KSRTC ಗುಡ್ ನ್ಯೂಸ್: ಬೆಂಗಳೂರು-ಶಬರಿಮಲೆಗೆ ವಿಶೇಷ ವೊಲ್ವೋ ಬಸ್ ಸೇವೆ, ಯಾವಾಗ? ಟಿಕೆಟ್ ದರ, ವೇಳಾಪಟ್ಟಿ
ಬೆಂಗಳೂರು, ನವೆಂಬರ್ 11: ಶಬರಿಮಲೆಗೆ ಮಾಲೆ ಹಾಕಿ ತೆರಳುವ ಹಾಗೂ ದೇವರ ದರ್ಶನಕ್ಕೆ ತೆರಳುವ ಸಾಮಾನ್ಯ ಭಕ್ತರು ಸೇರಿದಂತೆ ಸಾರ್ವಜನಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನಿಂದ ಬೆಂಗಳೂರು-ನೀಲಕ್ಕಲ್ (ಪ್ರಂಪಾ-ಶಬರಿಮಲೆ) ಮಾರ್ಗದಲ್ಲಿ ವಿಶೇಷ ವೋಲ್ವೋ ಬಸ್ ಸೇವೆ ಪರಿಚಯಸಿದೆ. ಯಾವಾಗಿನಿಂದ, ಟಿಕೆಟ್ ದರ ಮತ್ತು ಪೂರ್ತಿ ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ವಿಭಾಗದಿಂದ ಶಬರಿಮಲೆ ಪ್ರಯಾಣಿಕರ ಅನುಕೂಲಕ್ಕಾಗಿ ಇದೇ ನವೆಂಬರ್ 28 ರಿಂದ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ಮಾರ್ಗದಲ್ಲಿ ವಿಶೇಷ KSRTC ವೊಲ್ವೋ ಬಸ್ ಓಡಿಸಲು ನಿರ್ಧರಿಸಿದೆ. ಈ ಸೇವೆಯಿಂದ ಬೆಂಗಳೂರಿನ ದೈನಂದಿನ ಸಂಚಾರದ ಭಾರವನ್ನು ಕಡಿಮೆ ಆಗುತ್ತದೆ. ಹಾಲಿ ಬಸ್ಗಳ ಮೇಲೆ ಪ್ರಯಾಣಿಕರ ಒತ್ತಡ ಇಳಿಕೆಯಾಗಲಿದೆ.

ಬೆಂಗಳೂರು-ನೀಲಕ್ಕಲ್ ವಿಶೇಷ KSRTC ವೊಲ್ವೋ ಬಸ್ ಮೈಸೂರು, ಕ್ಯಾಲಿಕಟ್, ಗುರುವಾಯೂರು, ತ್ರಿಶೂರು, ಅಂಗಾಮಲೈ, ಕೊಟ್ಟಾಯಂ, ಏರುಮಲೈ ಮಾರ್ಗವಾಗಿ ಸಂಚಾರ ಸೇವೆ ನೀಡುತ್ತದೆ. ಈ ಬಸ್ ವೇಳಾಪಟ್ಟಿ ಹೀಗಿದೆ.
KSRTC ಶಬರಿಮಲೆ ಬಸ್ ವೇಳಾಪಟ್ಟಿ
* ಬೆಂಗಳೂರು-ನೀಲಕ್ಕಲ್ (ಪ್ರಂಪಾ-ಶಬರಿಮಲೆ) ಮಾರ್ಗದಲ್ಲಿ ಬಸ್ ಸೇವೆ
* ಆರಂಭ ದಿನಾಂಕ: ಇದೇ 28 ನವೆಂಬರ್ 2025
* ಬೆಂಗಳೂರು ನಿಲ್ದಾಣದಿಂದ ಹೊರಡುವ ಸಮಯ: ಮಧ್ಯಾಹ್ನ 13:50
* ಮಧ್ಯಂತರ ನಿಲ್ದಾಣ ಹೊಸೂರು
* ನೀಲಕ್ಕಲ್ (ಪ್ರಂಪಾ-ಶಬರಿಮಲೆ) ತಲುಪುವ ಸಮಯ: ಬೆಳಗ್ಗೆ 06:45
* ನೀಲಕ್ಕಲ್ ನಿಂದ ಹಿಂತಿರುಗುವ ಸಮಯ: ಸಂಜೆ 18:00 ಗಂಟೆ
* ಬೆಂಗಳೂರು ಬಂದು ಸೇರುವ ಸಮಯ: ಬೆಳಿಗ್ಗೆ 10:00
ಬಸ್ ಟಿಕೆಟ್ ದರ ಎಷ್ಟು?
KSRTC ಬೆಂಗಳೂರು-ನೀಲಕ್ಕಲ್ (ಪ್ರಂಪಾ-ಶಬರಿಮಲೆ) ಮಾರ್ಗದಲ್ಲಿ ಸೇವೆ ನೀಡುವ ವೊಲ್ವೋ ಬಸ್ ತಲಾ ಒಬ್ಬರಿಗೆ 1950 ರೂಪಾಯಿ ನಿಗದಿ ಮಾಡಿದೆ. ಈ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಈ ಸೇವೆಯಿಂದ ನೀಲಕ್ಕಲ್ ಪ್ರದೇಶದ ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications