Get Updates
Get notified of breaking news, exclusive insights, and must-see stories!

Karnataka Rain: ಈ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಸಾಧ್ಯತೆ

ರಾಜ್ಯದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆಯಾಗಿದ್ದು ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸುತ್ತಿದೆ. ಆದರೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ರಾಜ್ಯದ 21 ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೋಮವಾರ ಸಂಜೆ ರಾಜ್ಯದ ವಿಜಯಪುರ, ರಾಯಚೂರು, ಕೊಪ್ಪಳ, ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಚದುರಿದಂತೆ ಉತ್ತಮ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 24.5 ಮಿಮೀ ಮಳೆಯಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ.

karnataka-rain

ರಾಯಚೂರು ಜಿಲ್ಲೆಯ ಮಾದಸಿರ್ವಾರ್, ಸಿಂಧನೂರು, ಗಾಣದಾಳ, ವಿಜಯಪುರ ಜಿಲ್ಲೆಯ ಹೊಸಪೇಟೆ, ಮಾದಭಾವಿ, ನಾಗೇನಹಳ್ಳಿ, ಆಲಿಯಾಬಾದ್, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಜಲಾಶಯ, ಹುಲಗಿ, ಕುಣಿಕೇರಿ, ಕಾಲಕೇರ, ಶಿರೂರು, ಧಾರವಾಡ ಜಿಲ್ಲೆಯ ವರೂರು, ಸಾಸ್ವಿಹಳ್ಳಿ, ಉಗ್ಗಿನಕೇರಿ, ಭದ್ರಾಪುರದಲ್ಲಿ ಉತ್ತಮ ಮಳೆತಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಹೇಳಿದೆ.

21 ಜಿಲ್ಲೆಗಳಿಗೆ ಸಾಧಾರಣ ಮಳೆ

ಶಿವಮೊಗ್ಗ, ಕೊಪ್ಪಳ, ರಾಯಚೂರು, ವಿಜಯನಗರ, ಧಾರವಾಡ, ಕಲಬುರಗಿ, ಬಳ್ಳಾರಿ, ವಿಜಯಪುರ, ಯಾದಗಿರಿ, ಉಡುಪಿ, ಬೆಳಗಾವಿ, ಬೀದರ್‍, ಮಂಡ್ಯ, ಗದಗ, ಬಾಗಲಕೋಟೆ, ಬೆಂಗಳೂರು ನಗರ, ಉತ್ತರ ಕನ್ನಡ, ಹಾವೇರಿ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೊಡಗು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆಯ ವರದಿಯಲ್ಲಿ ಮಾಹಿತಿ ನೀಡಿದೆ.

ಕಡಿಮೆಯಾದ ಮಳೆ ಹೆಚ್ಚಿದ ತಾಪಮಾನ

ಮಾನ್ಸೂನ್ ಮಳೆಯ ಕೊರತೆಯಿಂದಾಗಿ ಕರ್ನಾಟಕದಲ್ಲಿ ತಾಪಮಾನ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಭಾಗಗಳು ಬಹುತೇಕ ಬೇಸಿಗೆಯಂತಹ ಬಿಸಿಲಿಗೆ ಸಾಕ್ಷಿಯಾಗಿವೆ. ಜುಲೈನಲ್ಲಿ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ಕಾರಣ ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಆಗಸ್ಟ್‌ನಲ್ಲಿ ಮಳೆ ಮತ್ತೆ ಕೈಕೊಟ್ಟಿದೆ, 15 ದಿನಗಳಿಂದ ಮಳೆ ಕೊರತೆಯಾಗಿದೆ.

ಜುಲೈನಲ್ಲಿ ಹೆಚ್ಚುವರಿ ಮಳೆಯನ್ನು ದಾಖಲಿಸಿದ ನಂತರ, ಆಗಸ್ಟ್‌ನ ಆರಂಭದಿಂದ ಪರಿಸ್ಥಿತಿಗಳು ಮತ್ತೆ ಡ್ರೈಯರ್‌ಗೆ ತಿರುವು ಪಡೆದಿವೆ. ಈ ಬದಲಾವಣೆಯ ಬಹುಪಾಲು ಮಳೆ-ಅನುಕೂಲಕರ ಹವಾಮಾನ ವ್ಯವಸ್ಥೆಗಳ ವಿಶಿಷ್ಟ ಕೊರತೆಯನ್ನು ದೂಷಿಸಬಹುದು, ಇದು ಜುಲೈನಲ್ಲಿ ಹೆಚ್ಚಿನ ಮಳೆಯಿಂದ ಮುಚ್ಚಿಹೋಗಿತ್ತು, ಜೊತೆಗೆ ಮಾನ್ಸೂನ್ ತೊಟ್ಟಿ ತನ್ನ ಸಕ್ರಿಯ ಸ್ಥಿತಿಗೆ ಮರಳಲು ತುಂಬಾ ನಾಚಿಕೆಪಡುತ್ತದೆ.

ಕಳೆದ ಕೆಲವು ದಿನಗಳಿಂದ ಕರ್ನಾಟಕದ ಹಲವು ಭಾಗಗಳಲ್ಲಿ 30°ಸೆ. ಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನವು 35 ° ಸೆ. ಅನ್ನು ಮೀರಿದೆ, ಬೆಂಗಳೂರಿನಲ್ಲಿ 30 ° ಸೆ. ಗಿಂತ ಹೆಚ್ಚಿನ ಬೇಸಿಗೆಯ ತಾಪಮಾನವಿದೆ. ಕೊಡಗಿನಲ್ಲಿ ಮಾತ್ರ ಮೂವತ್ತರ ಕೆಳಗೆ ದಾಖಲಾಗಿದ್ದು, 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+