಾಡಬೇಕು'
ಎಂದು
ಒತ್ತಾಯಿಸಿದ್ದಾರೆ.
[ಜಾರ್ಜ್
ವಿರುದ್ಧ
FIR
ದಾಖಲಿಸಿ
:
ಓದುಗರ
ಒಕ್ಕೊರಲ
ಕೂಗು]
'ತಂದೆಯವರು ಸಾವಯುವ ಮುನ್ನ ನೀಡಿರುವ ಹೇಳಿಕೆಗಳು ಸತ್ಯವಾಗಿವೆ. ಮೂವರ ವಿರುದ್ಧವೂ ಪ್ರಕರಣ ದಾಖಲು ಮಾಡಬೇಕು. ಈ ಮೂವರ ಕಿರುಕುಳದಿಂದಾಗಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸಾಕ್ಷಿಗಳನ್ನು ನಾಶಪಡಿಸಲು ಮುಂದಾಗಿದ್ದಾರೆ. ನಮಗೆ ನ್ಯಾಯ ಕೊಡಿಸಿ' ಎಂದು ಪುತ್ರರು ದೂರಿನಲ್ಲಿ ತಿಳಿಸಿದ್ದಾರೆ. [ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]
ದೂರು ನೀಡಿದ ಪತ್ನಿ : ಗಣಪತಿ ಅವರ ಪತ್ನಿ ಪಾವನ ಅವರು ಕುಶಾಲನಗರ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದಾರೆ. 'ನನ್ನ ಪತಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ದೈಹಿಕ ಮತ್ತು ಮಾನಸಿಕವಾಗಿ ಅವರು ಸಮರ್ಥರಿದ್ದರು. 2008ರ ಚರ್ಚ್ ದಾಳಿ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಅವರು ಕಾಪಾಡಿದ್ದರು. ಆದರೆ, ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಅವರ ಮೇಲೆ ಒತ್ತಡ ಹಾಕಲಾಗುತ್ತಿತ್ತು' ಎಂದು ದೂರಿನಲ್ಲಿ ಹೇಳಿದ್ದಾರೆ. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]
'ಸಚಿವ ಜಾರ್ಜ್ ಮತ್ತು ಇಬ್ಬರು ಅಧಿಕಾರಿಗಳು ನನ್ನ ಪತಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ನನ್ನ ಪತಿ ಮಾಧ್ಯಮಗಳ ಮುಂದೆ ಹೇಳಿರುವುದೆಲ್ಲಾ ನಿಜ. ಮೂವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು' ದೂರಿನಲ್ಲಿ ಪಾವನ ಮನವಿ ಮಾಡಿದ್ದಾರೆ. [ಗಣಪತಿ ಆತ್ಮಹತ್ಯೆ : ಸಚಿವ ಜಾರ್ಜ್ ಹೇಳುವುದೇನು?]
ಎಫ್ಐಆರ್ ದಾಖಲಿಸದ ಪೊಲೀಸರು : ಆದರೆ, ಪೊಲೀಸರು ಮಾತ್ರ ಮೂವರ ದೂರನ್ನು ಆಧರಿಸಿದ ಎಫ್ಐಆರ್ ದಾಖಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಮತ್ತೊಮ್ಮೆ ಎಫ್ಐಆರ್ ದಾಖಲು ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು.
ಇದರಿಂದಾಗಿ ಆಕ್ರೋಶಗೊಂಡ ಗಣಪತಿ ಅವರ ಪತ್ನಿ, ಪುತ್ರರು ಮತ್ತು ಸಂಬಂಧಿಕರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು, ಈ ದೂರಿನ ಪ್ರತಿಯನ್ನು ಸಿಐಡಿ ಅಧಿಕಾರಿಗಳಿಗೆ ನೀಡುವುದಾಗಿ ಭರವಸೆ ನೀಡಿದರು.