ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೆ ಮೌಲ್ಯಮಾಪನದ ಮಾತು
ಬೆಂಗಳೂರು, ಜ.7 : ಕರ್ನಾಟಕ ಕಾಂಗ್ರೆಸ್ನಲ್ಲಿ ಪುನಃ ಮೌಲ್ಯ ಮಾಪನದ ಮಾತುಗಳು ಕೇಳಿಬರುತ್ತಿವೆ. ಸಚಿವರ ಕಾರ್ಯವೈಖರಿ ಜೊತೆಗೆ ಶಾಸಕರಿಗೂ ಮೌಲ್ಯಮಾಪನದ ಬಿಸಿ ಈ ಬಾರಿ ತಟ್ಟಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಕಾರ್ಯವೈಖರಿ ಬಗ್ಗೆ ವರದಿ ತರಿಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ
ಸಿದ್ದರಾಮಯ್ಯ
ಸಂಪುಟದ
ಸಚಿವರ
ಮೌಲ್ಯಮಾಪನದ
ಬಗ್ಗೆ
ಹಿಂದೆಯೂ
ವರದಿ
ತರಿಸಿಕೊಳ್ಳಲು
ಸಿದ್ಧತೆ
ನಡೆದಿತ್ತು.
ಆದರೆ,
ವಿವಿಧ
ಕಾರಣಗಳಿಂದಾಗಿ
ಅದು
ಮುಂದಕ್ಕೆ
ಹೋಗಿತ್ತು.
ಸದ್ಯ
ರಾಜ್ಯದಲ್ಲಿ
ಸರ್ಕಾರ
ರಚನೆಯಾಗಿ
ಎರಡು
ವರ್ಷಗಳು
ಪೂರ್ಣಗೊಳ್ಳುತ್ತಿರುವ
ಹಿನ್ನಲೆಯಲ್ಲಿ
ಮೌಲ್ಯಮಾಪನ
ಮಾಡಲು
ಹೈಕಮಾಂಡ್
ನಿರ್ಧರಿಸಿದೆ
ಎಂದು
ತಿಳಿದುಬಂದಿದೆ.
ಫೆಬ್ರವರಿಯೊಳಗೆ ಶಾಸಕರು ಮತ್ತು ಸಚಿವರ ಕಾರ್ಯವೈಖರಿ ಕುರಿತು ವರದಿ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆದೇಶ ನೀಡಿದ್ದಾರೆ. ಅದರ ಅನ್ವಯ ಎಲ್ಲಾ ಜಿಲ್ಲಾಧ್ಯಕ್ಷರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ. [ಸಚಿವರ ಟೆಸ್ಟ್ : ಸಿದ್ದು, ಪರಮೇಶ್ವರ್ ನಡುವೆ ಭಿನ್ನಮತ]
ಮಂಗಳವಾರ ಬೆಂಗಳೂರಿನ ದೇವರಾಜ ಅರಸು ಭವನದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು, ಡಿಸಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ವರದಿ ನೀಡುವಂತೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಎಐಸಿಸಿ ಸೂಚನೆ ಫೆಬ್ರವರಿ ಅಂತ್ಯದೊಳಗೆ ಕೆಪಿಸಿಸಿಯಿಂದ ಮತ್ತು ಎಐಸಿಸಿಯಿಂದಲೂ ಪ್ರತ್ಯೇಕ ಸಮೀಕ್ಷೆ ನಡೆಸಿ ವರದಿ ತರಿಸಿಕೊಳ್ಳಲಿದೆ. ಎರಡೂ ವರದಿಗಳನ್ನು ಆಧರಿಸಿ ನಿಷ್ಕ್ರಿಯ ಸಚಿವರು, ಶಾಸಕರಿಗೆ ಚುರುಕು ಮುಟ್ಟಿಸಲಾಗುತ್ತದೆ ಎಂಬುದು ಸದ್ಯದ ಮಾಹಿತಿ.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕ ದೊಡ್ಡದು. ಆದ್ದರಿಂದ ರಾಜ್ಯದ ಮೇಲೆ ಹೈಕಮಾಂಡ್ ಹೆಚ್ಚು ಗಮನ ನೀಡಿದೆ. ಆದ್ದರಿಂದ ಸಚಿವರು, ಶಾಸಕರು ಪಕ್ಷದ ಬೆಳವಣಿಗೆಗೆ ಪೂರಕವಾಗಿ ಸಕ್ರಿಯರಾಗಿರಬೇಕು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂಬುದು ಹೈಕಮಾಂಡ್ ನಿರೀಕ್ಷೆಯಾಗಿದೆ.