ಕರ್ನಾಟಕದ ಬಡತನ ಸೂಚ್ಯಂಕ ಪ್ರಕಟ: ಯಾವ ಜಿಲ್ಲೆ ಮೊದಲು ತಿಳಿಯಿರಿ
ಬೆಂಗಳೂರು, ಮಾರ್ಚ್ 2: ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಈಗ ಹೊಸದೊಂದು ಆತಂಕಕಾರಿ ಚಿತ್ರಣ ಹೊರಬಿದ್ದಿದೆ. ಬಹು ಆಯಾಮದ ಬಡತನ ಸೂಚ್ಯಂಕದ ವರದಿಯ ಪ್ರಕಾರ, ರಾಜ್ಯದ ಜಿಲ್ಲೆಗಳ ನಡುವೆ ಬಡತನದ ಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಬಡತನ ಶೂನ್ಯದತ್ತ ಸಾಗುತ್ತಿದ್ದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಇಂದಿಗೂ ಮೂಲಭೂತ ಸೌಕರ್ಯ ಮತ್ತು ಬಡತನದ ವಿರುದ್ಧ ಹೋರಾಡುತ್ತಿವೆ. ಯಾವ ಜಿಲ್ಲೆಗಳು ಅತಿ ಹೆಚ್ಚು ಬಡತನವನ್ನು ಎದುರಿಸುತ್ತಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಬೀಡಲಾಗಿದೆ ತಿಳಿಯಿರಿ.
ಸಮೀಕ್ಷೆಯ ಪ್ರಕಾರ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಅತಿ ಹೆಚ್ಚು ಬಡತನವನ್ನು ಎದುರಿಸುತ್ತಿದ್ದರೆ, ಕರಾವಳಿ ಮತ್ತು ಹಳೆ ಮೈಸೂರು ಭಾಗದ ಜಿಲ್ಲೆಗಳು ಉತ್ತಮ ಸ್ಥಿತಿಯಲ್ಲಿವೆ. ಹಾಗಾದ್ರೆ, ನಿಮ್ಮ ಜಿಲ್ಲೆ ಯಾವ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಜಿಲ್ಲಾವಾರು ಬಡತನದ ಪ್ರಮಾಣ
* ಯಾದಗಿರಿ: 28.68%
* ರಾಯಚೂರು: 21.58%
* ಗುಲ್ಬರ್ಗ (ಕಲಬುರಗಿ): 20.33%
* ಕೊಪ್ಪಳ: 19.35%
* ವಿಜಯಪುರ: 17.52%
ಅತಿ ಕಡಿಮೆ ಬಡತನವಿರುವ ಜಿಲ್ಲೆಗಳು
* ಬೆಂಗಳೂರು ಗ್ರಾಮಾಂತರ: 0.79%
* ರಾಮನಗರ: 0.96%
* ದಕ್ಷಿಣ ಕನ್ನಡ: 1.29%
* ಬೆಂಗಳೂರು ನಗರ: 1.28%
* ಕೋಲಾರ: 2.01%
* ಗದಗ: 17.26%
* ಬಳ್ಳಾರಿ: 13.94%
* ಬೀದರ್14.93%
* ಬಾಗಲಕೋಟೆ:12.7%
* ಹಾವೇರಿ:11.27%
* ಬೆಳಗಾವಿ: 8.18%
* ಧಾರವಾಡ: 7.09%
* ಚಿತ್ರದುರ್ಗ: 5.72%
* ತುಮಕೂರು: 5.61%
* ದಾವಣಗೆರೆ: 5.25%
* ಉತ್ತರಕನ್ನಡ: 5.05%
* ಚಾಮರಾಜನಗರ: 4.87%
* ಕೊಡಗು: 4.85%
* ಚಿಕ್ಕಬಳ್ಳಾಪುರ: 3.74%
* ಉಡುಪಿ: 3.62%
* ಚಿಕ್ಕಮಗಳೂರು: 3.22%
* ಶಿವಮೊಗ್ಗ: 3.23%
* ಹಾಸನ: 2.88%
* ಮೈಸೂರು: 2.47%
* ಮಂಡ್ಯ: 2.31%
ಯಾದಗಿರಿ ಜಿಲ್ಲೆ ಬಡತನದ ತೀವ್ರತೆಯಲ್ಲಿ (45.07%) ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 8.79 ಲಕ್ಷ ಜನರು ಬಡತನದ ರೇಖೆಗಿಂತ ಕೆಳಗಿದ್ದಾರೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದ ಒಟ್ಟು ಜನಸಂಖ್ಯೆ 1.4 ಕೋಟಿಗಿಂತ ಹೆಚ್ಚಿದ್ದರೂ, ಬಡತನದ ಸೂಚ್ಯಂಕ ಕೇವಲ 0.0053 ರಷ್ಟಿದೆ. ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಡತನದ ಪ್ರಮಾಣ ಶೇಕಡ 3ಕ್ಕಿಂತ ಕಡಿಮೆ ದಾಖಲಾಗಿದೆ. ಇದು ಈ ಭಾಗದ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತದೆ. ಈ ಅಂಕಿ-ಅಂಶಗಳು ಬಹು ಆಯಾಮದ ಬಡತನ ಸೂಚ್ಯಂಕ ಮೇಲೆ ಆಧಾರಿತವಾಗಿದ್ದು, ಕೇವಲ ಆದಾಯ ಮಾತ್ರವಲ್ಲದೆ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವನ್ನು ಪರಿಗಣಿಸಿ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications