ನಾಸಿಕ್ಗೆ ಬಸ್ ಸೇವೆ ಆರಂಭಿಸಿದ ಕೆಎಸ್ಆರ್ಟಿಸಿ
ಬೆಂಗಳೂರು, ಜುಲೈ 28 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಮಹಾರಾಷ್ಟ್ರದ ನಾಸಿಕ್ಗೆ ಮತ್ತು ಪೀಣ್ಯ ಬಸ್ ನಿಲ್ದಾಣದಿಂದ ಮೈಸೂರಿಗೆ ನೂತನ ಬಸ್ ಸೇವೆಗಳನ್ನು ಆರಂಭಿಸಲಿದೆ. ಜುಲೈ 31ರಿಂದ ಈ ಬಸ್ ಸೇವೆಗಳು ಆರಂಭವಾಗಲಿವೆ.
ಬೆಂಗಳೂರು-ಪುಣೆ
ಮಾರ್ಗದ
ಮೂಲಕ
ಕೆಎಸ್ಆರ್ಟಿಸಿಯ
ಮಲ್ಟಿ
ಎಕ್ಸೆಲ್
ವೊಲ್ವೋ
ಬಸ್
ನಾಸಿಕ್
ತಲುಪಲಿದೆ.
ನಾಸಿಕ್ನಿಂದ
ಹೊರಡುವ
ಬಸ್
ಇದೇ
ಮಾರ್ಗವಾಗಿ
ಬೆಂಗಳೂರಿಗೆ
ವಾಪಸ್
ಆಗಲಿದೆ.
ಜುಲೈ
31ರಿಂದ
ಬಸ್
ಸಂಚಾರ
ನಡೆಸಲಿದ್ದು,
1,220
ರೂ.
ಪ್ರಯಾಣ
ದರ
ನಿಗದಿ
ಪಡಿಸಲಾಗಿದೆ.
[ksrtc
ವೆಬ್
ಸೈಟ್]
ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಡುವ ಬಸ್ ಮರುದಿನ ಬೆಳಗ್ಗೆ 10.45ಕ್ಕೆ ನಾಸಿಕ್ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ನಾಸಿಕ್ನಿಂದ ಹೊರಡುವ ಬಸ್ ಮರುದಿನ ಬೆಳಗ್ಗೆ 9.45ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ 080-44554422 ನಂಬರ್ಗೆ ಕರೆ ಮಾಡಬಹುದಾಗಿದೆ. [ಮಂಗಳೂರು-ಮುಂಬೈ ಐರಾವತ ಬಸ್ ಸೇವೆ ಸ್ಥಗಿತ]
ಮೈಸೂರಿಗೆ ವೇದದೂತ ಬಸ್ : ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣದಿಂದ ಕೆಎಸ್ಆರ್ಟಿಸಿ ಮೈಸೂರಿಗೆ ನೂತನ ವೇಗದೂತ ಬಸ್ ಸೇವೆ ಆರಂಭಿಸಲಿದೆ. ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯ ತನಕ ಎರಡು ಗಂಟೆಗೊಮ್ಮೆ ಬಸ್ಸುಗಳು ಸಂಚಾರ ನಡೆಸಲಿವೆ.
ಪೀಣ್ಯದಿಂದ ಹೊರಡುವ ಬಸ್ ಗೊರಗುಂಟೆಪಾಳ್ಯ, ರಿಂಗ್ ರಸ್ತೆ, ಕೊಟ್ಟಿಗೆ ಪಾಳ್ಯ, ಅಂಬೇಡ್ಕರ್ ಕಾಲೇಜು ಮತ್ತು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಮೂಲಕ ಸಂಚಾರ ನಡೆಸಲಿದೆ. ಈ ಬಸ್ ಸೇವೆಯೂ ಜುಲೈ 31ರಿಂದ ಆರಂಭವಾಗಲಿದೆ.