ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಟಿಡಿಸಿಯಿಂದ 'ಪುನೀತ ಯಾತ್ರೆ' ಪ್ಯಾಕೇಜ್ ಘೋಷಣೆ

|
Google Oneindia Kannada News

ಬೆಂಗಳೂರು, ನವೆಂಬರ್ 29 : ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜನರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ 'ಪುನೀತ ಯಾತ್ರೆ' ಎಂಬ ರಿಯಾಯಿತಿ ದರದ ಪ್ಯಾಕೇಜ್ ಘೋಷಣೆ ಮಾಡಿದೆ.

ಈ ಪ್ರವಾಸಗಳನ್ನು ನಿಗಮದ ಇಲ್ಲವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಪಡೆದ ಸುಸಜ್ಜಿತ ಎಸಿ ಬಸ್ಸುಗಳಲ್ಲಿ ಆಯೋಜಿಸಲಾಗುತ್ತದೆ. ಶೇ 25ರ ರಿಯಾಯಿತಿ ದರದಲ್ಲಿ ಈ ಯಾತ್ರೆಗಳನ್ನು ಆಯೋಜನೆ ಮಾಡಲಾಗಿದೆ.

ಪುನೀತ ಯಾತ್ರೆ ಪ್ಯಾಕೇಜ್ ಘೋಷಿಸಿದ ಪ್ರವಾಸೋದ್ಯಮ ಇಲಾಖೆಪುನೀತ ಯಾತ್ರೆ ಪ್ಯಾಕೇಜ್ ಘೋಷಿಸಿದ ಪ್ರವಾಸೋದ್ಯಮ ಇಲಾಖೆ

KSTDC announces puneeta yatra packages

ಈ ಪ್ಯಾಕೇಜ್‌ನಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ಪವಿತ್ರವಾದ ದೇವಸ್ಥಾನಗಳು, ಚರ್ಚ್, ಮಸೀದಿ ಇತ್ಯಾದಿಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ ಈ ಸ್ಥಳಗಳ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳಬಹುದು.

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!

ಸ್ಥಳಗಳು : ತಿರುಪತಿ ಬಾಲಾಜಿ ದರ್ಶನ, ಕಾಳಹಸ್ತಿ, ಶಿರಡಿ ಸಾಯಿಬಾಬಾ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ, ಕುಂದಾದ್ರಿ ಬೆಟ್ಟ, ಮಂತ್ರಾಲಯ, ಹಂಪಿ, ಮಲೆಮಹದೇಶ್ವರ, ನಂಜನಗೂಡು, ಎಡೆಯೂರು, ಆದಿಚುಂಚನಗಿರಿ, ಸಿಗಂಧೂರ.

ತಾಜ್ ಮಹಲ್ ನ್ನು ಯಾವಾಗ ಕೆಡವುತ್ತೀರಿ? ಪ್ರಕಾಶ್ ರೈ ಪ್ರಶ್ನೆತಾಜ್ ಮಹಲ್ ನ್ನು ಯಾವಾಗ ಕೆಡವುತ್ತೀರಿ? ಪ್ರಕಾಶ್ ರೈ ಪ್ರಶ್ನೆ

ಗೋಕರ್ಣ, ಪಂಚ ಜ್ಯೋತಿರ್ಲಿಂಗಗಳ ದರ್ಶನ, ಅಜಂತಾ, ಎಲ್ಲೋರ, ಔರಂಗಾಬಾದ್, ಬಾಬಾಬುಡನಗಿರಿ, ಕೂಡಲಸಂಗಮ, ಬಸವನಬಾಗೇವಾಡಿ, ಬಸವಕಲ್ಯಾಣ, ಗಾಣಗಾಪುರ, ಸನ್ನತಿ ಸೌದತ್ತಿ-ಎಲ್ಲಮ್ಮ, ಕೊಲ್ಲಾಪುರ-ಲಕ್ಷ್ಮಿ ದರ್ಶನ, ಅಯ್ಯಪ್ಪಸ್ವಾಮಿ ದರ್ಶನ, ಮಧುರೈ ಮೀನಾಕ್ಷಿ ದರ್ಶನ, ಗುರುವಾಯೂರು, ಫಳನಿ ಮುಂತಾದ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ.

ಶೇ.25 ರಷ್ಟು ರಿಯಾಯಿತಿ ದರದಲ್ಲಿ ಈ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ. ಪ್ರವಾಸಿಗರು ಈ ಮೇಲಿನ ಸ್ಥಳಗಳಿಗೆ ಪ್ರವಾಸಗಳನ್ನು ಕೈಗೊಂಡು ಪ್ಯಾಕೇಜ್ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಎಸ್‌ಟಿಡಿಸಿ ವೆಬ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಕಲಬುರಗಿಯಿಂದಲೂ ಯಾತ್ರೆ : ಪ್ರವಾಸೋದ್ಯಮ ಇಲಾಖೆ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪುನೀತ ಯಾತ್ರೆ ಪ್ಯಾಕೇಜ್ ಟೂರ್ ಅನ್ನು ವಿವಿಧ ಜಿಲ್ಲೆಗಳಿಂದಲೂ ನಡೆಸಲಿದೆ.

ಕಲಬುರಗಿಯಿಂದ 8 ಮಾರ್ಗಗಳಲ್ಲಿ ಈ ಯಾತ್ರೆ ಸಂಚಾರ ನಡೆಸಲಿದೆ. ರಿಯಾಯಿತಿ ದರದ ಧಾರ್ಮಿಕ ಪ್ರವಾಸ ಪುನೀತ ಯಾತ್ರೆಗೆ ಆನ್ ಲೈನ್ ಮತ್ತು ಆಫ್‌ ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಮಾರ್ಗಗಳ ವಿವರ : ಕಲಬುರಗಿ ನಗರ ವೀಕ್ಷಣೆ ಮತ್ತು ಗಾಣಗಾಪುರ (ಒಬ್ಬರಿಗೆ ದರ 180 ರೂ.), ನಾಗಾವಿ-ಸನ್ನತಿ ಸ್ಥೂಪ-ಕೋರಿ ಸಿದ್ದೇಶ್ವರ ದರ್ಶನ (390 ರೂ. ಒಬ್ಬರಿಗೆ) ಈ ಎರಡು ಮಾರ್ಗಗಳಲ್ಲಿ ಕೆಎಸ್‌ಟಿಡಿಎಸ್ ಬಸ್ಸುಗಳು ನಿತ್ಯ ಸಂಚಾರ ನಡೆಸಲಿವೆ. ಈ ಪ್ಯಾಕೇಜ್ ಸಾರಿಗೆ ಸೌಲಭ್ಯ ಮಾತ್ರ ಒಳಗೊಂಡಿವೆ.

ತಿರುಪತಿ-ಮಂಗಾಪುರ (3,400), ತಿರುಪತಿ-ಕಾಳಹಸ್ತಿ-ಶ್ರೀನಿವಾಸ ಮಂಗಾಪುರ (3,900), ಶ್ರೀಶೈಲ-ಮಹಾನಂದಿ-ಸಾಕ್ಷಿ ಗಣೇಶ (2,900) ವಾರಕ್ಕೆ ಎರಡು ಬಾರಿ ಸಚಾರ. ಶಿರಡಿ-ನಾಸಿಕ್-ತ್ರಯಂಬಕೇಶ್ವರ-ಶನಿಸಿಂಗಾಪುರ (3,500) ವಾರಕ್ಕೆ ಒಮ್ಮೆ ಸಂಚಾರ. ಸಾರಿಗೆ, ವಸತಿ ಮತ್ತು ಶೀಘ್ರ ದರ್ಶನ ವ್ಯವಸ್ಥೆ ಇದರಲ್ಲಿ ಸೇರಿದೆ.

English summary
Karnataka State Tourism Development Corporation (KSTDC) announced Puneeta Yatra packages. A road trip to religious places in Karnataka and Andhra Pradesh, Tamil Nadu. Tourist will get 25 discount in the package.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X